ಕಲ್ಪ ಮೀಡಿಯಾ ಹೌಸ್ | ಪಣಜಿ |
ತಾನು ಜನ್ಮ ನೀಡಿದ ಕರುಳ ಕುಡಿಯನ್ನೇ ಕೊಂದ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ Suchana Seth ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಹತ್ಯೆ ಮಾಡಿರುವ ಕಾರಣವನ್ನು ಬಿಚ್ಚಿಟ್ಟಿದ್ದಾಳೆ.
ಚಿತ್ರದುರ್ಗದಲ್ಲಿ ಬಂಧಿಸಿದ ಆಕೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಗೋವಾ ಪೊಲೀಸರ ವಿಚಾರಣೆಯ ವೇಳೆ ಹಲವು ವಿಚಾರಗಳನ್ನು ಆಕೆ ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ತನ್ನ ಪತಿ ವೆಂಕಟರಮಣ ಅವರೊಂದಿಗೆ ತನಗೆ ವಿಚ್ಛೇದನವಾಗಿದ್ದು, ಪ್ರತಿ ವಾರ ಅವರಿಗೆ ವೀಡಿಯೋ ಕಾಲ್ ಮೂಲಕ ಮಗುವನ್ನು ತೋರಿಸಬೇಕಿತ್ತು. ಆದರೆ, ಗಂಡನಿಗೆ ಮಗುವನ್ನು ತೋರಿಸಲು ಇಷ್ಟವಿರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು ಎಂದು ಒಪ್ಪಿಕೊಂಡಿದ್ದಾಳೆ.
Also read: ಶಿವಮೊಗ್ಗ | ಮೃತದೇಹ ಶೀತಲೀಕರಣ ಫ್ರೀಜರ್ ಬಾಕ್ಸ್ ಲೋಕಾರ್ಪಣೆ
ಮಗುವನ್ನು ಸಾಯಿಸಿದ ನೋವಿನಲ್ಲಿ ಕೈ ಕುಯ್ದ ಆತ್ಮಹತ್ಯೆಗೆ ಯತ್ನಿಸಿದೆ, ಆದರೆ ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನು ಮಾಡಬೇಕೆಂದು ತೋಚದೆ ಸೂಟ್ ಕೇಸ್ ನಲ್ಲಿ ಮಗುವಿನ ಬಾಡಿ ಹಾಕಿ ಪರಾರಿಯಾಗಲು ಯತ್ನಿಸಿದೆ ಎಂದು ವಿವರಿಸಿದ್ದಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















