No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Saturday, February 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ವೃಕ್ಷಗಳಲ್ಲಿ ದೈವತ್ವವನ್ನು ಕಾಣುವ ಪವಿತ್ರ ಸಂಸ್ಕೃತಿ ನಮ್ಮದು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 6, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮರಗಳಲ್ಲಿ ದೈವತ್ವವನ್ನು ಕಾಣುವ, ಅವನ್ನು ಪವಿತ್ರ ವೃಕ್ಷಗಳನ್ನಾಗಿ ಕಾಣುವ ಸಂಪ್ರದಾಯ ಇನ್ನೂ ಇದೆ. ದೇವರ ಕಾಡುಗಳೂ ಇವೆ. ಮರಗಳ ಜೈವಿಕ ವೈವಿಧ್ಯ ಕಾಪಾಡುವಲ್ಲಿ ಇವು ಮಹತ್ವದ ಪಾತ್ರ ವಹಿಸಿವೆ. ಮೇಲಿನ ವಿಷಯಗಳನ್ನೆಲ್ಲಾ ಗಮನಿಸಿದರೆ ನಮ್ಮ ಸಂಸ್ಕೃತಿ, ಸಸ್ಯ ಸಂಸ್ಕೃತಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಅಂಡಗಿ ಬಳಿಯ ಕ್ಯಾದಗಿ ಕೊಪ್ಪದಲ್ಲಿ ಪ್ರತಿ ಅಮಾವಾಸ್ಯೆ ಜಾತ್ರೆಯಾಗುತ್ತದೆ. ಭಕ್ತರು ಕಾಡಿನ ಮರಗಳಿಗೆ ಸೀರೆ, ರವಿಕೆ, ಬಳೆಗಳನ್ನು ಇಲ್ಲಿರುವ ನಾಮಾಧಾರಿ ಮಠದವರ ಮೂಲಕ ತೊಡಿಸುತ್ತಾರೆ. ವೃಕ್ಷಗಳನ್ನು ಪೂಜಿಸುತ್ತಾರೆ. ಇಲ್ಲಿ ಎಲ್ಲಾ ಮರಗಳೂ ಬಟ್ಟೆ ಧರಿಸಿ ನವಸ್ತ್ರೀಯರಂತೆ ಕಾಣುತ್ತವೆ (ಸಂಧ್ಯಾ ಹೆಗಡೆ, ಪ್ರಜಾವಾಣಿ 24-4-12). ನಮ್ಮ ಹತ್ತಿರವಿರುವ ಮರಗಳೊಡನೆ ನಮಗೇ ತಿಳಿಯದಂತೆ ನಂಟು ಬೆಳೆದಿರುತ್ತದೆ. ತೋರುದತ್ (Torudutt) Our casuarinas tree ಎಂಬ ಕವನವನ್ನು ಸರ್ವೆ ಮರದ ಮೇಲೆ ಬರೆದಿದ್ದಾರೆ. ಸದೆ (Southey) ಯವರು ಆಲದ ಮರದ ಮೇಲೆ ಕವಿತೆ ಬರೆದಿದ್ದಾರೆ. ಅರಳಿಕಟ್ಟೆ, ಬೇವಿನ ಕಟ್ಟೆಗಳಿಲ್ಲದಿರುವ ಹಳ್ಳಿಯನ್ನು ಹುಡುಕುವುದೇ ನಮಗೆ ಕಷ್ಟವಾಗುತ್ತದೆ. ದೇವಾಲಯಗಳ ಹತ್ತಿರ ಬಿಲ್ವಪತ್ರೆ ಮರ, ಪಾರಿಜಾತ ಇಲ್ಲವೇ ಬನ್ನಿ ಮರಗಳಿರುತ್ತವೆ.

