ಕಲ್ಪ ಮೀಡಿಯಾ ಹೌಸ್
ಮೈಸೂರು: ಮೈಸೂರು ರಾಮಕೃಷ್ಣ ಆಶ್ರಮದಿಂದ ಐರ್ಲೆಂಡ್ ನ ರಾಮಕೃಷ್ಣ ಆಶ್ರಮ ಕ್ಕೆ ವರ್ಗಾವಣೆಯಾಗಿರುವ ಸ್ವಾಮಿ ಶಾಂತಿವ್ರತಾನಂದಜೀ ಮಹಾರಾಜರಿಗೆ ಭಕ್ತ ಬಳಗದಿಂದ ಪುಟ್ಟ ಬೀಳ್ಕೊಡುಗೆ ಸಮಾರಂಭ ಮತ್ತು ಗುರುವಂದನೆ ಸಲ್ಲಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ರಾಮಕೃಷ್ಣ – ವಿವೇಕಾನಂದರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಆದೇಶ ನೀಡಿ ಆಶೀರ್ವದಿಸಿದರು.


ಕಾರ್ಯಕ್ರಮದಲ್ಲಿ ನಟರಾಜ್, ಪ್ರಮೋದ್, ಪ್ರಭಂಜನ್, ಯೋಗಿತಾ, ಉಮಾ, ಪ್ರದೀಪ್, ಶ್ವೇತಾ, ಭೂಮಿಕಾ, ಸಹನಾ, ಸಂದೇಶ, ಸಿಂಚನಾ, ಕೇಶವ, ಬಸವರಾಜಯ್ಯ, ಮಂಗಳಾದೇವಿ, ವಿಶಾಖ, ತನ್ಮಯ್, ಜಯರಾಮುರವರು ಹಾಜರಿದ್ದರು. ಭಾಗವಹಿಸಿದ ಎಲ್ಲರೂ ಶ್ರೀಗಳೊಂದಿಗೆ ಕಳೆದ ತಮ್ಮ ಸ್ಮರಣೀಯ ನೆನಪುಗಳನ್ನು ಸ್ಮರಿಸಿಕೊಂಡು ಭಾವುಕರಾದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















