ಕಲ್ಪ ಮೀಡಿಯಾ ಹೌಸ್ | ಪಾಟ್ನಾ |
ಇನ್ನು ಮುಂದೆ ಯಾದವರು ಹಾಗೂ ಮುಸ್ಲೀಮರು ಯಾವುದೇ ರೀತಿಯ ಸಹಾಯವನ್ನು ನಿರೀಕ್ಷಿಸಬೇಡಿ ಎಂದು ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ #MP Deveshchandra Takur ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಮುಸ್ಲಿಮರು ಹಾಗೂ ಯಾದವರು ಮತ ಹಾಕಿಲ್ಲ ಆದ್ದರಿಂದ ತಮ್ಮಿಂದ ಈ ಎರಡೂ ಸಮುದಾಯದವರು ಯಾವುದೇ ಸಹಾಯ ನಿರೀಕ್ಷಿಸಬಾರದು ಎಂದಿದ್ದಾರೆ.
Also read: ದರ್ಶನ್’ಗೆ ಮತ್ತೊಂದು ಸಂಕಷ್ಟ | ತೂಗುದೀಪ ನಿವಾಸಕ್ಕೂ ಸಂಚಕಾರ? ಏನಿದು ಪ್ರಕರಣ
ನಾನು ಸೂರಿಸ್ (ಮೀನುಗಾರ ಸಮುದಾಯ) ಮತ್ತು ಕಲ್ವಾರ್ಗಳ ಮತಗಳನ್ನು ಪಡೆದಿಲ್ಲ. ಕುಶ್ವಾಹಗಳು ಸಹ ನನ್ನನ್ನು ತೊರೆದರು. ಗೌರವಾನ್ವಿತ ಲಾಲು ಪ್ರಸಾದ್ (ಆರ್’ಜೆಡಿ ವರಿಷ್ಠ) ಅನೇಕ ಕುಶ್ವಾಹಗಳಿಗೆ ಟಿಕೆಟ್ ನೀಡಿದ ಕಾರಣಕ್ಕಾಗಿ. ಬೇರೆಡೆಯಿಂದ ಆಯ್ಕೆಯಾದ ಕುಶ್ವಾಹ ಸದಸ್ಯರು ನನ್ನ ಕ್ಷೇತ್ರದಲ್ಲಿರುವ ಆ ಸಮುದಾಯಕ್ಕೆ ಏನಾದರೂ ಸಹಾಯ ಮಾಡಬಹುದೇ? ಎಂದು ಪ್ರಶ್ನಿಸಿದ್ದಾರೆ.
ಯಾದವರು ಮತ್ತು ಮುಸ್ಲಿಮರು ನನ್ನಿಂದ ಯಾವುದೇ ಸಹಾಯವನ್ನು ನಿರೀಕ್ಷಿಸಬಾರದು ಎಂದು ನಾನು ಸ್ಪಷ್ಟಪಡಿಸಿದ್ದೇನೆ. ಅವರು ನನ್ನನ್ನು ಭೇಟಿಯಾದಾಗ ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು. ಚಹಾ ಮತ್ತು ತಿಂಡಿಗಳನ್ನು ಸಹ ನೀಡಲಾಗುವುದು. ಆದರೆ ನಾನು ಅವರ ಯಾವುದೇ ಸಮಸ್ಯೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post