No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Sunday, April 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ತಾಯಿ ಭಾರತಿ ಅಕ್ಷತಾ ನಿಮಗೊಂದು ಸಾಷ್ಟಾಂಗ ಪ್ರಣಾಮಗಳು

ಪೆಣ್ಣಲ್ಲವೇ ಎಮ್ಮ ಪೆತ್ತವಳು, ಅಂತಾರಾಷ್ಟ್ರೀಯ ಮಹಿಳಾ ದಿನ ಈ ಲೇಖನ ಓದದಿದ್ದರೆ ಅಪೂರ್ಣವೇ ಹೌದು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 8, 2020
in ಸಚಿನ್ ಪಾರ್ಶ್ವನಾಥ್
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮಹಿಳೆಯರ ದಿನ! ಅವರಿಗೆಂತಹ ದಿನ? ಭುಜಂಗ ಇದರ ಬಗ್ಗೆ ಉಗ್ರ ಹೋರಾಟ ಮಾಡ್ಲಿಕ್ಕುಂಟು ಅಲ್ವನ? ಅಹುದು ಇಂದು ಮೊದಲ ಉಸಿರಿನಿಂದ ಹಿಡಿದು ಕಟ್ಟ ಕಡೆಯ ಎದೆಯ ಬಡಿತದ ತನಕ ಜೀವ ತುಂಬುವ ತಾಯಂದಿರ ದಿನ.

ಮಹಿಳೆ – ತಾಯಿ, ಅಜ್ಜಿ, ಅಕ್ಕ, ತಂಗಿ, ಪತ್ನಿ, ಮಗಳು ಹೀಗೆ ಒಂದು ಬದುಕಿನಲ್ಲಿ ಅದೆಷ್ಟು ಅವತಾರಗಳಲ್ಲಿ ಬರುವರೋ ಆ ದೇವರೇ ಬಲ್ಲ. ಅದರಲ್ಲೂ ಕೆಲವು ಗಟ್ಟಿಗಿತ್ತಿಯರು ಇರುತ್ತಾರೆ. ಕಷ್ಟಗಳೆಲ್ಲಾ ಅವರನ್ನು ನೋಡುತ್ತ ಕೈ ಹಿಸುಕಿಕೊಳ್ಳುತ್ತಾ ಕುಳಿತಿರುತ್ತವೆ ಕೈಲಾಗದೆ. ಬದುಕು ಕೆಟ್ಟು ನಿಂತಾಗೆಲ್ಲ ಜಾಡಿಸಿ, ಕೊಡವಿ ಮತ್ತೆ ನವಿರು ನಂಬಿಕೆಯಿತ್ತು ಮತ್ತೆ ಚಲಾಯಿಸುವವರು. ಅವರನ್ನು ತುಂಬಾ ಜನರನ್ನು ನೋಡಿದ್ದೇನೆ. ಮತ್ತು ಸದಾ ಅಂತಹವರನ್ನು ಹುಡುಕುತ್ತೇನೆ ಕೂಡ.

ಪ್ರತಿ ಉಸಿರಿನಲ್ಲೂ ಎಡತಾಕುತ್ತಲೇ ಇರುವ ಜೀವ ಹಿಂಡುವ ನೋವಿಗೆ ಬೆನ್ನು ಹಾಕಿ ನಿಂತು ನಗುತ್ತ ನಿಂತವಳ ನೋಡಿದ್ದೇನೆ, ನೋವಿನ ಮೇಲೆ ನೋವುಂಡರೂ ಕನಸಿನ ರೆಕ್ಕೆ ಕಟ್ಟಿಕೊಂಡು ಜಯಿಸಿ ಬಾನೆತ್ತರಕ್ಕೆ ಜಿಗಿದವರ ನೋಡಿದ್ದೇನೆ, ಗಂಡ ಜವಾಬ್ದಾರಿ ಮರೆತಾಗ ಸಮಯಕ್ಕೆ ಸವಾಲು ಹಾಕಿ ದುಡಿದವರ ನೋಡಿದ್ದೇನೆ, ಎಳೆಯ ಹರೆಯಕ್ಕೆ ವಿವಾಹವಾಗಿ ವಾರ್ಷಿಕೋತ್ಸವಗಳ ಪರಿವೆಯೂ ಇಲ್ಲದೆ ನೆರಳಾಗಿ ನಿಂತು ಬದುಕುವವರ ನೋಡಿದ್ದೇನೆ. ಹೆಣ್ಣೆಂದರೆ ಬರೀ ತಾಯಲ್ಲ, ಅದೊಂದು ಜಗತ್ತು. ನೀವು ಜಗತ್ತಿಗೆ ಸವಾಲು ಹಾಕಲು ಸಾಧ್ಯವಿದೆ ಎಂದಾದರೆ ಒಂದೋ ನೀವು ಸ್ತ್ರೀಯಾಗಿರಬೇಕು. ಅಥವಾ ನಿಮ್ಮ ಜೊತೆಗೆ ಜೀವಕ್ಕೆ ಜೀವ ಎನ್ನುವ ಸ್ತ್ರೀ ಇರಬೇಕು.