ವೇದಗಳಲ್ಲಿ ಅನೇಕ ಲೌಕಿಕ ಜಾನಪದ ವಿಷಯಗಳಿರುವುದು ವಿದ್ವಾಂಸರ ಗಮನ ಸೆಳೆದಿಲ್ಲ. ಇವುಗಳ ಪೈಕಿ ಜುಜೂ ಒಂದು. ಪ್ರಾಚೀನ ಜೂಜಾಟ ಪಗಡೆ (ಅಕ್ಷ) ತಯಾರಿಸುತ್ತಿದ್ದುದು ವಿಭೀತಕ (ತಾರೆಮರ)ದ ಮರದಿಂದ, ಜೂಜಗಾರನ ಜೀವನಚಿತ್ರಕ್ಕೆ ಒಂದು ಸುಂದರ ಕಾವ್ಯದ ಸೂಕ್ತ ‘ಅಕ್ಷ ಸೂಕ್ತ ಋಗ್ವೇದದಲ್ಲಿದೆ.

ಇಲ್ಲಿ ಯಾವ ದೇವರ ಸ್ತ್ರೋತ್ರವೂ ಇಲ್ಲ. ಜೂಜುಗಾರನ ದೈನಂದಿನ ಜೀವನದ ಹಾಗೂ ಅವನ ಪಶ್ಚಾತ್ತಾಪದ ನೈಜ ಚಿತ್ರಣವಿದೆ. ಜೂಜಾಡಬೇಡ ಜೀವನ ಹಾಳು ಮಾಡಿಕೊಳ್ಳಬೇಡ. ಕೃಷಿ ಮಾಡು ಎಂಬ ಸಂದೇಶವಿದೆ.

ವೇದಗಳಲ್ಲಿ ಶಾಶ್ವತ ಮೌಲ್ಯಗಳು ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಪಟ್ಟಂತೆ ಮಾತ್ರವಲ್ಲ. ಅನೇಕ ವೃತ್ತಿಗಳು (ಉದಾ: ಲೋಹಕಾರರು, ಬಡಗಿ, ಕೃಷಿಕಾರ, ಚರ್ಮ ಹದಮಾಡುವವ, ನೇಯಿಗೆಯವ, ಕಾಳು ಬೀಸುವುದು, ರಥಕಾರ, ನಾವಿಕ, ನಟ, ಜೂಜುಗಾರ, ಸೌದೆ ತರುವವ, ಕ್ಷೌರಿಕ, ಪುರೋಹಿತ, ಸೈನಿಕ) ಪ್ರಸ್ತಾವಗೊಂಡಿವೆ. ಇಲ್ಲಿ ಯಾವುದೂ ನಿಕೃಷ್ಟವಲ್ಲ. ಆಯುರ್ವೇದ ಅಥರ್ವವೇದದ ಉಪವೇದವಾದ್ದರಿಂದ ಮರಗಳ ಅನೇಕ ಔಷಧೋಪಯೋಗಗಳು ಮತ್ತು ಜಾನಪದ ಪದ್ಧತಿಗಳು ಆ ಕಾಲದ ಜನರಿಗೆ ಗೊತ್ತಿತ್ತು.

ವೇದಗಳು, ಉಪನಿಷತ್ತುಗಳು, ಪುರಾಣಗಳು ಹಾಗೂ ಮಹಾಕಾವ್ಯಗಳಲ್ಲೆಲ್ಲಾ ತರುಲತೆಗಳು ಹಾಗೂ ವನಸ್ಪತಿಗಳ ಬಗ್ಗೆ ಪ್ರಸ್ತಾಪಗಳಿವೆ. ಋಗ್ವೇದದಲ್ಲಿ ಮರಗಳಿಗೆ ಉಪಯೋಗಿಸಿರುವ ಪದ ‘ವೃಕ್ಷ, ಸಸ್ಯಗಳಿಗೆ ಉಪಯೋಗಿಸಿರುವ ಸಾಮಾನ್ಯ ಹೆಸರು ‘ವಿರುಧ. ಕಾಯಿಲೆ ಗುಣಪಡಿಸುವ ಶಕ್ತಿಯುಳ್ಳ ಸಸ್ಯಗಳನ್ಹು ‘ಔಷಧಿ ಎಂದು ಕರೆಯಲಾಗಿದೆ.

