ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಸ್ವಯಂ ಪ್ರಶಂಸೆಗಿಂತ ನಮ್ಮ ಗುಣಗಳನ್ನು ಪ್ರಪಂಚ ಗುರುತಿಸಬೇಕು.
ನಮ್ಮಲ್ಲಿ ಗುಣ ವಿಶೇಷ ಇದ್ದರೆ ಜನರು ಅದನ್ನು ಗುರುತಿಸಿ ಪ್ರಶಂಸೆ ಮಾಡುತ್ತಾರೆ. ನಾವು ಬೇರೆಯವರಿಗಿಂತ ಹೆಚ್ಚು ಎಂದು ತೋರಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಏನೇ ಕೆಲಸ ಮಾಡಿದರೂ ನಮ್ಮ ಆತ್ಮತೃಪ್ತಿಗಾಗಿ ಸಂತೋಷದಿಂದ ಮಾಡಬೇಕು.
ತೋರಿಕೆ, ಬೂಟಾಟಿಕೆಗೇ ಮಾಡಿದ ಕೆಲಸಗಳಿಗೂ ಹೊಗಳಿಕೆ ಸಿಗುತ್ತದೆ. ಆದರೆ ನಿಷ್ಕಲ್ಮಶ ಭಾವದಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡಿದಾಗ ಬೇರೆಯವರು ಮುಕ್ತವಾಗಿ ಹಾಡಿ ಹೊಗಳಿ ಹರಸುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