ಅಂತಹ ಗಟ್ಟಿಗಿತ್ತಿಯರಲ್ಲಿ ಒಬ್ಬರು ಅಕ್ಷತಾ. ಇವತ್ತು ಅವರ ಮೃದು ಮನಸ್ಸಿನ ಕುರಿತು ಒಂದಷ್ಟು ಮಾತು. ವೃತ್ತಿಯಿಂದ ಬ್ಯಾಂಕ್ ಉದ್ಯೋಗಿ. ಮನದಲ್ಲಿ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ತುಡಿತ. ಸ್ವಾಮಿ ವಿವೇಕಾನಂದರ ಒಂದು ಮಾತಿದೆ ಸಮಾಜಕ್ಕೆ ಏನೂ ಕೊಡದೇ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ, ದಿವಾಳಿ ಏಳುತ್ತದೆ. ಆದ್ದರಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕಾದುದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಅಂತಹ ಆದ್ಯ ಕರ್ತವ್ಯವನ್ನು ಅಕ್ಷತಾ ಅವರು ಇವತ್ತು ನೆರವೇರಿಸಿದ್ದಾರೆ.
ಇವತ್ತಿನ ದಿನ ಗೃಹಿಣಿಯರಲ್ಲದೆ, ವೃತ್ತಿನಿರತ ಮಹಿಳೆಯರು ಏನು ಮಾಡಬಹುದೋ ಅದೆಲ್ಲವನ್ನೂ ಹೊರತುಪಡಿಸಿ ವಿಭಿನ್ನವಾಗಿ ನಿಂತಿದ್ದಾರೆ. ಅದೆಂತದೋ ದಿವ್ಯ ಸೆಳೆತಕ್ಕೆ ಒಳಗಾಗಿ, ವನವಾಸಿ ಕಿರಣಗಳೊಂದಿಗೆ ಜತೆಯಾಗಿ ಹಾರೈಸುತ್ತಿದ್ದಾರೆ. ಅವರ ಮನಸ್ಸಿಗೆ, ಪ್ರೀತಿಗೆ ಇದೋ ಶರಣು.

ಹಿಂದೊಮ್ಮೆ ಸಾಗರದ ವನವಾಸಿ ಮಕ್ಕಳ ನಿಲಯದ ಕುರಿತು ತಿಳಿಸಿದ್ದೆ.

ರಾಶಿ ರಾಶಿ ಕನಸುಗಳ ಬುತ್ತಿಯ ಹೊತ್ತ ಮಲೆನಾಡ ಈ ಸ್ಥಳಕ್ಕೆ ನೀವೊಮ್ಮೆ ಭೇಟಿ ನೀಡಲೇಬೇಕು

ಈ ಲೇಖನವನ್ನು ಓದಿದ್ದ ಅವರು ಅಂದಿನಿಂದಲೂ ತಮ್ಮ ಕೈಲಾದ ಸಹಾಯ ಮಾಡಲು ಬಯಸಿದ್ದರು. ಅದು ಇಂದು ನೆರವೇರಿದೆ. ಎರಡು ದಿನಗಳ ಹಿಂದಷ್ಟೇ ಮೊದಲ ಭೇಟಿಯಾಗಿ ಅವರು ಬಂದಾಗ ಮೊದಲು ಹೇಳಿದ್ದು ಸಾಗರದಲ್ಲಿ ಇಂತಹ ಎಷ್ಟು ಸುಂದರ ಸ್ಥಳ ಇದೆಯಲ್ಲ ಎಂದು, ಎರಡನೆಯದು ಚಿಕ್ಕ ಪುಟ್ಟ ಕಷ್ಟಗಳಿಗೆ ಓಗೊಟ್ಟು ಎಷ್ಟು ಸಮಯ ವ್ಯರ್ಥ ಮಾಡ್ತೀವಿ, ಬದುಕಿನಲ್ಲಿ ಮಾಡಲು ಬಹಳಷ್ಟು ಇದೆ ಅನ್ನುವುದು. ನಿಜ ಹೆಮ್ಮೆಯಾಯಿತು ನಿಮ್ಮ ಬಗ್ಗೆ.

ಮಹಿಳಾ ದಿನಾಚರಣೆಯ ಅಂಗವಾಗಿ ಸಾಗರದ ವರದಹಳ್ಳಿ ರಸ್ತೆಯಲ್ಲಿರುವ ವನವಾಸಿ ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ನಿಲಯದ ಅಷ್ಟೂ ಮಕ್ಕಳಿಗೆ ಮಧ್ಯಾನ್ಹದ ಊಟದ ಮತ್ತು ಸಿಹಿ ವ್ಯವಸ್ಥೆ ಹಾಗೂ ಮಕ್ಕಳಿಗೆ ವಸ್ತ್ರ ವಿತರಣೆ ಮಾಡಿದರು. ಅಲ್ಲದೆ ತಾವು ಜೊತೆ ಸೇರಿ ಮಕ್ಕಳೊಂದಿಗೆ ಊಟ ಸವಿದಿದ್ದಾರೆ. ಅತ್ಯಂತ ಅರ್ಥಪೂರ್ಣವಾಗಿ ಓರ್ವ ಸಶಕ್ತ ಸ್ತ್ರೀ ತನ್ನ ಸಮಾಜವನ್ನು ಪೊರೆದಂತೆ ನನಗೆ ಅನ್ನಿಸುತ್ತಿದೆ.
ಅವರೂ ಇಂದು ಸಮಾರಂಭಗಳಿಗೆ ತೆರಳಿ, ಆತ್ಮೀಯರನ್ನು ಭೇಟಿಯಾಗಿ ಒಂದಿಷ್ಟು ಸಮಯವನ್ನು ಮನೋರಂಜನೆಗೆ ನೀಡುವ ಎಲ್ಲಾ ಅವಕಾಶವಿತ್ತು.

ಆದರೆ ಅವರು ಇಂದು ನಮ್ಮೊಂದಿಗೆ ಇದ್ದು ಈ ರೀತಿಯಾಗಿ ಆಚರಿಸಿದ್ದು ಖುಷಿಯ ವಿಚಾರ. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಓಂಕಾರಪ್ಪ (7676147981) ಒಂದು ಮಾತು ಹೇಳಿದ್ದರು ಸಮಾಜ ಮೊದಲಿನಂತಿಲ್ಲ, ಮಾನವೀಯತೆ ಕಳೆದು ಹೋಗಿದೆ ಅನ್ನುವುದೆಲ್ಲ ಸುಳ್ಳು. ಈಗಲೂ ದಾನಿಗಳ ಆತ್ಮದಲ್ಲಿ ಅದು ಬೆಳಗುತ್ತಲೇ ಇದೆ ಎಂದು. ಸತ್ಯವಾದ ಮಾತು. ಇಂತಹ ದಿವ್ಯ ಮನಗಳು ವೃದ್ಧಿಸಲಿ, ಸನಾತನ ಪರಂಪರೆ ಜಗದ್ಗುರುವಾಗಲಿ, ತಾಯಿ ಭಾರತಿ ಅಕ್ಷತಾ ಮತ್ತು ಅವರ ಕುಟುಂಬವನ್ನು ನೂರ್ಕಾಲ ಹರಸಲಿ. ಭಾರತೀಯತೆ ಸದಾ ಕಂಗೊಳಿಸುತ್ತಲೇ ಇರಲಿ.

ವನವಾಸಿಗ್ರಾಮವಾಸಿನಗರವಾಸಿ_ನಾವೆಲ್ಲಾ ಭಾರತವಾಸಿ


Get in Touch With Us info@kalpa.news Whatsapp: 9481252093

Tags: HostelInternational Women's DayKannada News WebsiteLatestNewsKannadaMalnad ArticleRSSSachin ParshwanathSagarVanavasi Children's Student ResidenceVaradahalli Sridharashramaತಾಯಿ ಭಾರತಿ ಅಕ್ಷತಾವನವಾಸಿ ಮಕ್ಕಳ ವಿದ್ಯಾರ್ಥಿ ನಿಲಯಸಚಿನ್ ಪಾರ್ಶ್ವನಾಥ್
Share208Tweet123Send
Previous Post

ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ಪದ್ಮರಾಜ್ ಜೈನ್ ನೇಮಕ

Next Post

ಅಂತಾರಾಷ್ಟ್ರೀಯ ಕುಸ್ತಿಗೆ ಶಿವಮೊಗ್ಗದ ವ್ಯಾಯಾಮ ಪಟು ಆಯ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅಂತಾರಾಷ್ಟ್ರೀಯ ಕುಸ್ತಿಗೆ ಶಿವಮೊಗ್ಗದ ವ್ಯಾಯಾಮ ಪಟು ಆಯ್ಕೆ

ಅಂತಾರಾಷ್ಟ್ರೀಯ ಕುಸ್ತಿಗೆ ಶಿವಮೊಗ್ಗದ ವ್ಯಾಯಾಮ ಪಟು ಆಯ್ಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಸಂಗೀತ ಲೋಕದ ಧ್ರುವತಾರೆ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಸಂಗೀತ ಲೋಕದ ಧ್ರುವತಾರೆ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL