ಶಿವಮೊಗ್ಗ: ಸೆ. 02ರಂದು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಅಂಗವಾಗಿ ನಗರದ ವಿವಿಧ ಕಡೆಗಳಲ್ಲಿ ಸಂಚಾರಿ ನೀರಿನ ಟ್ಯಾಂಕರ್ಗಳ ವ್ಯವಸ್ಥೆ ಹಾಗೂ ಕೃತಕ ಕೆರೆಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಮಿಸಲಾಗಿದೆ.
ನೀರಿನ ಸಂಚಾರಿ ಟ್ಯಾಂಕರ್’ಗಳನ್ನು ಹೊಸಮನೆ 5ನೆಯ ತಿರುವು ಗಣಪತಿ ದೇವಸ್ಥಾನದ ಹತ್ತಿರ, ಗೋಪಾಳ ಬಸ್’ಸ್ಟ್ಯಾಂಡ್, ಗೋಪಾಲಗೌಡ ಬಡಾವಣೆ, ಇನ್ಕಂ’ಟ್ಯಾಕ್ಸ್ ಕಚೇರಿ ಹತ್ತಿರ, ಕರಿಯಣ್ಣ ಬಿಲ್ಡಿಂಗ್ ವಿನೋಬನಗರ, ಕಾಶೀಪುರ ಬಸ್’ಸ್ಟ್ಯಾಂಡ್, ಚೌಡೇಶ್ವರಿ ದೇವಸ್ಥಾನದ ಹತ್ತಿರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಬಣ್ಣ ರಹಿತ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಮಾರಾಟ ಮತ್ತು ಕೃತಕ ಕೆರೆಯನ್ನು ನಿರ್ಮಿಸಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಅವಕಾಶವನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಈ ಎಲ್ಲಾ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಪರಿಸರ ಅಧಿಕಾರಿಗಳು ಕರೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಮೊ.ಸಂ.: 9845411908 /9916514066 ಗಳನ್ನು ಸಂಪರ್ಕಿಸಬಹುದು.
Discussion about this post