Friday, June 13, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ತುಳು ಸಾಹಿತ್ಯ ಕೃಷಿಯಲ್ಲಿ ಸದ್ದಿಲ್ಲದೆ ದುಡಿಯುತ್ತಿರುವ ತುಳುನಾಡಿನ ಉದಯೋನ್ಮುಖ ಪ್ರತಿಭೆ ನವೀನ್ ಕುಮಾರ್ ಪೆರಾರ

June 7, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ತುಳುನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಪೆರಾರದ ಪುಣ್ಯ ಮಣ್ಣಿನಲ್ಲಿ ನಾರಾಯಣ ಪೂಜಾರಿ ಹಾಗೂ ಲಲಿತಾ ನಾರಾಯಣ ಪೂಜಾರಿ ದಂಪತಿಗಳ ಸುಪುತ್ರನಾಗಿ ಜನಿಸುತ್ತಾರೆ ನವೀನ್ ಕುಮಾರ್ ಪೆರಾರ.

ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿಯ ಮೊದಲನೆಯ ವರ್ಷದಲ್ಲಿ ಓದುತ್ತಿರುವಾಗಲೇ ತುಳು ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಣ್ಣದಾದೊಂದು ಪ್ರಯತ್ನದ ರೂಪದಲ್ಲಿ ಪೆರಾರದ ಕುರಿತಾಗಿ ತುಳು ಲೇಖನವನ್ನು ಬರೆಯುತ್ತಾ ಬರಹ ಲೋಕದ ಯಾತ್ರೆಗೆ ಮೊದಲ ಹೆಜ್ಜೆಯನ್ನಿಡುತ್ತಾ ತನ್ನ ವಿದ್ಯಾಭ್ಯಾಸದೊಂದಿಗೆ ಇನ್ನಿತರ ಬರಹಗಳನ್ನು ಬರೆಯುತ್ತಿದ್ದರು.

ಚಿಕ್ಕಂದಿನಿಂದಲೇ ತುಳುನಾಡಿನ ಸಂಸ್ಕೃತಿ ಹಾಗೂ ತುಳು ಭಾಷೆಯ ಮೇಲೆ ಅತೀವ ಅಕ್ಕರೆ ಅಭಿಮಾನವನ್ನು ಹೊಂದಿದ್ದ ಇವರು ಬರೆದ ಮೊದಲನೆಯ ತುಳು ನಾಟಕದ ಹೆಸರು ’ಬರೆದಾತ್ತ್‌ಂಡ್ ಒಚ್ಚೆರಾಪುಜಿ’ ಕುಸಾಲ್ದ ಕಲಾವಿದೆರ್ ಸುಂಕದಕಟ್ಟೆ ನಾಟಕ ಬಳಗದ ಕಲಾವಿದರು ಈ ನಾಟಕವನ್ನು ಮುಂಬಯಿ, ಕೇರಳ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಪ್ಪತೈದು ಪ್ರದರ್ಶನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಮುರುಘೇಂದ್ರ ಬಂಟ್ವಾಳ ಇವರ ಮುತುವರ್ಜಿಯಲ್ಲಿ ನಡೆದ ’ತುಳು ನಾಟಕ ಸ್ಪರ್ಧೆ 2019’ಗೆ ಆಯ್ಕೆಯಾಗಿ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿಯ ಹೆಗ್ಗಳಿಕೆಯನ್ನೂ ಸಹ ಪಡೆದಿದೆ. ಇವರು ರಚಿಸಿದ ಎರಡನೇ ನಾಟಕ ’ಬದುಕುನು ಎಂಚ!?ಮೂರನೆ ನಾಟಕ ’ಕಥೆ ಬೇತೆನೇ!’ ಕುಸಾಲ್ದ ಕಲಾವಿದೆರ್ ಸುಂಕದಕಟ್ಟೆ ನಾಟಕ ಬಳಗದ ಕಲಾವಿದರಿಂದ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಶ್ರೀಯುತ ನವೀನ್ ಕುಮಾರ್ ಪೆರಾರ ನಾಟಕ ರಚನೆಕಾರರು ಮಾತ್ರವಲ್ಲದೆ ಸ್ವತಃ ಮುಖಕ್ಕೆ ಬಣ್ಣ ಹಚ್ಚಿ ಸುಮಾರು ನಲ್ವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಅನುಭವವನ್ನೂ ಹೊಂದಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ’ತುಳುನಾಡ್’ದ ಕ್ಷೇತ್ರ ಪರಿಚಯ’ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದೊಂದಿಗೆ ಗಣ್ಯರ ಸಮ್ಮುಖದಲ್ಲಿ ಪುರಸ್ಕರಿಸಲ್ಪಟ್ಟಿದ್ದಾರೆ ಎನ್ನುವುದು ನಮಗೆಲ್ಲರಿಗೂ ತುಂಬಾ ಹೆಮ್ಮೆಯ ವಿಷಯ. ತುಳು ಭಾಷಣ,ಕಾಂತಬಾರೆ ಬೂದಬಾರೆ, ಮಾಯಂದಲ್, ಕಲ್ಲುರ್ಟಿ ಕಲ್ಕುಡ ತುಳುನಾಡಿನ ದೈವದೇವರಿನ ಕುರಿತಾದ ತುಳು ಚಾರಿತ್ರಿಕ ಪ್ರಹಸನ, ಪೆರಾರದ ಜಾತ್ರೆಯ ವೈವಿಧ್ಯಮ ವರ್ಣನೆಯನ್ನು ವರ್ಣಿಸಿ ಇವರು ರಚಿಸಿದ ಪದ್ಯ ’ಯುಟ್ಯೂಬ್’ನಲ್ಲಿ ಪ್ರಸಾರವಾಗಿ ಜನಮನ ಗೆದ್ದಿದೆ. ಹಲವಾರು ಕಾರ್ಯಕ್ರಮಗಳ ಸವಿವರದ ವಿಮರ್ಶಾತ್ಮಕ ಬರಹಗಳು ಇವರ ಲೇಖನಿಯಲ್ಲಿ ಮೂಡಿ ಬಂದಿವೆ.

