No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Sunday, August 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮುಗಿಲೆತ್ತರದ ಸಾಧನೆಗಳ ಸಾಧಕಿ ಮೇಘಶ್ರೀ ತುಳುನಾಡಿನ ಹೆಮ್ಮೆ

kalpa News by kalpa News
May 19, 2020
in Special Articles
0
ಮುಗಿಲೆತ್ತರದ ಸಾಧನೆಗಳ ಸಾಧಕಿ ಮೇಘಶ್ರೀ ತುಳುನಾಡಿನ ಹೆಮ್ಮೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸಾಧನೆ ಮಾತನಾಡಬೇಕು ಮಾತನಾಡುವುದು ಸಾಧನೆಯಾಗಬಾರದು ಎಂಬುದು ದಾರ್ಶನಿಕರ ವಾಕ್ಯ. ಅಪೂರ್ವಕ್ಕೊಮ್ಮೆ ಈ ಮಾರ್ಮಿಕವಾದ ವಾಕ್ಯ ಕೃತಿಯಾಗಿ ಎಲೆಮರೆಯ ಸುಮದಂತೆ ಮರ್ಮರಿಸಿ ಪರಿಮಿಳಿಸಿದಾಗಲೇ ಸುತ್ತಣ ಪ್ರಪಂಚಕ್ಕೆ ಗೋಚರಿಸುವುದು. ಸಾಸಿವೆಯನ್ನು ಪರ್ವತವೆಂಬಂತೆ ಬಣ್ಣಿಸುವ ಬಣ್ಣನೆಯ ಲೋಕದಲ್ಲಿ ನಿಜ ಸೌರಭ ಸೂಸುವ ವನಸುಮಗಳು ಜೈ ಪರಾಕು ಹೇಳುವವರ ಕಣ್ಣಿಗೆ ಕಾಣುವುದಿಲ್ಲ ಅಥವಾ ಹೇಳಿಕೆಗೆ ವಸ್ತು ಆಗುವುದಿಲ್ಲ. ಅದರೆ ವನಸುಮಗಳು ಯಾರು ಗಮನಿಸದಿದ್ದರೂ ತಮ್ಮಷ್ಟಕ್ಕೆ ತಾವು ಅರಳುತ್ತ ಪರಿಮಳವನು ಪಸರಿಸುತ್ತಲೇ ಇರುತ್ತವೆ. ಈ ತೆರನಾದ ವನಸುಮದಂತೆ ಎಲೆಮರೆಯಿಂದಲೇ ಅನನ್ಯ ಸಾಧನೆಗಳನ್ನು ಸಾಧಿಸುತ್ತಿರುವವರು ಕಟೀಲು ಸಮೀಪದ ಕೊಡೆತ್ತೂರಿನ ಕು. ಮೇಘಶ್ರೀ ಶೆಟ್ಟಿ.

ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಬಾಲ್ಯದಿಂದಲೇ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಮೇಘಶ್ರೀ ತಮ್ಮ ಎಂಟರ ವಯಸ್ಸಿನಲ್ಲಿ ಯಕ್ಷಹೆಜ್ಜೆಗೆ ಮಾರುಹೋಗಿ ಗೆಜ್ಜೆ ಕಟ್ಟಿದವರು. ಪೌರಾಣಿಕ ಪ್ರಸಂಗಗಳಾದ ’ಪಾಂಚಜನ್ಯ’ದ ಕೃಷ್ಣ, ’ತರಣಿಸೇನ ಕಾಳಗ’ದ ತರಣಿಸೇನ ’ಸುಧನ್ವಾರ್ಜುನ’ದ ಸುಧನ್ವ, ’ಸುದರ್ಶನ ವಿಜಯ’ ದ ಸುದರ್ಶನ ಮುಂತಾದ ಮುಖ್ಯ ಪಾತ್ರಗಳನ್ನು ಅಭಿನಯಿಸಿದವರು ಹಾಗೂ ಅನೇಕ ಸ್ಪರ್ಧಾತ್ಮಕ ಪ್ರದರ್ಶನಗಳನ್ನೂ ನೀಡಿದವರು.
ಮೂಡಬಿದ್ರೆ ಆಳ್ವಾಸ್ ಅವರ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಅಂತಾರಾಜ್ಯ ಮಟ್ಟದ ಮಕ್ಕಳ ಯಕ್ಷಗಾನ ಸ್ಪರ್ಧೆ ’ಯಕ್ಷಕಾರಂಜಿ’ಯಲ್ಲಿ ಸ್ಪರ್ಧಿಸಿ ದ್ವಿತೀಯ ಬಹುಮಾನ ಪಡೆದವರು. 2009-10ರ ಸಾಲಿನ ಮಕ್ಕಳ ತೆಂಕುತಿಟ್ಟು ಪ್ರದರ್ಶನದಲ್ಲಿ ’ಉತ್ತಮ ಅಭಿನಯ’ ಪ್ರಶಸ್ತಿ ಪಡೆದವರು. ದಕ್ಷಿಣ ಕನ್ನಡ ’ಕರಾವಳಿ ಉತ್ಸವ’ದಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ ಹಿರಿಮೆ ಮೇಘಶ್ರೀ ಅವರದ್ದು.


