ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಕ್ಕಳು ಧೈರ್ಯವಂತರಾಗಿರಬೇಕು, ಬದುಕಿನಲ್ಲಿ ಹಲವಾರು ಘಟನೆಗಳು ನಮ್ಮನ್ನು ಕುಗ್ಗಿಸುತ್ತವೆ. ಅಂತಹ ಸಮಯದಲ್ಲಿ ನಾವು ಎಂದಿಗೂ ವಿಚಲಿತರಾಗಬಾರದು ಎಂದು ಆದರ್ಶ ಸೇವಾ ಸಂಘದ ಅಧ್ಯಕ್ಷ ನಾಗರಾಜ್ ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದ ಕೃಷ್ಣಮೂರ್ತಿಪುರಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಶಾಲೆ)ಯಲ್ಲಿ ವಿದ್ಯಾಸ್ಪಂದನ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಪಠ್ಯ ಪರಿಕರಗಳ ವಿತರಣೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Also read: ಡಾ. ಧನಂಜಯ ಸರ್ಜಿ 65ನೇ ಬಾರಿ ರಕ್ತದಾನ
ವಿದ್ಯಾಸ್ಪಂದನ ಅಧ್ಯಕ್ಷ ಪುನೀತ್ ಜಿ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಶಿಸ್ತಿನಿಂದ ಇರಬೇಕು. ಮಕ್ಕಳು ಭಾರತ ಸೈನಿಕರನ್ನು, ಪೋಷಕರು ಮತ್ತು ಶಾಲೆಯ ಶಿಕ್ಷಕರನ್ನು ತಮ್ಮ ಜೀವನದಲ್ಲಿ ಗೌರವಿಸಬೇಕು. ಮಕ್ಕಳು ತಮ್ಮ ಜೀವನದಲ್ಲಿ ಸ್ವಚ್ಛತೆಗೆ ಮಹತ್ವ ಕೊಡಬೇಕು. ಸ್ವಚ್ಛ ಭಾರತಕ್ಕೆ ಮಕ್ಕಳು ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಪ್ರತಿ ದಿನ ಕನ್ನಡ ದಿನಪತ್ರಿಕೆ ಹಾಗೂ ಪಠ್ಯವನ್ನು ತಪ್ಪದೆ ಓದಬೇಕು ಎಂದು ಹೇಳಿದರು.

ಯುವ ಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ, ಶತಮಾನದ ಇಂತಹ ಶಾಲೆಗಳು ಉಳಿಯ ಬೇಕಾದರೆ, ಮಕ್ಕಳು ಶಾಲೆಗೆ ಬರಬೇಕು. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಉತ್ತಮ ಅಧಿಕಾರಿಗಳಾಗಿ ನಿವೃತ್ತರಾಗಿದ್ದಾರೆ. ಕನ್ನಡಶಾಲೆಗಳ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಕೆ.ಆರ್. ಗಣೇಶ್, ಪ್ರತಿಭೆ ವೇದಿಕೆಯ ರಾಜರತ್ನಂ, ಭಾಜಪ ಯುವ ಮುಖಂಡ ಅಜಯ್ ಶಾಸ್ತ್ರಿ, ಪೂಜಾ, ಎನ್. ನೂತನ್, ಮುಖ್ಯೋಪಾದ್ಯಾಯರಾದ ಮೋಹನ್ ಕುಮಾರ್, ಶಾಲೆಯ ಸಹ ಶಿಕ್ಷಕಿ ಚಂಪಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.











Discussion about this post