ಜನ ಜಾಗೃತಿ, ಸಮಾಜಕ್ಕೆ ಸಕಾರಾತ್ಮಕವಾದ ಸಂದೇಶಗಳನ್ನು ತಲುಪಿಸಿ ತಿಳಿ ಹೇಳುವಂತಹ ತುಳುನಾಡಿನ ಸಂಸ್ಕೃತಿ ತುಳು ಭಾಷೆಯನ್ನು ಉಳಿಸಿ ಬೆಳೆಸಲು ಪ್ರೇರಾತ್ಮಕವಾದ ಸುಮಾರು ನೂರ ಐವತ್ತು ತುಳು ಕವನಗಳನ್ನು ರಚಿಸಿ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಮಾಜದಲ್ಲಿರುವ ಹೊಸ ಪ್ರತಿಭೆಗಳನ್ನು ಸಮಾಜಮುಖಕ್ಕೆ ಗುರುತಿಸುವಂತಹ ಇವರ ಪರಿಚಯ ಲೇಖನಗಳು ವಿಜಯವಾಣಿ, ಟೈಮ್ಸ್ ಆಫ್ ಕುಡ್ಲ ಹಾಗೂ ಉಡಲ್ ತುಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ತುಳು ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತುಳು ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ರಚಿಸಿ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ತುಳುನಾಡಿನ ಸಂಸ್ಕೃತಿ ಹಾಗೂ ದೈವಾರಾಧನೆಯ ವಿಷಯದಲ್ಲಿ ಮೂಡುಬಿದಿರೆಯ ಶ್ರೀ ಧವಳಾ ಕಾಲೇಜಿನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ತುಳುನಾಡಿನ ದೈವದೇವರಿನ ಚರಿತ್ರೆಯ ಕುರಿತಾಗಿ ಅಧ್ಯಯನ, ದೈವದೇವರ ಪೂಜೆ ಸೇವಾಕಾರ್ಯಗಳನ್ನು ಮಾಡುತ್ತಾ ತನಗೆ ತಿಳಿದಷ್ಟು ದೈವಾರಾಧನೆಯ ಮಾಹಿತಿಗಳನ್ನು ಇತರರಲ್ಲಿ ಹಂಚಿಕೊಳ್ಳುತ್ತಾ ತನಗೆ ಸ್ವಂತ ಗೆದ್ದೆ ಇಲ್ಲದಿದ್ದರೂ ಭತ್ತದ ಬೇಸಾಯಕ್ಕಾಗಿ ಬೇರೆಯವರ ಗೆದ್ದೆಯನ್ನು ಗೇಣಿಯ ಸ್ವರೂಪದಲ್ಲಿ ಪಡೆದುಕೊಂಡು ತಾನೇ ಸ್ವತಃ ಬೆವರು ಸುರಿಸಿ ಗೆದ್ದೆಯಲ್ಲಿ ದುಡಿದು ವರ್ಷ ಇಡೀ ಸಾಕಾಗುವಷ್ಟು ಭತ್ತದ ಕೃಷಿಯನ್ನು ಬೆಳೆಸಿದ ಹೆಮ್ಮೆ ಇವರಿಗಿದೆ.

ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದ ಸಂಘ ಸಂಸ್ಥೆಗಳನ್ನು ನೆನಪಿಸಿಕೊಳ್ಳುತ್ತಾ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ತುಳುನಾಡಿನ ಸರ್ವ ಕ್ಷೇತ್ರಗಳಿಗೆ ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಮನೋಭಾವನೆಯನ್ನು ಹೊಂದಿದ ಯಕ್ಷಪ್ರೇಮಿಯಾದ ಇವರಿಗೆ ಒಂದು ಯಕ್ಷಗಾನ ಪ್ರಸಂಗ ಹಾಗೂ ಚಲನಚಿತ್ರ ಕಥೆಯನ್ನು ಬರೆಯಬೇಕೆಂಬ ಮಹದಾಸೆಯಿದೆ.

ತುಳುನಾಡಿನ ಸಂಸ್ಕೃತಿ ತುಳು ಭಾಷೆಯ ಮೇಲೆ ಅತೀವ ಅಕ್ಕರೆ ಅಭಿಮಾನದಿಂದ ತುಳು ಸಾಹಿತ್ಯ ದುಡಿಮೆಯಲ್ಲಿ ತನ್ನನ್ನು ತೊಡಗಿಸಿಕೊಂಡು ನಿಸ್ವಾರ್ಥ ಮನೋಭಾವನೆಯಿಂದ ಕಲಾ ಸಾಹಿತ್ಯ ಸೇವೆಗೈಯುತ್ತಿರುವ ಇವರು ಪ್ರಸ್ತುತವಾಗಿ ’ದೈವ ನಿರೆಲ್’ ಎಂಬ ತುಳು ಧಾರವಾಹಿಯನ್ನು ಬರೆಯುತ್ತಿದ್ದಾರೆ. ಇವರ ಲೇಖನಿಯಿಂದ ಇನ್ನಷ್ಟು ಬರಹಗಳು ಮೂಡಿಬಂದು ಲೋಕಪ್ರಸಿದ್ದಿಯನ್ನು ಪಡೆದು ಇವರ ಕಲಾ ಸಾಹಿತ್ಯ ಕೃಷಿಗೆ ಸಾಲು ಸಾಲಾಗಿ ಗೌರವ ಪ್ರಶಸ್ತಿಗಳು ಬಂದೊರಗಲಿ ಎಂದು ಶುಭ ಹಾರೈಸುತ್ತೇವೆ.


Get In Touch With Us info@kalpa.news Whatsapp: 9481252093

Tags: Dakshina KannadaKannadaNewsWebsiteLatestNewsKannadaTulu LanguageTulu Literary Academyತುಳು ಭಾಷೆತುಳು ಸಾಹಿತ್ಯ ಅಕಾಡೆಮಿದಕ್ಷಿಣ ಕನ್ನಡ
Previous Post

Russia declares state of emergency over Arctic Circle oil spill caused by melting permafrost

Next Post

ಶಾಸಕ ರಘುಮೂರ್ತಿ ಆರೋಪದಲ್ಲಿ ಹುರುಳಿಲ್ಲ: ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ತಿರುಗೇಟು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಾಸಕ ರಘುಮೂರ್ತಿ ಆರೋಪದಲ್ಲಿ ಹುರುಳಿಲ್ಲ: ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ತಿರುಗೇಟು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಹಮದಾಬಾದ್ ವಿಮಾನ ದುರಂತ | ಏರ್ ಇಂಡಿಯಾ ಫ್ಲೈಟ್‌ನ ಬ್ಲ್ಯಾಕ್ ಬಾಕ್ಸ್ ಪತ್ತೆ

June 13, 2025

ಅಹಮದಾಬಾದ್‌ ವಿಮಾನ ದುರಂತ | ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

June 13, 2025

ಅನಧೀಕೃತ ಇರುವೆ ನಾಶಕಪುಡಿ ಮಾರಾಟ | ಕೃಷಿ ಅಧಿಕಾರಿಗಳ ದಾಳಿ

June 13, 2025

ಬೆಂಗಳೂರು | ಗುರುರಾಯರ ಸನ್ನಿಧಿಯಲ್ಲಿ ನಿರೀಕ್ಷಾ ಗಾಯನ ಸೇವೆ

June 13, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಹಮದಾಬಾದ್ ವಿಮಾನ ದುರಂತ | ಏರ್ ಇಂಡಿಯಾ ಫ್ಲೈಟ್‌ನ ಬ್ಲ್ಯಾಕ್ ಬಾಕ್ಸ್ ಪತ್ತೆ

June 13, 2025

ಅಹಮದಾಬಾದ್‌ ವಿಮಾನ ದುರಂತ | ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

June 13, 2025

ಅನಧೀಕೃತ ಇರುವೆ ನಾಶಕಪುಡಿ ಮಾರಾಟ | ಕೃಷಿ ಅಧಿಕಾರಿಗಳ ದಾಳಿ

June 13, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!