ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಕ್ಷಿಣ ಕನ್ನಡ: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧಕ್ಕೊಳಗಾಗಿರುವ ಅಮೂಲ್ಯ ವಿಚಾರದಲ್ಲಿ ಆಕೆಯ ತಂದೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗಳ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನನ್ನ ಮಗಳು ಮಾಡಿದ್ದು ತಪ್ಪು. ಇದನ್ನು ನಾವು ಒಪ್ಪುವುದಿಲ್ಲ. ಇವೆಲ್ಲಾ ಬೇಡ, ಬಿಟ್ಟು ಬಾ ಎಂದು ಬಹಳಷ್ಟು ಬಾರಿ ಬುದ್ದಿ ಹೇಳಿದ್ದೇವೆ. ಆದರೆ, ಅವಳು ಕೇಳಲಿಲ್ಲ. ಈಗ ಒಂದು ವಾರದಿಂದ ಅವಳೊಂದಿಗೆ ನಮಗೆ ಸಂಪರ್ಕವಿಲ್ಲ ಎಂದಿದ್ದಾರೆ.
#WATCH "What Amulya said is wrong. She was joined by some Muslims&wasn't listening to me,"father of Amulya (who raised 'Pakistan zindabad'slogan at anti-CAA rally in Bengaluru today). He was confronted by unidentified men who were standing around him while he made the statement. pic.twitter.com/S0OQ2SpUXT
— ANI (@ANI) February 20, 2020
ಸ್ಥಳೀಯರು ಅವರ ಮನೆಗೆ ತೆರಳಿ ತಮ್ಮ ಮಗಳ ಕೃತ್ಯವನ್ನು ಖಂಡಿಸಿದ್ದು, ಮಗಳಿಗೆ ನಾವು ಜಾಮೀನು ಕೊಡುವ ಅಥವಾ ವಕೀಲರನ್ನು ನೇಮಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಕೊನೆಗೆ ಸ್ಥಳೀಯರ ಒತ್ತಡಕ್ಕೆ ಮಣಿದು ಭಾರತ್ ಮಾತಾ ಕಿ ಜೈ ಎಂದು ಅವರು ಘೋಷಣೆ ಕೂಗಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post