ಮೇಘಶ್ರೀ ಅವರು ಒಂಬತ್ತನೆಯ ಹರೆಯದಲ್ಲಿ, ಯೋಗ ಶಿಕ್ಷಕರಾದ ಹರಿರಾಜ್ ಶೆಟ್ಟಿಗಾರ್ ಅವರಲ್ಲಿ ಯೋಗಾಭ್ಯಾಸಕ್ಕೆ ತೊಡಗಿಕೊಂಡವರು. ಅವಕಾಶಗಳು ಬಾಗಿಲು ತಟ್ಟತೊಡಗಿದಾಗ ಕರ ಮುಗಿದು ಸದಾ ಸ್ವಾಗತಿಸಿದವರು ಮೇಘಶ್ರೀ. ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಟು ಬಾರಿ ಪ್ರಶಸ್ತಿ ಪಡೆದರೆ; ಜಿಲ್ಲಾ ಮಟ್ಟದಲ್ಲಿ ನಾಲ್ಕು ಬಾರಿ ಪ್ರಶಸ್ತಿ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಯಾಗಿ ಎರಡು ಸಲ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 2012 ರಲ್ಲಿ ನಡೆದ ’ಮುಕ್ತ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ. 2016-17ನೆಯ ಸಾಲಿನಲ್ಲಿ ಕಲ್ಲಡ್ಕದಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬಹುಮಾನಿತರಾಗಿ, ಬಳ್ಳಾರಿಯಲ್ಲಿ ನಡೆದಿದ್ದ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅನಂತರ ಕಿನ್ನಿಗೋಳಿ ರೋಟರಿ ಕ್ಲಬ್ ಆಯೋಜಿಸಿದ್ದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕಾಟಿಪಳ್ಯದಲ್ಲಿ ನಡೆದ ಸಾರ್ವಜನಿಕ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವರು. ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಅದ್ವಿತೀಯ ಯೋಗಪಟು ಎಂದು ಗೌರವಿಸಲ್ಪಟ್ಟಿದ್ದಾರೆ.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ಆಯೋಜಿಸಿದ್ದ ’ನನ್ನಲ್ಲಿ ಅನನ್ಯ’ (Unique in me) ಸ್ಪರ್ಧೆಯಲ್ಲಿ ನಲ್ವತ್ತು ವೈವಿಧ್ಯಮಯ ಪ್ರತಿಭೆಗಳೊಂದಿಗೆ ಮೇಘಶ್ರೀ ಅವರು ಯೋಗಾಸನ ಪ್ರದರ್ಶಿಸಿ 20,000 ರೂ. ಗಳ ನಗದು ಬಹುಮಾನ ಪಡೆದು ’ಬಂಗಾರದ ಹುಡುಗಿ’ ಎಂದು ಪುರಸ್ಕೃತರಾಗಿದ್ದಾರೆ. 2019 ರಲ್ಲಿ ಬಂಟ್ವಾಳದಲ್ಲಿ ನಡೆದ ’ಮುಕ್ತ ರಾಜ್ಯ ಮಟ್ಟದ’ ಯೋಗಾಸನ ಸ್ಪರ್ಧೆಯಲ್ಲಿ ಬಹುಮಾನಿತರಾಗಿದ್ದು, ಮೋತಿಮಹಲ್ ಹೋಟೆಲ್ ಮ್ಯಾನೇಜ್ಮೆಂಟ್ ಇವರು ಸಂಘಟಿಸಿದ್ದ ಪ್ರತಿಭಾನ್ವೇಷಣೆ (Talent Trace) 2020 ಅಂತರ- ಕಾಲೇಜು ಸ್ಪರ್ಧೆಯಲ್ಲಿ ’60 Second Frame’ ವಿಭಾಗದಲ್ಲಿ ಯೋಗಾಸನ ಮಾಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೇ, ಯೋಗಾಸನ ಪ್ರದರ್ಶನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ, ಚಿಕ್ಕಮಗಳೂರು, ಬಳ್ಳಾರಿ ಮುಂತಾದ ಜಿಲ್ಲೆಗಳಿಗೂ ವಿಸ್ತರಿಸಿದ್ದಾರೆ.

