ಅಮೃತ್ ಸರ್: ಶರನ್ನವರಾತ್ರಿ ಅಂಗವಾಗಿ ಇಂದು ವಿಜಯದಶಮಿ ಆಚರಣೆಯ ಹಿನ್ನೆಲೆಯಲ್ಲಿ ರಾವಣ ದಹನ ಮಾಡುತ್ತಿದ್ದ ವೇಳೆ ರೈಲು ಹರಿದು 50 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ಪಂಜಾಬ್ನಲ್ಲಿ ನಡೆದಿದೆ.
#WATCH The moment when the DMU train 74943 stuck people watching Dussehra celebrations in Choura Bazar near #Amritsar (Source:Mobile footage-Unverified) pic.twitter.com/cmX0Tq2pFE
— ANI (@ANI) October 19, 2018
ಪಂಜಾಬ್ನ ಅಮೃತ್ ಸರದಲ್ಲಿ ಈ ಭೀಕರ ಘಟನೆ ನಡೆದಿದ್ದು, ರಾವಣ ದಹನ ನೋಡಲು ಸುಮಾರು 500 ರಿಂದ 700 ಮಂದಿ ರೈಲು ಹಳಿಗಳ ಮೇಲೆ ನಿಂತಿದ್ದರು. ಈ ವೇಳೆ ರೈಲು ವೇಗವಾಗಿ ಆಗಮಿಸಿದ್ದು, ಇದನ್ನು ಜನರು ಗಮನಿಸಿಲ್ಲ. ರೈಲು ಹಳಿಗಳ ಮೇಲೆ ನಿಂತಿದ್ದ ಜನರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ 50 ಮಂದಿ ಸಾವನ್ನಪ್ಪಿದ್ದು, ಹಲವು ಭೀಕರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದರಿಂದ ಈ ಸದ್ದಿಗೆ ರೈಲು ಬರುವ ಶಬ್ದ ಕೇಳಿಲ್ಲ ಎನ್ನಲಾಗಿದೆ.
#Punjab: Visuals from Civil Hospital in #Amritsar where those injured in the train accident are being brought for treatment. pic.twitter.com/xbRruNOEmF
— ANI (@ANI) October 19, 2018
ರಕ್ಷಣಾ ಕಾರ್ಯಾಚರಣೆ ತುರ್ತುಗತಿಯಲ್ಲಿ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Discussion about this post