ಋಗ್ವೇದದ ಕಾಲದಲ್ಲಿ ಮರದ ನೇಗಿಲುಗಳನ್ನು, ರಥಗಳನ್ನು ಉಪಯೋಗಿಸುತ್ತಿದ್ದರು. ಯಜ್ಞಯಾಗಾದಿಗಳಿಗೆ ಬೇಕಾದ ಪಾತ್ರೆಗಳನ್ನು (ಸೃಕ್, ಸ್ರುವ, ದರ್ವಿ, ಆಕರ್ಷಫಲಕ, ಪ್ರಣೀತಾ, ಪೋಕ್ಷಿಣೀ, ಶಮ್ಯಾ, ಉಲೂಖಲ, ಮುಸಲ, ಶೂರ್ಪ, ಧೃಷ್ಟಿ, ಪಾತ್ರೀ, ಶಡವಟ್ಟಪಾತ್ರಂ, ಪ್ರಾಶಿತ್ರ ಅಭ್ರಿ, ವಿಘನ ಅಧಿಶವಣ ಫಲಕ, ದ್ರೋಣ ಕಲಶ, ಪರಿಪ್ಲೂ, ಗ್ರಹಾಸ್, ಚಮಸಗಳು, ಯೂಪ, ವಸೋರ್ಧಾರ, ಉಪಯಮನೀ, ಶಫೌ, ಧಾವಿತ್ರಾನಿ ಮುಂತಾದವು) ಮರಗಳಿಂದಲೇ ಮಾಡುತ್ತಿದ್ದರು.

ಋಗ್ವೇದ ಕಾಲದಲ್ಲಿ ಮರಗಳ ಬುಡಕ್ಕೆ ‘ಸ್ಕಂಧ ಎಂದೂ, ಬೇರುಗಳಿಗೆ ‘ಮೂಲ ಎಂದೂ, ಕಾಂಡಕ್ಕೆ ‘ಕಾಂಡವೆಂದೂ ಟೊಂಗೆಗೆ (twig)- ‘ವಲ್ಸಾ ಎಂದೂ ಕವಲುಗಳಿಗೆ ‘ಶಾಖ ಎಂದೂ ಎಲೆಗಳಿಗೆ ‘ಪರ್ಣಗಳೆಂದೂ, ಹೂಗಳಿಗೆ ‘ಪುಷ್ಪಗಳೆಂದೂ, ಹಣ್ಣುಗಳಿಗೆ ‘ಫಲಗಳೆಂದೂ ಕರೆಯಲಾಗಿದೆ.

ಸಸ್ಯಗಳನ್ನು, ವೃಕ್ಷಗಳು (ಮರಗಳು), ಔಷಧಿ (ಗಿಡಗಳು) ಲತೆಗಳು (ಮೀರತ್) ಹೂಬಿಡುವ (ಪುಷ್ಪವತಿ), ಫಲಬಿಡುವ (ಫಲವತಿ) ಹಾಗೂ ಫಲಬಿಡದ ಸಸ್ಯಗಳನ್ನಾಗಿ ವರ್ಗೀಕರಿಸುತ್ತಿದ್ದರು.