ಮೇಘಶ್ರೀ ಅವರು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧಿಸಿರುವ ಸಾಧನೆಗಳೊಂದಿಗೆ ವಿದ್ಯಾಭ್ಯಾಸವನ್ನು ಕಡೆಗಣಿಸಿದವರಲ್ಲ. 2014-15ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ಯ ಭಾಷೆ ಕನ್ನಡದಲ್ಲಿ 121/125 ಅಂಕಗಳನ್ನು ಪಡೆಯುವ ಮೂಲಕ ಸಾಂಸ್ಕೃತಿಕ ಕಲಾ ಕೇಂದ್ರ ಪುತ್ತೂರು ಇವರಿಂದ ’ಕನ್ನಡ ಕೌಸ್ತುಭ’ ಪ್ರಶಸ್ತಿ ಪಡೆದಿದ್ದಾರೆ. ’ಗಡಿನಾಡ ಮಾಸ ಪತ್ರಿಕೆ’ ಆಶ್ರಯದಲ್ಲಿ ನಡೆದ ಕರ್ನಾಟಕ ಗಡಿನಾಡ ಸಮ್ಮೇಳನ – 2016ರಲ್ಲಿ ’ಕನ್ನಡ ಧ್ವನಿ’ ಎಂಬ ಪ್ರತಿಷ್ಠಿತ ಬಿರುದಿಗೆ ಭಾಜನರಾಗಿದ್ದಾರೆ. 2019ರಲ್ಲಿ ’ಸುರಸರಸ್ವತಿ ಸಭಾ, ಶೃಂಗೇರಿ’ ಇವರು ಏರ್ಪಡಿಸಿದ್ದ ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಮಂಗಳೂರು ಕೆನರಾ ಕಾಲೇಜನ್ನು ಪ್ರತಿನಿಧಿಸಿದ ಮೇಘಶ್ರೀ ಅವರು 144/150 ಅಂಕಗಳನ್ನು ಪಡೆದು ವಿಶೇಷ ಯೋಗ್ಯತಾ ಶ್ರೇಣಿಯೊಂದಿಗೆ ರಜತ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಮೇಘಶ್ರೀ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಲ್ಲಂಜೆಯಿಂದ ಪಡೆದಿರುವರು. ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಮುಂದಿನ ವ್ಯಾಸಂಗವನ್ನು ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಗಳಿಸಿದ ಮೇಘಶ್ರೀ ಇಂಜಿನಿಯರಿಂಗ್ ಮಾಡಬಹುದಿತ್ತು. ಆದರೆ ಯೋಗವಿದ್ಯೆಯಲ್ಲಿ ಏನಾದರೂ ಸಾಧನೆ ಮಾಡುವ ಪ್ರಬಲವಾದ ಒಳ ತುಡಿತದಿಂದ ಮಂಗಳೂರಿನ ಪ್ರತಿಷ್ಠಿತ ಕೆನರಾ ಕಾಲೇಜಿನಲ್ಲಿ ಬಿಎಸ್ಸಿ ಪದವಿಗೆ ಸೇರಿ ಇದೀಗ ಅಂತಿಮ ವರ್ಷದಲ್ಲಿದ್ದಾರೆ. ಶಾಲೆ, ಕಾಲೇಜುಗಳ ನಿಗದಿತ ಮತ್ತು ನಿಯಮಿತ ಅಧ್ಯಯನ, ಯೋಗ ಶಿಕ್ಷಣ, ಯಕ್ಷಗಾನಗಳಿಗೆ ಸೀಮಿತಗೊಳ್ಳದ ಈಕೆ ನೃತ್ಯ, ಚಿತ್ರಕಲೆ, ಭಾಷಣ, ಪ್ರಬಂಧ ಬರವಣಿಗೆ ಕಾರ್ಯಕ್ರಮ ನಿರೂಪಣೆ, ಕಲಾತ್ಮಕವಾಗಿ ಮೆಹಂದಿ ರಚನೆ ಮೊದಲಾದ ಲಲಿತ ಕಲೆಗಳಿಗೂ ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಂಡಿರುವುದು ಕೇಳುಗರ ಕೌತುಕವನ್ನು ಉತ್ತೇಜಿಸುತ್ತದೆ.

