No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Thursday, May 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಸುಬ್ರಹ್ಮಣ್ಯದಲ್ಲಿ ಅಸಂಭದ್ದ ರಾಜಕೀಯ: ರಾಜ್ಯಕ್ಕೇ ಮಾರಕವಾದೀತು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 22, 2018
in Army
0
Share on FacebookShare on TwitterShare on WhatsApp

ಸುಬ್ರಹ್ಮಣ್ಯದಲ್ಲಿ ನೃಸಿಂಹ ಮಠ

ಈಗ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ದೇವರ ಬಲಭಾಗದಲ್ಲಿ ನೃಸಿಂಹ ದೇವರ ಗುಡಿಯೂ, ಎಡ ಭಾಗದಲ್ಲಿ ಉಮಾಮಹೇಶ್ವರ ದೇವರ ಗುಡಿಯೂ ಇದೆ. ಈ ನೃಸಿಂಹಸ್ವಾಮಿ ದೇವರ ಗುಡಿಯು ಸಿದ್ಧಿ ವಿನಾಯಕನ ಗುಡಿ ಎಂದು ಈಗಿನ ವಾದ.

ವಿನಾಯಕನನ್ನು ಸ್ಥಳಾಂತರ ಮಾಡಿ ನೃಸಿಂಹ ದೇವರನ್ನು ಮಾಧ್ವರು ಇಟ್ಟಿದ್ದಾರೆ ಎಂದು ಯಾರೋ ಒಂದು ಪುಸ್ತಕವನ್ನೂ ಬರೆದು ಹಾಕಿದರು. ಅವರು ದೇವಸ್ಥಾನದಲ್ಲಿ ಸಂಶೋಧನೆ ಮಾಡಿ ಬರೆದಿದ್ದಾಗಿದೆ ಎಂದೂ ಹೇಳಿಕೊಂಡಿದ್ದಾರೆ. ಮುಂದೆ ಈ ಪುಸ್ತಕದಲ್ಲಿ ಏನೇನೋ ಬರೆಯುತ್ತಾ ಹಿಂದೆ ಹಿಂದೆ ಹೋಗುತ್ತಾ ಸುಮಾರು 1850 ರ ವರೆಗೆ ಹೋಗಿದ್ದಾರೆ. ಅಲ್ಲಿಂದ ಹಿಂದೆ ದಾರಿ ಸಿಗಲಿಲ್ಲ.

ಮೊದಲೇನಿತ್ತು ಅಲ್ಲಿ? ಎಂಬುದು ತಿಳಿಯಬೇಕಾದರೆ, ವಿಷ್ಣು ತೀರ್ಥರಿಂದ ಬರಬೇಕು. ಅದಕ್ಕೆ 18 ನೆಯ ಶತಮಾನದ ಚಿಂತನೆ ಸಾಲದು. ಅದನ್ನು ತಿಳಿಯಬೇಕಾದರೆ 12 ನೆಯ ಶತಮಾನದಿಂದ ಬರಬೇಕು.

1238 ರಲ್ಲಿ ಮಧ್ವಾಚಾರ್ಯರ ಜನನ. ಅಲ್ಲಿಂದ ನಂತರ ಅವರ ಯತಿದೀಕ್ಷೆ, ತಮ್ಮ ವಿಷ್ಣು ತೀರ್ಥರ ಯತಿದೀಕ್ಷೆ, ಸುಬ್ರಹ್ಮಣ್ಯಕ್ಕೆ ಆಗಮನ, ಇತ್ಯಾದಿ ಅನೇಕಾನೇಕ ವಿಚಾರಗಳಿವೆ. ಆಗಲೇ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯ ಇತ್ತು. ಬಹುಷಃ ಇದರ ಕಾಲ ಮಾನದ ಬಗ್ಗೆ ಸ್ಕಾಂದ ಪುರಾಣವನ್ನು ಅಧ್ಯಯನ ಮಾಡಿದರೆ ತಿಳಿಯಬಹುದು.