ಮರಗಳ ಪ್ರಾಮುಖ್ಯದ ಬಗ್ಗೆ ವೇದಗಳಲ್ಲಿ ಸವಿಸ್ತಾರವಾದ ವರ್ಣನೆಗಳಿವೆ. ಮರಗಿಡಗಳು ಮತ್ತು ಕಾಡುಗಳು ಮಾನವನಿಗೆ ದೇವರ ವರಪ್ರಸಾದ, ಇವುಗಳಲ್ಲದೆ ಮಾನವನ ಉಳಿವು ಕಷ್ಟ (ಋ.9.12.7; ಅ.ವೇ.20.76.1) ಅಥರ್ವವೇದದ ಪ್ರಕಾರ ದೈವಿಶಕ್ತಿ ಮರಗಿಡಗಳಲ್ಲಿದೆ. ಮರಗಳು ಮಾನವನಿಗೆ ರಕ್ಷಣೆ ಮತ್ತು ಜೀವಶಕ್ತಿಯನ್ನೇ ಕೊಡುತ್ತವೆ. ಮಾಲಿನ್ಯವನ್ನು ಕಡಿಮೆ ಮಾಡುತ್ತವೆ. (ಋ.10.17.4; 10.97.3; ಯ.ವೇ. 12.78; 12.773, 29.35).
ಋಗ್ವೇದದಲ್ಲಿ ಮಾನವನ ಉಳಿವಿಗೆ ಮರಗಳು ಅಗತ್ಯ ನಮ್ಮಿಂದ ದೂರವಾಗಬಾರದೆಂದು ಅವುಗಳನ್ನು ಕುರಿತು ಪ್ರಾರ್ಥಿಸಲಾಗಿದೆ. (ಋ. 3.53.20; 5. 41.11; 6.21.9). ನಮ್ಮ ಗೃಹಾಭ್ಯುದಯಕ್ಕೆ ಅವುಗಳ ಅಗತ್ಯವಿದೆ. ಅವುಗಳ ನಾಶ ಮಾನವನ ಅಳಿವಿಗೆ ಕಾರಣ. ವಾಸ್ತೋಶ್ಪತಿ ಮನೆಕಟ್ಟುವ ಜಾಗದ ಅಧಿಪತಿ.

ಯಜುರ್ವೇದದ ಪ್ರಕಾರ (ಯ.ವೇ.28.20) ಮರಗಳು ಮಧುರ ಫಲಗಳನ್ನು ಕೊಡುತ್ತವೆ. ಮಳೆ ಮೋಡಗಳನ್ನು ಆಕರ್ಷಿಸಿ ಮಳೆ ಬೀಳಲು ಕಾರಣವಾಗುತ್ತವೆ.

ಯಜುರ್ವೇದ ತರುಲತೆಗಳನ್ನು ಕಡಿಯುವುದನ್ನು ನಿಷೇಧಿಸುತ್ತದೆ (ಯ.ವೇ. 1.25). ಈ ಬಗ್ಗೆ ಋಗ್ವೇದದಲ್ಲಿ (ಋ. 6.48.17) ಪ್ರಸ್ತಾಪವಿದೆ. ‘ಅವು ಮಾಲಿನ್ಯ ಪರಿಹಾರಕಗಳಾದ್ದರಿಂದ ಅವನ್ನು ಕಡಿದುರುಳಿಸಬಾರದು.

ಮರಗಳ ಜೊತೆಗಿನ ಸಾಮರಸ್ಯ ಪೂರ್ಣ ಜೀವನವನ್ನು ಋಗ್ವೇದ ಪ್ರತಿಪಾದಿಸುತ್ತದೆ. ‘‘ಮರಗಳು ಬೆಳೆಯಲಿ, ಹೂ, ಹಣ್ಣುಗಳನ್ನು ಬಿಡಲಿ. ಇದರಿಂದಾಗಿ ನಾವು ಬದುಕುಳಿಯಬಹುದು (ಋ. 3.8.11). ನಾವು ಅರಣ್ಯಗಳನ್ನು ನಿರ್ಲಕ್ಷಿಸಬಾರದು (ಋ. 5.8.11). ‘ಮರಗಳು ನಮ್ಮ ಸ್ನೇಹಿತರಿದ್ದಂತೆ. ಅವನ್ನು ಸರಿಯಾಗಿ ಬೆಳೆಸಿ ರಕ್ಷಿಸೋಣ (ಋ. 6.47.26). ಮೇಲಿನ ವಾಕ್ಯಗಳಿಂದ ನಮಗೆ ಗೊತ್ತಾಗುವುದೆಂದರೆ ಋಗ್ವೇದದ ಕಾಲದಲ್ಲೇ ಪರಿಸರದ ಬಗ್ಗೆ ಉತ್ತಮ ತಿಳುವಳಿಕೆ ಇದ್ದಿತು. ಆ ಕಾಲದಲ್ಲಿ ಭೂರಮೆ, ಸಸ್ಯಶ್ಯಾಮಲೆಯಾಗಿದ್ದರೂ, ದಟ್ಟವಾದ ಅಡವಿಗಳಿದ್ದರೂ, ಅಪಾರ ವೃಕ್ಷ ಸಂಪತ್ತಿದ್ದರೂ, ಕಾಡು ಹಾಗೂ ವನಸ್ಪತಿಗಳ ಬಗ್ಗೆ ಅವರಿಗಿರುವ ಪವಿತ್ರ ಭಾವನೆ ಅವುಗಳಿಗೆ ಅವರು ಕೊಡುತ್ತಿದ್ದ ಪ್ರಾಮುಖ್ಯ, ಅವುಗಳ ರಕ್ಷಣೆಯ ಬಗ್ಗೆ ಅವರಿಗಿದ್ದ ಆಸಕ್ತಿ ಇವು ಪ್ರಶಂಸನೀಯವಾದವುಗಳು.

