ಕಲ್ಪ ಮೀಡಿಯಾ ಹೌಸ್ | ನಂಜನಗೂಡು |
ಒಂದು ತಿಂಗಳ ಅವಧಿಯಲ್ಲಿ ಮೂವರನ್ನು ಕೊಂದು ತಿಂದಿದ್ದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ನಂಜನಗೂಡು ತಾಲೂಕು ಬಳ್ಳೂರುಹುಂಡಿ ಗ್ರಾಮದ ಬಳಿ ಕಲ್ಲಹಾರ ಕಂಡಿ ಎಂಬ ಸ್ಥಳದಲ್ಲಿ ಸುಮಾರು 10 ವರ್ಷದ ಗಂಡು ಹುಲಿಯನ್ನು ನಿನ್ನೆ ತಡರಾತ್ರಿ 1.40ರ ವೇಳೆಗೆ ಸೆರೆ ಹಿಡಿದಿದ್ದಾರೆ.

Also read: ರೇಡಿಯೋ ಶಿವಮೊಗ್ಗ ಕನ್ನಡ ರಸಪ್ರಶ್ನೆಯ ವಿಜೇತರ ಹೆಸರು ಪ್ರಕಟ
ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಹುಲಿಯನ್ನು ಹಿಡಿಯಲು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ, ಬೋನು ಇರಿಸಿತ್ತು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ನಿನ್ನೆ ರಾತ್ರಿ 1.40ರ ವೇಳೆಗೆ ಹುಲಿ ಸೆರೆ ಸಿಕ್ಕಿದ್ದು, ನರಭಕ್ಷಕ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ. ಸೆರೆ ಸಿಕ್ಕ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಬಳಿ ಇರುವ ಹುಲಿಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.

ಈ ಭಾಗದಲ್ಲಿ ಇನ್ನೂ ಹಲವು ಹುಲಿಗಳಿವೆ ಎಂದು ಹೇಳಲಾಗಿದ್ದು, ಅರಣ್ಯ ಇಲಾಖೆ ಕಾರ್ಯಚರಣೆ ಮುಂದುವರೆಸಲಿದೆ ಎನ್ನಲಾಗಿದೆ.












Discussion about this post