ಯಾವಾಗ ಮಧ್ವಾಚಾರ್ಯರು ವಿಷ್ಣು ತೀರ್ಥರ ಜತೆಗೆ ಈ ಕ್ಷೇತ್ರಕ್ಕೆ ಆಗಮಿಸಿದರೋ ಅಲ್ಲಿ ಈ ಯತಿವರೇಣ್ಯರು ಅಲ್ಲಿನ ಮಹತ್ವ ತಿಳಿದು ವಿಷ್ಣು ತೀರ್ಥರು ಅಲ್ಲಿಯೇ ಒಂದು ಮಠ ಸ್ಥಾಪನೆ ಮಾಡಿದರು. ಯಾಕೆಂದರೆ ಆ ಕ್ಷೇತ್ರದ ಜನರು ಆಗ ಅರ್ಥ ತಿಳಿಯದ ಶೈವ ಸಂಪ್ರದಾಯ ಪಾಲನೆ ಮಾಡಿಕೊಂಡು, ಶ್ರೀಸುಬ್ರಹ್ಮಣ್ಯನಿಗೆ ಪೂಜೆ ಮಾಡುತ್ತಿದ್ದರು. ಮಧ್ವಾಚಾರ್ಯರು ವಿಷ್ಣು ತೀರ್ಥರೊಂದಿಗೆ ಈ ಪೂಜಾ ವಿಧಾನದಲ್ಲಿ ಒಂದು ಮಾಧ್ವಸಂಪ್ರದಾಯದ ಆಗೋಕ್ತ ವಿಧಾನಕ್ಕೆ ಪರಿವರ್ತನೆ ಮಾಡಿದವರು.

ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪ್ಯಾಡಿ ಮಠ, ಕಾಣಿಯೂರು ಮಠ, ಕೊಕ್ಕಡದ ಎಡಪ್ಪಾಡಿತ್ತಾಯ ಕುಟುಂಬದ ಮೂಲಕ ಅಭಿವೃದ್ಧಿಪಡಿಸಿದರು. ಅದೇ ಎಡಪ್ಪಾಡಿತ್ತಾಯ ವಂಶಸ್ಥರಿಂದಲೇ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆಯುವಂತೆಯೂ ಮಾಡಿದರು. ಈಗಲೂ ಈ ಕುಟುಂಬಸ್ಥರಲ್ಲಿ ಅನೇಕ ಪುರಾವೆಗಳಿವೆ. ಉಪ್ಪಿನಂಗಡಿಯ ಹತ್ತಿರದ ಇರ್ಕೀ ಮಠದಲ್ಲಿ ಈಗಲೂ ಮಧ್ವಾಚಾರ್ಯ ಕರಾರ್ಚಿತ ಕೇಶವ ದೇವರು, ಎಡಪ್ಪಾಡಿತ್ತಾಯರ ಕುಟುಂಬದಲ್ಲಿ, ಅಮ್ಮಣ್ಣಾಯರ ಕುಟುಂಬದಲ್ಲಿ ಇತ್ಯಾದಿ ಹನ್ನೆರಡು ವಂಶಗಳಿಗೆ ಕೇಶವಾದಿ ದ್ವಾದಶ ಮೂರ್ತಿಗಳನ್ನು ಕೊಟ್ಟಂತಹ ದಾಖಲೆಗಳಿವೆ.