ಆದ್ದರಿಂದ ವೇದಗಳ ಸಂಸ್ಕೃತಿ ದ್ವಿಮುಖವಾದದ್ದು ಒಂದು ಸಾಮಾಜಿಕವಾಗಿದ್ದು ಅಂದಿನ ಜಾನಪದ ಜನಜೀವನವನ್ನು ಪ್ರತಿಫಲಿಸಿದರೆ ಹಾಗೂ ಅವರಿಗಿರುವ ಸುತ್ತಮುತ್ತಲಿನ ಪರಿಸರ, ಗಿಡಮರಗಳು ಪ್ರಾಣಿಗಳನ್ನು ತಿಳಿಸಿದರೆ ಮತ್ತೊಂದು ವೈಜ್ಞಾನಿಕ. ಅಂದು ಅವರಿಗೆ ತಿಳಿದಿದ್ದ ವೈಜ್ಞಾನಿಕ ಅಂಶಗಳನ್ನು ಅವರು ಬರೆದಿಟ್ಟಿದ್ದಾರೆ. ಆ ಪೈಕಿ ಆಯುರ್ವೇದವೂ ಒಂದು. ವೇದವೃಕ್ಷಗಳಲ್ಲಿ ಇಂತಹ ಸಾಮಾಜಿಕ ಹಾಗೂ ವೈಜ್ಞಾನಿಕ ಅಂಶಗಳೆರಡನ್ನೂ ಪರಿಗಣಿಸಲಾಗಿದೆ.

ಋಗ್ವೇದ ಕಾಲದ ಋಷಿಮುನಿಗಳಿಗೆ ಅಂದಿನ ಸಸ್ಯವರ್ಗದ ಬಗ್ಗೆ ಹಾಗೂ ತಮ್ಮ ಪರಿಸರದ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇತ್ತು. ಅಶ್ವತ್ಥ, ಔದುಂಬರ, ಮುತ್ತುಗ, ಶಮಿ ಮುಂತಾದ ವೃಕ್ಞಗಳನ್ನು ದೈವೀಭಾವನೆಯಿಂದ ಪೂಜಿಸುವ ಸಂಪ್ರದಾಯ ಬಹುಶಃ ಋಗ್ವೇದದ ಕಾಲದಿಂದಲೇ ಬಂದಿರಬಹುದು ಅಥವಾ ಇದು ಇನ್ನೂ ಪ್ರಾಚೀನ ಸಂಪ್ರದಾಯವಾಗಿರಬಹುದು.

ದೇವ ವೈದ್ಯರುಗಳಾದ ಅಶ್ವಿನಿದೇವತೆಗಳ ಬಗ್ಗೆ ವಿವರಗಳು ದೊರಕಲು ಪ್ರಾರಂಭವಾಗುವುದೇ ಋಗ್ವೇದದಿಂದ. ಮುದಿತನ ಹಾಗೂ ಜೀರ್ಣ ಶರೀರಗಳಿದ್ದ ಚ್ಯವನನಿಗೆ ಮುಪ್ಪನ್ನು ಜಯಿಸುವಂತೆ ಮಾಡಿ ದೀರ್ಘಾಯುವಾಗುವಂತೆ ಮಾಡಿದ ಹಿರಿಮೆ ಅಶ್ವಿನಿದೇವತೆಗಳಿದ್ದು. ಮುಂದೆ ಆಯುರ್ವೇದ ಸ್ವತಂತ್ರವಾಗಿ ಬೆಳೆಯುವುದಕ್ಕೆ ಇದು ನಾಂದಿಯಾಗಿರಬಹುದೆಂದು ಕೆಲವರ ಅಭಿಪ್ರಾಯ. ಅಥರ್ವಣ ವೇದಕ್ಕೆ ಆಯುರ್ವೇದ ಉಪದೇಶವಾಗಿದೆ.

‘‘ಯುವಂ ಚ್ಯವನಂ ಜರಸ್ತೋಮು ಮುಕ್ತಂ (ಋ. 6.17.5) ಚ್ಯವನನ ಜೀರ್ಣದೇಹಕ್ಕೆ ಯೌವನವನ್ನು ತರಿಸಿಕೊಟ್ಟದ್ದು ಆಯುರ್ವೇದದ ಒಂದು ಚಮತ್ಕಾರ. ಇಂದಿಗೂ ಕೂಡ ಕೇರಳದ ಆಯುರ್ವೇದ ಔಷಧಾಲಯಗಳು ಕಾಯಕಲ್ಪ ಚಿಕಿತ್ಸೆಗಳನ್ನು ನೀಡುತ್ತಿವೆ.

ಇಷ್ಟು ಮಾತ್ರವಲ್ಲ ವಂದನನಿಗೆ ದೃಷ್ಟಿಯನ್ನು ಕಣ್ಣಿನ ಚಿಕಿತ್ಸೆಯನ್ನು ಅಶ್ವಿನಿಗಳು ನೀಡಿದ್ದಾರೆ:
‘‘ಉದ್ ವಂದನಂ ಐರಯತಂ ಸ್ವದೃಶೇ (ಋ. 1.112.5)
ದೇವತೆಗಳಾದ ಇಂದ್ರ, ರುದ್ರ ಹಾಗೂ ವರುಣರಿಗೂ ರೋಗ ನಿವಾರಣಾಶಕ್ತಿ ಇತ್ತು. ರುದ್ರನಲ್ಲಿ ಸಾವಿರಾರು ಔಷಧ ಸಸ್ಯಗಳಿವೆ:
‘‘ಸಹಸ್ರಂ ತೇ ಸ್ವಪಿವಾತ ಭೇಷಜಾ (ಋ. 7.46.3.) ಇಲ್ಲಿ ಯಜ್ಞಗಳು, ಹೋಮಗಳಿಗೆ ಉಪಯೋಗಿಸಲಾಗುವ ಅನೇಕ ಗಿಡಮರಗಳ ಸಮಿತ್ತುಗಳು ಹಾಗೂ ಘೃತ (ತುಪ್ಪ), ತಿಲ (ಎಳ್ಳು), ದರ್ಭೇ- ಇತ್ಯಾದಿಗಳಲ್ಲೂ ರೋಗನಾಶಕ ಶಕ್ತಿ ಇರುವುದೆಂದು ನಂಬಲಾಗಿದೆ.

ಪ್ರಕೃತಿಯ ಅವಿಭಾಜ್ಯ ಅಂಗಗಳಾದ ಉಷೆ, ನದಿ, ಪರ್ವತಗಳಂತೆಯೇ ಋಗ್ವೇದದ ಚಿಂತನೆಯ ಪರಿಧಿಯಲ್ಲಿ ಮರಗಳೂ ದೈವಿಕತೆ ಪಡೆದಿವೆ.
ದೇವರ ಸರ್ವ ವ್ಯಾಪಕತೆ ಹಾಗೂ ಸರ್ವಾಂತರ್ಯಾಮಕ ಶಕ್ತಿಯನ್ನು ಋಗ್ವೇದ ಸಾಕ್ಷಾತ್ಕರಿಸಿಕೊಂಡಿದೆ. ಪ್ರಕೃತಿ, ವೃಕ್ಷಗಳು ಹಾಗೂ ಪಕ್ಷಿಗಳಲ್ಲೂ ಜೀವ ಹಾಗೂ ದೈವಿಕತೆಯನ್ನು ಕಾಣಲಾಗಿದೆ.