ಮುಂದೆ ಯೋಗ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಆಶಿಸುವ ಇವರಿಗೆ ಹೆತ್ತವರ ಉತ್ತೇಜನ ಮತ್ತು ಹಾರೈಕೆಗಳು ಸದಾ ಬೆಂಗಾವಲಿಗಿವೆ. ಕೊಡೆತ್ತೂರು ಕವಿತಾ ಶೆಟ್ಟಿ ಮತ್ತು ದಯಾನಂದ ಶೆಟ್ಟಿ ಅವರ ಮುದ್ದಿನ ಮೊದಲ ಮಗಳು ಮೇಘಶ್ರೀ. ಇವರ ಅನುಜೆ ಕು. ಪ್ರೀತಿಕಾ ಶೆಟ್ಟಿ. ಗುರುಹಿರಿಯರ, ತಂದೆ ತಾಯಿಗಳ, ಬಂಧು ಬಾಂಧವರ, ಹಿತೈಷಿಗಳ ಹಾರೈಕೆ ಆಶೀರ್ವಾದಗಳಿಂದಲೂ, ತನ್ನ ಎಡೆಬಿಡದ ಪರಿಶ್ರಮದಿಂದಲೂ ಮೇಘಶ್ರೀ ಅವರ ಸಾಧನೆಗಳು ಗರಿಗೆದರಿ ಮುಗಿಲೆತ್ತರದಲ್ಲಿ ಹಾರಾಡಲಿ. ಈ ವನಸುಮದ ಸೌರಭ ನಾಲ್ದೆಸೆಗೂ ಪಸರಿಸಲಿ. ಇನ್ನೂ ನೂರಾರು ಮೈಲುಗಲ್ಲುಗಳನ್ನು ಕ್ರಮಿಸಲಿ. ತನ್ಮೂಲಕ ಭವಿತವ್ಯದ ಬದುಕು ಹಸನಾಗಲಿ ಎಂದು ಆಶಿಸೋಣ.

ಲೇಖನ: ಕಿರಣ್ ಶೆಟ್ಟಿ ಅತ್ತೂರ್
ಸಹಕಾರ: ಉದಯ ಶೆಟ್ಟಿ ಪಂಜಿಮಾರ್

Get in Touch With Us info@kalpa.news Whatsapp: 9481252093

Tags: KannadaNewsWebsiteMeghashreeSpecial Articleಕಟೀಲು ಶ್ರೀದುರ್ಗಾಪರಮೇಶ್ವರಿಮೇಘಶ್ರೀಯಕ್ಷ ಕಾರಂಜಿಯಕ್ಷಗಾನಯೋಗ ಶಿಕ್ಷಣ
Share266Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಉಪನಯನ ಎಂದರೇನು? ಲೇಖನ ಸರಣಿ-3: ಚಿತ್ರಾವತಿ ಹೇಗೆ? ಎಷ್ಟು ಬಲಿ ಹಾಕಬೇಕು?

Next Post

ಶಿವಮೊಗ್ಗ-ಬೆಂಗಳೂರು ಬಸ್: ಇಂದು, ನಾಳೆಯ ಎಲ್ಲ ಟಿಕೇಟ್ ಸೋಲ್ಡ್‌ ಔಟ್

kalpa News

kalpa News

Next Post

ಶಿವಮೊಗ್ಗ-ಬೆಂಗಳೂರು ಬಸ್: ಇಂದು, ನಾಳೆಯ ಎಲ್ಲ ಟಿಕೇಟ್ ಸೋಲ್ಡ್‌ ಔಟ್

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL