ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಟಿಕೆ ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Raghavendraswamy Mutt ಪ್ರತಿ ಗುರುವಾರದ ಮಧ್ಯಾಹ್ನದ ವಿಶೇಷ ಉಚಿತ ಪ್ರಸಾದ ವಿತರಣೆ ಯೋಜನೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ನ ಟ್ರಸ್ಟಿ ಮತ್ತು ಹಿರಿಯ ವಕೀಲ ಕೆ. ಆರ್. ಶಿವಶಂಕರ್ ಅವರು, ರಾಯರ ವಿಶೇಷ ಕೃಪೆಯಿಂದ ಪ್ರಸಾದ ವಿತರಣೆ ಸೇವಾ ಕಾರ್ಯವು ಮರು ಚಾಲನೆ ಗೊಂಡಿದೆ ಎಂದರು.
ರಾಯರ ಮಠದಲ್ಲಿ ಮೊದಲಿಂದಲೂ ನಡೆದುಕೊಂಡು ಬಂದಿದ್ದ ಪ್ರಸಾದ ವಿತರಣೆ ಸೇವಾ ಚಟುವಟಿಕೆಯು ಕೋವಿಡ್ ಸಂದರ್ಭದಲ್ಲಿ ಸ್ಥಗಿತ ಗೊಂಡಿತು ನಂತರದ ದಿನಗಳಲ್ಲಿ ಕೆಲವು ಕಾರಣಾಂತರಗಳಿಂದ ಈ ಸೇವೆಯನ್ನು ಭಕ್ತ ಗಣಕ್ಕೆ ಕೊಡಲು ಆಗಿರಲಿಲ್ಲ. ಯೋಗಾತ್ಮ ಶ್ರೀಹರಿ ಅವರ ವಿಶೇಷ ಪ್ರೇರಣೆ ಮತ್ತು ಕಾರ್ಪಸ್ ಫಂಡ್ ಗೆ ಅವರು ಒಂದು ಲಕ್ಷ ರೂ. ಪ್ರಧಾನ ದೇಣಿಗೆ ನೀಡಿದ ಫಲವಾಗಿ ಈ ಯೋಜನೆ ಮರು ಚಾಲನೆ ಗೊಂಡಿರುವುದು ಸಂತಸಕರ ವಾದ ವಿಚಾರ ಎಂದು ಹೇಳಿದರು.
Also read: ಎಕೆಬಿಎಂಎಸ್ ಚುನಾವಣೆ: ವೇ. ಭಾನುಪ್ರಕಾಶ್ ಶರ್ಮ ಬೆಂಬಲಿಗರ ಅವಿರೋಧ ಆಯ್ಕೆ
ದೇವಾಲಯಗಳು ನಮ್ಮ ಶ್ರದ್ಧಾ ಕೇಂದ್ರಗಳು. ಇಲ್ಲಿ ಅನ್ನದಾನ ಸೇವಾ ಕಾರ್ಯ ಗಳು ನಿರಂತರವಾಗಿ ನಡೆದರೆ ಸಾಮಾಜಿಕ ಸಂಘಟನೆಯೂ ಸಾಧ್ಯವಾಗುತ್ತದೆ. ಹಸಿದ ಹೊಟ್ಟೆಗಳಿಗೆ ಆಹಾರ ನೀಡುವುದರಿಂದ ಧರ್ಮ ಕಾರ್ಯದೊಂದಿಗೆ ಸಂಬಂಧಗಳ ವೃದ್ಧಿಯೂ ಆಗುತ್ತದೆ. ದೇವಾಲಯ ಮತ್ತು ಮಠಗಳ ಮೇಲೆ ಭಕ್ತರಿಗೆ ಗೌರವ ಮತ್ತು ನಂಬಿಕೆಗಳು ಇಮ್ಮಡಿಕೊಳ್ಳುತ್ತವೆ.
ಯೋಗಾತ್ಮ ಶ್ರೀ ಹರಿ, ಜಿಎಸ್ಎಸ್ ಸಂಸ್ಥೆ ಮುಖ್ಯಸ್ಥರು, ಯೋಗ ಸಾಧಕರು, ಮೈಸೂರು.
300ಕ್ಕೂ ಹೆಚ್ಚು ಭಕ್ತರಿಗೆ ಇಂದು ಮಹಾ ಪ್ರಸಾದ ವಿತರಣೆಯಾಗಿದೆ.ಮುಂಬರುವ ವಾರಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ಭಕ್ತರಿಗೆ ವಿಸ್ತರಣೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು. ಏಕಾದಶಿ ಹೊರತುಪಡಿಸಿ ಉಳಿದ ಎಲ್ಲಾ ಗುರುವಾರಗಳಂದು ರಾಯರ ಮಹಾಪ್ರಸಾದವು ಬಂದಂಥ ಭಕ್ತರಿಗೆ ಲಭ್ಯವಾಗಲಿದೆ. ಆಸಕ್ತ ದಾನಿಗಳು ಧಾನ್ಯ ರೂಪದಲ್ಲಿ ಅಥವಾ ನಗದು ರೂಪದಲ್ಲಿ ಈ ಯೋಜನೆಗೆ ಸಹಕಾರ ನೀಡಲು ಅವಕಾಶವನ್ನೂ ಕಲ್ಪಿಸಲಾಗಿದೆ. ಮಾಹಿತಿಗೆ 97403 99992 ಸಂಪರ್ಕಿಸಬಹುದು ಎಂದು ಶಿವಶಂಕರ್
ಅವರು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಎಚ್. ಎಸ್. ಸುಬ್ಬರಾವ್ ಕಾರ್ಯಾಧ್ಯಕ್ಷ ಎಸ್. ಜಯರಾಮ್, ಉಪಾಧ್ಯಕ್ಷ ದ್ವಾರಕಾ ನಾಥ್, ಸಹಾಯಕರಾದ ವೆಂಕಟಾಚಲ ಮತ್ತು ಬಾಣಸಿಗ ಪಾರ್ಥಸಾರಥಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post