ಶೈವ ಸಂಪ್ರದಾಯವನ್ನು ಆಚಾರ್ಯರೆಂದೂ ವಿರೋಧಿಸಲಿಲ್ಲ. ಆದರೆ ಅದನ್ನು ವಿಷ್ಣು ಪ್ರೀತ್ಯರ್ಥವಾಗಿಯೇ ಮಾಡಬೇಕೆಂದು ಜಗತ್ತಿಗೆ ಸಾರಿದರು. ಯಾಕೆಂದರೆ ಮಹಾವಿಷ್ಣು ಮಾತ್ರ ಮೋಕ್ಷಕಾರಕ. ಇತರ ದೇವರು ಸಂಪತ್ತು, ರಕ್ಷಣೆ, ಪೀಳಿಗೆಗಳನ್ನು ಕೊಡುವಂತಹ ಶಕ್ತಿಸಂಪನ್ನರು. ಅಂತಹ ದೇವರನ್ನೆಲ್ಲ ಆರಾಧಿಸಿ ಭಗವಾನ್ ‘ವಾಸುದೇವ ಪ್ರಿಯಂತಾಂ’ ಎಂದು ಅರ್ಪಣೆ ಮಾಡಬೇಕು ಎಂದು ತತ್ವೋಪದೇಶ ಮಾಡಿದರು.

ಸುಬ್ರಹ್ಮಣ್ಯದಲ್ಲಿ ಮಧ್ವಾಚಾರ್ಯರ ಪ್ರವೇಶಕ್ಕೆ ಮುನ್ನ ಆಗಮಾದಿಗಳು ತಾತ್ವಿಕವಾಗಿ ಇರಲಿಲ್ಲ. ಅಲ್ಲದೆ ಸುಬ್ರಹ್ಮಣ್ಯನ ಆಗ್ನೇಯ ಭಾಗದಲ್ಲಿದ್ದ ಗಣಪತಿಯನ್ನು ತೆಗೆದು ನೃಸಿಂಹ ದೇವರನ್ನಿಟ್ಟರು. ಈ ಗಣಪತಿಗೆ ವಿಶೇಷ ಸಾನ್ನಿಧ್ಯವನ್ನು ಕಲ್ಪಿಸಿ ಗುಪ್ತ ಗಣಪತಿಯಾಗಿ ಸುಬ್ರಹ್ಮಣ್ಯ ದೇವರ ಪಕ್ಕದಲ್ಲೇ ಇರಿಸುವ ಕೆಲಸ ಮಾಡಿದರು. ಇಂದಿಗೂ ಈ ಗಣಪತಿ ಗುಪ್ತವಾಗಿ ಪೂಜಿಸಲ್ಪಡುತ್ತದೆ. ಅರ್ಚಕರ ವಿನಾ ಯಾರೂ ಇದನ್ನು ನೋಡಿದವರಿಲ್ಲ. ಇದುವೇ ಸುಬ್ರಹ್ಮಣ್ಯದ ರಹಸ್ಯ ವಿಚಾರ. ಇದನ್ನು ನೋಡಿ ನಮಗೇನಾಗಬೇಕು ಹೇಳಿ. ಗಣಪತಿ ದೇವರ ಅನುಗ್ರಹ ಸಿಕ್ಕಿದರೆ ಸಾಕು.

ಆದರೆ ಕೆಲವರು ನೋಡಿಯೇ ತೀರಬೇಕೆಂದು ಒಮ್ಮೆ ಹಠ ಹಿಡಿದರು. ಸುಮಾರು ಎಂಬತ್ತು ವರ್ಷದ ಹಿಂದಿನ ಕಥೆ ಇದು. ಆಗ ಅರ್ಚಕರಲ್ಲೊಬ್ಬರು ತನ್ನಿಚ್ಚೆಯ ಮೂಲಕ ಆಗಿನ ಆಡಳಿತ ಸಮಿತಿಗೆ ಈ ಗಣಪತಿಯ ಮೂರ್ತಿಯನ್ನು ತೋರಿಸಿಬಿಟ್ಟರು. ಇದರಿಂದ ಅಂದರೆ ಈ ವೀಕ್ಷಣೆಯಿಂದ ಗಣಪತಿ ಮೂರ್ತಿಯು ಅಶುದ್ಧವಾಯ್ತು. ಪರಿಣಾಮ ಆರ್ಚಕರ ಕೈಗೆ ನಾಗರ ಹಾವು ಕಡಿಯಿತು. ಮುಂದೆ ದೇವರ ಪೂಜೆಯೂ ಕೈತಪ್ಪಿ ಅದೆಷ್ಟೋ ಸಮಯದವರೆಗೆ ಕೊಳೆತ ಕೈಯಲ್ಲಿ ಜೀವನ ಸಾಗಿಸುತ್ತಾ, ವೇಧನೆ ಅನುಭವಿಸುತ್ತಾ ಮೃತಿ ಹೊಂದಿದರು. ಒಂದು ಶಕ್ತಿಯನ್ನು ಕೆಣಕಿದರೆ ಏನಾಗುತ್ತೆ ಎಂಬುದಕ್ಕೆ ಇದೊಂದು ನಿದರ್ಶನವೂ ಆಯಿತು.

ಯಾವುದೇ ದೇವಸ್ಥಾನದಲ್ಲಿ ಗಣಪತಿಯ ಗುಡಿಯು ಅಲ್ಲಿನ ಪ್ರಧಾನ ದೇವರಿಗೆ ನೈರುತ್ಯ ಭಾಗದಲ್ಲೇ ಇರಬೇಕು ಎಂಬುದು ಆಗಮ ಶಾಸ್ತ್ರ ವಿಚಾರ. ಅಂತಹದ್ದರಲ್ಲಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗ ಇರುವ ನೃಸಿಂಹ ದೇವರ ಗುಡಿಯಲ್ಲೇ ಇರಬೇಕೆಂಬ ವಾದವು ಆಗಮ ಶಾಸ್ತ್ರದ ವಿರೋಧ ವಿಚಾರವೂ ಆಗುತ್ತದೆ. ಹಾಗಾಗಿ ಹಿರಿಯರಿಂದ ಆಗಮೋಕ್ತವಾಗಿ ನಡೆದುಕೊಂಡು ಬಂದದ್ದನ್ನು ಬದಲಾವಣೆ ಮಾಡಲು ಹೋಗುವುದು ಅಪಾಯಕಾರಿ ಕೆಲಸ. ಯಾರೋ ಒಬ್ಬರು ಪುಸ್ತಕದಲ್ಲಿ ಬರೆದರು ಮತ್ತು ಅದುವೇ ಸರಿಯಾದದ್ದು ಎಂಬ ವಿಚಾರವನ್ನು ಮುಂದಿಟ್ಟುಕೊಂಡು ತಕರಾರು ಎಬ್ಬಿಸುವುದು ಸರಿಯಾಗದು.

ಒಟ್ಟಿನಲ್ಲಿ ಹಿಂದೆ ಈ ರೀತಿ ದೇವಸ್ಥಾನ ರಾಜಕೀಯ ಇರಲಿಲ್ಲ. ಅಲ್ಲಿ ಭಕ್ತರ ಮನಸೋಭಿಷ್ಟಾರ್ಥ ಸಿದ್ಧಿಗಾಗಿ ಆಗಮೋಕ್ತ ವಿಚಾರಗಳನ್ನು ತಜ್ಞರು ಅಳವಡಿಸಿದ್ದರು. ಈಗಿನವರಿಗೆ ಅದರ ಬಗ್ಗೆ ನಿಖರ ಮಾಹಿತಿ ಇಲ್ಲದಿರುವುದರಿಂದ ಈ ರೀತಿ ಅಸಂಭದ್ದ ರಾಜಕೀಯ ಮಾಡುತ್ತಾರೆ. ಇದು ಇಡೀ ರಾಜ್ಯದ ಅಭಿವೃದ್ಧಿಗೆ ಮಾರಕವೇ ಆಗುತ್ತದೆ. ಕೇವಲ ಹಣದ ಆಸೆಗಾಗಿ ಬ್ರಾಹ್ಮಣರು ಮಾಡಿದ ಕೆಲಸ ಇದು ಎಂದು ಹೇಳುವುದು ಬಾಲಿಷ ಮಾತಾಗುತ್ತದೆ. ಆದರೆ ಕೆಲ ಬ್ರಾಹ್ಮಣರು ಇಂತಹ ಧನಾಗ್ರಹದ ಕೆಲಸ ಮಾಡಲಾರರು ಎಂದೂ ಹೇಳುತ್ತಿಲ್ಲ. ಬ್ರಾಹ್ಮಣ ಎಂದರೆ ತತ್ವಾಧಾರಿತವಾಗಿ ಮಾಡುವ ಒಂದು ನೀತಿಯಾಗುತ್ತದೆಯೇ ಹೊರತು, ಜಾತಿಯಲ್ಲ.

Tags: Kukke Shri Subrahmanya templePolitics in Kukke TemplePrakash Ammannaya
Share196Tweet123Send
Previous Post

ಪಾಕ್‌ಗೆ ಒನ್ ವೇ ಟಿಕೇಟ್ ಕೊಡಿಸ್ತೀವಿ: ಸೋಜ್‌ಗೆ ಸ್ವಾಮಿ ವ್ಯಂಗ್ಯ

Next Post

ನಾಲ್ವರು ಉಗ್ರರನ್ನು ಅಟ್ಟಾಡಿಸಿ ಬೇಟೆಯಾಡಿದ ಭಾರತೀಯ ಸೇನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಾಲ್ವರು ಉಗ್ರರನ್ನು ಅಟ್ಟಾಡಿಸಿ ಬೇಟೆಯಾಡಿದ ಭಾರತೀಯ ಸೇನೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮದುವೆಗೂ ಮುನ್ನ ಯಾರನ್ನೂ ನಂಬಬೇಡಿ, ವಿವಾಹಪೂರ್ವ ದೈಹಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮದುವೆಯಾಗುವುದಾಗಿ ಹೇಳಿ ಒಪ್ಪಿತ ದೈಹಿಕ ಸಂಬಂಧ ಅತ್ಯಾಚಾರವಲ್ಲ | ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

May 7, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಯಶವಂತಪುರ-ಶಿವಮೊಗ್ಗ ಎಕ್ಸ್’ಪ್ರೆಸ್, ಮೈಸೂರು-ಬೆಳಗಾವಿ ವಿಶ್ವಮಾನವ ರೈಲುಗಳ ಬಿಗ್ ಅಪ್ಡೇಟ್

May 7, 2026
ಮೇ.9, 10ರಂದು ಅಕ್ಷರಗಳ ಸಂಭ್ರಮ ಶಿವಮೊಗ್ಗ ಸಾಹಿತ್ಯ ಹಬ್ಬ

ಮೇ.9, 10ರಂದು ಅಕ್ಷರಗಳ ಸಂಭ್ರಮ ಶಿವಮೊಗ್ಗ ಸಾಹಿತ್ಯ ಹಬ್ಬ

May 7, 2026
ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ರಿವರ್ ಸ್ಟೋರ್‌ಗೆ ಮಾಜಿ ಡಿಸಿಎಂ ಈಶ್ವರಪ್ಪ ಚಾಲನೆ

ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ರಿವರ್ ಸ್ಟೋರ್‌ಗೆ ಮಾಜಿ ಡಿಸಿಎಂ ಈಶ್ವರಪ್ಪ ಚಾಲನೆ

May 7, 2026
ಮೈಸೂರು | ರೈಲ್ವೆ ಸಿಗ್ನಲ್ ಕೇಬಲ್ ಕಳವು | ಚಿತ್ರದುರ್ಗದ ಇಬ್ಬರ ಬಂಧನ

ಮೈಸೂರು | ರೈಲ್ವೆ ಸಿಗ್ನಲ್ ಕೇಬಲ್ ಕಳವು | ಚಿತ್ರದುರ್ಗದ ಇಬ್ಬರ ಬಂಧನ

May 7, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL