Friday, October 3, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಿಜೋರಾಂ | ದುರ್ಗಮ ಪ್ರದೇಶದ ಕಷ್ಟ ಮೆಟ್ಟಿ ದಾಖಲೆ ಬರೆದ ಭಾರತೀಯ ರೈಲ್ವೆ | ಎದುರಿಸಿದ ಸವಾಲುಗಳೇನು?

September 9, 2025
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಮಿಜೋರಾಂನಿಂದ ಪ್ರತ್ಯಕ್ಷ ವರದಿ-2  |

ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರು, ದಟ್ಟ ಕಾನನ, ಭಯಾನಕ ಪ್ರಪಾತಗಳು ಹಾಗೂ ದುರ್ಗಮ ಪ್ರದೇಶ. ಅದೇ ಈಶಾನ್ಯ ಪ್ರದೇಶದ ಮಿಜೋರಾಂ ಎಂಬ ಪುಟ್ಟ ರಾಜ್ಯ. ಇಲ್ಲಿ ನಮ್ಮ ಹೆಮ್ಮೆಯ ರೈಲ್ವೆ ಇಂಜಿನಿಯರ್’ಗೆ ಸೃಷ್ಠಿಸಿರುವ ಒಂದು ಅದ್ಭುತವೇ ಸೈರಾಂಗ್ – ಬೈರಾಬಿ ಬ್ರಾಡ್ ಗೇಜ್ ಮಾರ್ಗ.

ಹೌದು… ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ, ಪ್ರಾಕೃತಿಕ ಸೊಬಗನ್ನು ಹೊದ್ದುಕೊಂಡಿದ್ದರೂ, ಈಶಾನ್ಯ ರಾಜ್ಯಗಳಲ್ಲೇ ಅತಿ ಹಿಂದುಳಿದ ಮಿಜೋರಾಂನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಮುಖವಾಗಿ, ಮಿಜೋರಾಂನ ಸಮಗ್ರ ಅಭಿವೃದ್ಧಿಯ ಭಾಗವಾಗಿ ಈ ರಾಜ್ಯದ ರಾಷ್ಟ್ರೀಯ ಸಂಪರ್ಕವನ್ನು ವಿಸ್ತರಿಸಲು ಸೈರಾಂಗ್ – ಬೈರಾಬಿ ನೂತನ ಬ್ರಾಡ್ ಗೇಜ್ ರೈಲು ಮಾರ್ಗವನ್ನು ನಿರ್ಮಿಸಿದೆ. ಈ ಮೂಲಕ ಸ್ಥಳೀಯರ 26 ವರ್ಷಗಳ ಕನಸನ್ನು ನನಸಾಗಿಸಿದೆ.

ಸಮುದ್ರ ಮಟ್ಟದಿಂದ 900 ಮೀಟರ್, ಭೂಮಿಯ ಸಮತಟ್ಟಿನಿಂದ 2,165 ಮೀಟರ್ ಎತ್ತರ ಪ್ರದೇಶದಲ್ಲಿರುವ ಈ ಪ್ರದೇಶದಲ್ಲಿ ರೈಲ್ವೆ ಮಾರ್ಗ ನಿರ್ಮಿಸುವುದು ಅತ್ಯಂತ ಸಾಹಸವಾದ ಕೆಲಸವಾಗಿತ್ತು. ಅಲ್ಲಿರುವ ಬೆಟ್ಟುಗಳು ಹಾಗೂ ಕಣಿವೆಗಳ ನಡುವೆ ರೈಲ್ವೆ ಯೋಜನೆ ಜಾರಿಗೊಳಿಸುವ ವೇಳೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೀವವನ್ನೇ ಒತ್ತೆಯಿಟ್ಟಿದ್ದಾರೆ.

  • 70 ಮೀಟರ್’ಗಿಂತಲೂ ಎತ್ತರದ 6 ಸೇತುವೆಗಳು (ಗರಿಷ್ಠ 114 ಮೀ)
  • ದುರ್ಗಮ ಸವಾಲಿನ ಭೂವೈಜ್ಞಾನಿಕ ಪರಿಸ್ಥಿತಿಗಳಲ್ಲಿ 45 ಸುರಂಗಗಳು
  • ಎಲ್ಲಾ ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಅಳವಡಿಕೆ
  • ಒಟ್ಟು ಸೇತುವೆಗಳ ಉದ್ದ – 11.78 ಕಿ.ಮೀ (23%)
  • ಒಟ್ಟು ಸೇತುವೆಗಳು – 153
  • ಸಣ್ಣ ಸೇತುವೆಗಳು – 88
  • ಆರ್’ಒಬಿ ಮತ್ತು ಆರ್’ಯುಬಿ – 10
  • ದೊಡ್ಡ ಸೇತುವೆಗಳು – 55
  • ಮಾರ್ಗದ ಒಟ್ಟು ಸುರಂಗಗಳು – 45
  • ಸುರಂಗಗಳ ಒಟ್ಟು ಉದ್ದ – 15.885 ಕಿ.ಮೀ (31%)
  • ಅತಿದೊಡ್ಡ ಸುರಂಗ – 1.868 ಕಿ.ಮೀ

