ಉಡುಪಿ: ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ದಿವ್ಯ ನೇತೃತ್ವದಲ್ಲಿ ಅ.21ರಂದು ಉಡುಪಿ ಶ್ರೀಕೃಷ್ಣ ಮಠದಿಂದ ನೀರಾವರ ಗೋಶಾಲೆಯವರೆಗೂ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಹಿರಿಯ ಶ್ರೀಗಳೊಂದಿಗೆ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರೂ ಸಹ ಪಾಲ್ಗೊಳ್ಳಲಿದ್ದು, ಅಂದು ಮುಂಜಾನೆ 8 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ.
ಯಾತ್ರೆಯು ಶ್ರೀಕೃಷ್ಣ ಮಠದಿಂದ ಆರಂಭಗೊಂಡು, ಕಲ್ಸಂಕ, ಗುಂಡಿಬೈಲು, ಅಂಬಾಗಿಲು, ಸಂತೆಕಟ್ಟೆ, ನಯಂಪಳ್ಳಿ ಮಡಿ ಮಲ್ಲಿಕಾರ್ಜುನ ದೇವಸ್ಥಾನ, ಉಪ್ಪೂರು, ಹೆರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬ್ರಹ್ಮಾವರ ಕೃಷಿ ಕೇಂದ್ರದ ಒಳಗಿನಿಂದ ಸಾಗಿ ಕುಂಜಾಲು ಮಾರ್ಗವಾಗಿ ಗೋಶಾಲೆ ತಲುಪಲಿದೆ.
ಈ ವಿಶೇಷ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಗವದ್ಬಕ್ತರು ಅಕ್ಟೋಬರ್ 19ರ ಒಳಗಾಗಿ ಶ್ರೀ ಪೇಜಾವರ ಮಠದ ಕಾರ್ಯಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
ಮಾಹಿತಿಗಾಗಿ ಕೃಷ್ಣ ಭಟ್(9449082198) ಅವರನ್ನು ಸಂಪರ್ಕಿಸಬಹುದು.
Discussion about this post