ಖದಿರ, ಪಲಾಶ, ಶಮಿ, ಶಾಲ್ಮಲಿ, ಔದುಂಬರ, ಶಿಂಶುಪಾ ಮೊದಲಾದ ಅನೇಕ ವೃಕ್ಷಗಳ ಪ್ರಸ್ತಾಪ ಋಗ್ವೇದದಲ್ಲಿದ್ದರೂ ಅಶ್ವತ ಅಥವಾ ಅರಳೀಮರ ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಈ ಮರದಿಂದಲೇ ಸೋಮರಸದ ಪಾತ್ರೆಗಳನ್ನ ತಯಾರಿಸುತ್ತಿದ್ದರು. ಇದರ ಒಣಮರದ ತುಂಡನ್ನು (ಅರಣಿಗಳು) ಕಡೆಯುವುದರ ಮೂಲಕ ಪವಿತ್ರಾಗ್ನಿಯನ್ನು ಉತ್ಪತ್ತಿ ಮಾಡುತ್ತಿದ್ದರು. ಇಂದಿಗೂ ಕೂಡ ಅರಳೀಮರದ ಸಮಿತ್ತುಗಳನ್ನು ಯಜ್ಞಯಾಗಾದಿಗಳಲ್ಲಿ, ಹೋಮಗಳಲ್ಲಿ ಉಪಯೋಗಿಸುವುದನ್ನು ನಾವು ಕಾಣಬಹುದು. ಕಬ್ಬು, ಬಾರ್ಲಿ, ದರ್ಬೆ, ಎಳ್ಳು, ಅರಣ್ಯಗಳಿಂದ ಬಗೆಬಗೆಯ ಹಣ್ಣುಗಳು, ಸುಂದರವಾದ ಹೂಬಿಡುವ ಬಳ್ಳಿಗಳು ಇವುಗಳ ಬಗ್ಗೆ ಋಗ್ವೇದದಲ್ಲಿ ಪ್ರಸ್ತಾಪಿಸಲಾಗಿದೆ. ಈ ವೇದದ ‘ಅರಣ್ಯಾನಿ ಮಂಡಲದಲ್ಲಿ ಅರಣ್ಯಗಳ ಸುಂದರ ವರ್ಣನೆ ಇದೆ.

ನಾಳೆ: ಪ್ರಕೃತಿ ಪೂಜೆಯ ಧರ್ಮಕ್ಕೂ ಋಗ್ವೇದೀಯ ಸಮಾಜವೇ ಕಾರಣ


Get In Touch With Us info@kalpa.news Whatsapp: 9481252093

Tags: Dr Gururaj PoshettihalliKannadaNewsWebsiteLatestNewsKannadaRigvedaಋಗ್ವೇದಡಾ. ಗುರುರಾಜ ಪೋಶೆಟ್ಟಿಹಳ್ಳಿಪ್ರಕೃತಿ
Share202Tweet123Send
Previous Post

ಆಶಾ ಕಾರ್ಯಕರ್ತೆಯರ ಬಾಳು ಹಸನಾಗಲಿ: ಕೆ.ವಿ. ರಾಮಚಂದ್ರ

Next Post

ಸರಕು ಸಾಗಾಣಿಕೆ ಅಕ್ರಮ:ಸಾರಿಗೆ ಕಂಪೆನಿಗಳ ವಿರುದ್ಧವೂ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸರಕು ಸಾಗಾಣಿಕೆ ಅಕ್ರಮ:ಸಾರಿಗೆ ಕಂಪೆನಿಗಳ ವಿರುದ್ಧವೂ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

February 28, 2026
ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

February 28, 2026
ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

February 28, 2026
ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

February 28, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಮಾರ್ಚ್ 1 ರಂದು ಬೆಂಗಳೂರಿನಿಂದ ಮುಂಬೈಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

February 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL