ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಸ್ತುತ ಸನ್ನಿವೇಶದಲ್ಲಿ ರಾವಣ ದಹನದ ಮೂಲಕ ನಮ್ಮಲ್ಲಿರುವ ಜಾತೀಯತೆ ಹಾಗೂ ಸ್ವ ಹಿತಾಸಕ್ತಿಯ ದಹನವೂ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ PM Narendra Modi ಮಾರ್ಮಿಕವಾಗಿ ನುಡಿದರು.
ವಿಜಯದಶಮಿ Vijayadashami ಅಂಗವಾಗಿ ನವದೆಹಲಿಯ ದ್ವಾರಕಾದಲ್ಲಿ Dwaraka ಆಯೋಜಿಸಲಾಗಿದ್ದ ರಾವಣ ದಹನ Ravana Dahana ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ರಾವಣ ದಹನದ ಮೂಲಕ ನಮ್ಮಲ್ಲಿರುವ ಜಾತೀಯತೆ ಹಾಗೂ ಸ್ವ ಹಿತಾಸಕ್ತಿಯ ದಹನವೂ ಆಗಬೇಕು ಎಂದು ಅವರು ಕರೆ ನೀಡಿದ್ದು ಮಾರ್ಮಿಕವಾಗಿತ್ತು.
Also read: ಸಿಬ್ಬಂದಿ ನೇಮಕಾತಿಗೆ ಅ.28, 29ರಂದು ಪರೀಕ್ಷೆ: ಪರೀಕ್ಷಾರ್ಥಿಗಳು ಅನುಸರಿಸಬೇಕಾದ ನಿಬಂಧನೆಗಳೇನು?
ಇದೇ ವೇಳೆ ಜಲ ಸಂರಕ್ಷಣೆ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ, ಸ್ವದೇಶಿ ವಸ್ತುಗಳ ಖರೀದಿಗೆ ಸಂಕಲ್ಪ, ಊಟದಲ್ಲಿ ಸಿರಿಧಾನ್ಯಗಳ ಬಳಕೆ ಸೇರಿದಂತೆ 10 ಸಂಕಲ್ಪಗಳನ್ನು ಕೈಗೊಳ್ಳುವಂತೆ ಅವರು ಕರೆ ನೀಡಿದರು.
ಇದೇ ವೇಳೆ ಪ್ರಧಾನಿಯವರು ಸೀತಾ ಲಕ್ಷ್ಮಣ ಸಮೇತ ಶ್ರೀರಾಮನ ಪಾತ್ರಗಳಿಗೆ ತಿಲಕವಿಟ್ಟು ಆರತಿ ಮಾಡಿ ಸಂಭ್ರಮಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