ಸೇತುವೆಗಳಲ್ಲಿ, ಸೈರಾಂಗ್ ಬಳಿಯ ಕುರುಂಗ್ ನದಿಯ ಮೇಲಿನ ಸೇತುವೆ ಸಂಖ್ಯೆ 144 ವಿಶ್ವದ ಎರಡನೇ ಅತಿ ಎತ್ತರದ ಪಿಯರ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನೆಲದಿಂದ 114 ಮೀಟರ್ ಎತ್ತರದಲ್ಲಿದೆ.

ನೆರೆಯ ಮಣಿಪುರದಲ್ಲಿರುವ ನೋನಿ ಸೇತುವೆ ಅತಿ ಎತ್ತರವಾಗಿದ್ದು, 141 ಮೀಟರ್ ಎತ್ತರವಿದೆ, ಇದನ್ನು ನಿರ್ಮಾಣ ಹಂತದಲ್ಲಿರುವ 111-ಕಿಮೀ ಜಿರಿಬಮ್-ಇಂಫಾಲ್ ರೈಲು ಮಾರ್ಗದ ಭಾಗವಾಗಿ ನಿರ್ಮಾಣವಾಗಿದೆ.

ಏನೆಲ್ಲಾ ಸವಾಲುಗಳು ಎದುರಾಗಿದ್ದವು?
ಬೈರಾಬಿ-ಸೈರಾಂಗ್ ಮಾರ್ಗವನ್ನು ನಿರ್ಮಿಸುವಾಗ ರೈಲ್ವೆಗಳು ಕಠಿಣವಾದ ಇಂಡೋ-ಬರ್ಮೀಸ್ ಟೆಕ್ಟೋನಿಕ್ ಭೂಪ್ರದೇಶವನ್ನು ಹೊಂದಿದ್ದರಿಂದ, ಕಡಿದಾದ ಇಳಿಜಾರುಗಳು, ಆಳವಾದ ಕಣಿವೆಗಳು ಮತ್ತು ಸವೆತಕ್ಕೆ ಒಳಗಾಗುವ ದುರ್ಬಲವಾದ, ಜೇಡಿಮಣ್ಣಿನಂತಹ ಮಣ್ಣಿನಿಂದ ಕೂಡಿರುವ ಕಾರಣ, ನಿರ್ಮಾಣದ ವೇಳೆ ದೊಡ್ಡ ಸವಾಲುಗಳನ್ನು ತಂಡ ಎದುರಿಸಬೇಕಾಯಿತು.

ಐಐಟಿ ಗುವಾಹಟಿ ಮತ್ತು ಐಐಟಿ ರೂರ್ಕಿಯಿಂದ ವಿನ್ಯಾಸ ಮತ್ತು ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದ ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಸಂಸ್ಥೆಯಾದ ಈಶಾನ್ಯ ಗಡಿನಾಡು ರೈಲ್ವೆ (ನಿರ್ಮಾಣ), 223 ಕಿಮೀ ಸಂಪರ್ಕ ರಸ್ತೆಗಳನ್ನು ಸಹ ನಿರ್ಮಿಸಿದೆ.

ಹಳಿ ನಿರ್ಮಾಣಕ್ಕಾಗಿ ಗುಡ್ಡ ಅಗೆಯುವುದು, ಪಿಯರ್(ಕಂಬ) ನಿರ್ಮಾಣದ ಹಂತಕ್ಕೆ ತಲುಪುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಇಲ್ಲಿನ ಬಹುತೇಕ ಪ್ರದೇಶಗಳಿಗೆ ರಸ್ತೆ ಸಂಪರ್ಕವೇ ಇರಲಿಲ್ಲ. ಹೀಗಾಗಿ, ಎನ್’ಎಫ್’ಆರ್ ವತಿಯಿಂದ ಇಲ್ಲಿನ 23 ಕಿಲೋ ಮೀಟರ್ ರಸ್ತೆ ನಿರ್ಮಿಸಲಾಯಿತು. ಇದು ಅಂದಿನಿಂದ ಕೊಲಾಸಿಬ್ ಮತ್ತು ಐಜ್ವಾಲ್ ಜಿಲ್ಲೆಗಳ ಹಲವಾರು ಹಳ್ಳಿಗಳಿಗೆ ಪ್ರಯೋಜನವನ್ನು ನೀಡಿದೆ.

ಇನ್ನು, ಈ ಪ್ರದೇಶದಲ್ಲಿ ಪ್ರತಿ ವರ್ಷ ಕೇವಲ 4-5 ತಿಂಗಳು ಅಂದರೆ ನವೆಂಬರ್’ನಿಂದ -ಮಾರ್ಚ್’ವರೆಗೆ ಮಾತ್ರ ಇಲ್ಲಿ ಕೆಲಸ ನಿರ್ವಹಿಸುವುದು ಸಾಧ್ಯವಾಗಿತ್ತು. ಏಪ್ರಿಲ್-ಅಕ್ಟೋಬರ್’ಗಳು ಭಾರಿ ಮಳೆಯಿಂದ ಕಾರ್ಯ ನಿಂತುಹೋಗುತ್ತದೆ.ದುರ್ಗಮವಾದ ಗುಡ್ಡಗಾಡು, ಕಣಿವೆ, ಆಳವಾದ ಕಣಿವೆಗಳಲ್ಲಿ ಸುರಂಗಗಳು ಮತ್ತು ಎತ್ತರದ ಸೇತುವೆಗಳು ನಿರ್ಮಾಣಗಳು ಕಷ್ಟದಾಯಕವಾಗಿತ್ತು.

ಶೇಲ್, ಸಿಲ್ಟ್ಸ್ಟೋನ್, ಸ್ಯಾಂಡ್ಸ್ಟೋನ್ ಹಗುರ ಕಲ್ಲುಗಳು ನೀರು ನುಗ್ಗುವಿಕೆ ಮತ್ತು ಕುಸಿತಕ್ಕೆ ಕಾರಣವಾಗುತ್ತವೆ. ಅಲ್ಲದೇ, ಕೆಲಸದ ಸ್ಥಳಗಳಿಗೆ ಹೋಗುವ ರಸ್ತೆಗಳಲ್ಲಿ ಭೂಕುಸಿತ ಸಾಮಾನ್ಯ. ಸಣ್ಣ ಮಳೆಯಾದರೂ ರಸ್ತೆ ಜಾರಿ ಹೋಗಿ ಜನರು ಮತ್ತು ಸಾಮಗ್ರಿಗಳ ಚಲನೆ ಅಸಾಧ್ಯವಾಗಿತ್ತು.

ಇದರ ಜೊತೆಯಲ್ಲಿ ಕಾಮಗಾರಿಗೆ ಸ್ಥಳೀಯ ಕಾರ್ಮಿಕರ ಕೊರತೆಯಿತ್ತು. ಹೀಗಾಗಿ ಇತರ ರಾಜ್ಯಗಳಿಂದ ಕಾರ್ಮಿಕರನ್ನು ತರಬೇಕಾಯಿತು. ಕಾಮಗಾರಿಗೆ ಅಗತ್ಯವಾಗಿದ್ದ ಮರಳು, ಕಲ್ಲು ಮುಂತಾದ ಸಾಮಗ್ರಿಗಳು ಮಿಜೋರಾಂನಲ್ಲಿ ಲಭ್ಯವಿಲ್ಲ. ಹೀಗಾಗಿ, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಹಾಗೂ ಇತರ ರಾಜ್ಯಗಳಿಂದ ತರಬೇಕಾಗಿತ್ತು.

ಸ್ಥಳೀಯ ಪ್ರತಿರೋಧವನ್ನು ಪರಿಹರಿಸಲು, ರೈಲ್ವೆ ಇಲಾಖೆ ಅಂತಿಮವಾಗಿ ಮಿಜೋರಾಂನ ಸ್ಥಳೀಯ ಜನರನ್ನು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿತು.

ಈ ಪ್ರದೇಶದಲ್ಲಿ ವರ್ಷಕ್ಕೆ ಕೇವಲ 6-7 ತಿಂಗಳುಗಳ ಕೆಲಸದ ಅವಧಿ ಕಡಿಮೆ ಇದ್ದ ಕಾರಣ ಯೋಜನೆಯು ನಿಧಾನಗತಿಯಲ್ಲಿ ಪ್ರಗತಿ ಕಂಡಿತು. ಹೆಚ್ಚಿನ ವೇತನದ ಹೊರತಾಗಿಯೂ, ದೂರದ ಸ್ಥಳ ಮತ್ತು ಕೆಲಸದ ಸ್ಥಳಗಳಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆಯಿಂದಾಗಿ ಅನೇಕ ಕಾರ್ಮಿಕರು ಯೋಜನೆಯನ್ನು ತೊರೆದಿದ್ದಾರೆ.

ಪರ್ವತ ಪ್ರದೇಶಗಳಾದ ಇಲ್ಲಿ ಈ ರೀತಿ ಸಾಮಗ್ರಿಗಳನ್ನು ಒದಗಿಸಿಕೊಂಡು ನಿರ್ಮಾಣ ಮಾಡಿರುವುದೇ ಒಂದು ಸಾಹಸವಾಗಿದೆ.

ನಾಳೆ: ಮಿಜೋರಾಂ | ಈಶಾನ್ಯ ರಾಜ್ಯವೊಂದರಲ್ಲಿ ರೈಲ್ವೆ ಇಂಜಿನಿಯರಿಂಗ್ ಅದ್ಭುತ | ಯಾಕಿಷ್ಟು ಮಹತ್ವ?

(ಸೈರಾಂಗ್-ಬೈರಾಬಿ ನಡುವಿನ ಈ ಯೋಜನೆಯ ಪ್ರತ್ಯಕ್ಷ ಅನುಭವ ಪಡೆಯಲು ಭಾರತೀಯ ರೈಲ್ವೆ ಆಯೋಜಿಸಿದ್ದ ಮೂರು ದಿನಗಳ ಕ್ಷೇತ್ರ ಭೇಟಿಯಲ್ಲಿ ಕಲ್ಪ ನ್ಯೂಸ್ ಸಂಪಾದಕರು ಪಾಲ್ಗೊಂಡಿದ್ದ ಖುದ್ಧು ಅನುಭವದ ಲೇಖನ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: BangladeshBirobiIndian RailwayIRCTCKannada News WebsiteLatest News KannadaMizoramNortheast Frontier RailwaySairangಈಶಾನ್ಯ ರಾಜ್ಯಕಾನನಕೇಂದ್ರ ಸರ್ಕಾರಪಿಯರ್ಪ್ರಧಾನಿ ನರೇಂದ್ರ ಮೋದಿಪ್ರಪಾತಬಾಂಗ್ಲಾದೇಶಬೈರಾಬಿಬ್ರಾಡ್ ಗೇಜ್ಮಿಜೋರಾಂಮ್ಯಾನ್ಮಾರ್ರೈಲ್ವೆಸಮುದ್ರ ಮಟ್ಟಸುರಂಗಸೇತುವೆಸೈರಾಂಗ್
Previous Post

ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಅಭಿಷೇಕ್ ಅಧಿಕಾರ ಸ್ವೀಕಾರ

Next Post

ಸುಬ್ರೋತೋ ಕಪ್ (U-15): ಫೈನಲ್ ಪ್ರವೇಶಿಸಿದ ಮಿನರ್ವಾ ಪಬ್ಲಿಕ್ ಸ್ಕೂಲ್ ಮತ್ತು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸುಬ್ರೋತೋ ಕಪ್ (U-15): ಫೈನಲ್ ಪ್ರವೇಶಿಸಿದ ಮಿನರ್ವಾ ಪಬ್ಲಿಕ್ ಸ್ಕೂಲ್ ಮತ್ತು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬಿಜೆಪಿ ವಿರುದ್ಧ ಸುಮೊಟೋ ಕೇಸ್ ದಾಖಲಿಸಬೇಕು: ಸಚಿವ ಮಧುಬಂಗಾರಪ್ಪ ಮನವಿ

October 3, 2025

ಮಹಾತ್ಮ ಗಾಂಧೀಜಿ – ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕೊಡುಗೆ ಸ್ಮರಣೀಯ: ಬೇಲಾ ಮೀನಾ

October 3, 2025

ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ರೈಲ್ವೆ ಸಂಚಲನ | ಎಷ್ಟು ದೇಶಗಳಿಗೆ ರೈಲ್ವೆ ಉಪಕರಣ ರಫ್ತಾಗುತ್ತಿದೆ ಗೊತ್ತಾ?

October 3, 2025

ಸಿರುಗುಪ್ಪ | ವಿಜೃಂಭಣೆಯ ಮಾರಿಕಾಂಬಾ ರಥೋತ್ಸವ ಸಂಪನ್ನ

October 3, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬಿಜೆಪಿ ವಿರುದ್ಧ ಸುಮೊಟೋ ಕೇಸ್ ದಾಖಲಿಸಬೇಕು: ಸಚಿವ ಮಧುಬಂಗಾರಪ್ಪ ಮನವಿ

October 3, 2025

ಮಹಾತ್ಮ ಗಾಂಧೀಜಿ – ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕೊಡುಗೆ ಸ್ಮರಣೀಯ: ಬೇಲಾ ಮೀನಾ

October 3, 2025

ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ರೈಲ್ವೆ ಸಂಚಲನ | ಎಷ್ಟು ದೇಶಗಳಿಗೆ ರೈಲ್ವೆ ಉಪಕರಣ ರಫ್ತಾಗುತ್ತಿದೆ ಗೊತ್ತಾ?

October 3, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!