ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿರುವ ಎಪ್ರಿಲ್ 5ರ ರಾತ್ರಿ ದೇಶದ ಪ್ರತಿ ಮನೆಯಲ್ಲೂ ವಿದ್ಯುತ್ ದೀಪಗಳನ್ನು ಆರಿಸುವುದರಿಂದ ಪವರ್ ಗ್ರಿಡ್’ಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಇಂಧನ ಇಲಾಖೆ ಸ್ಪಷ್ಟೀಕರಣ ನೀಡಿದ್ದು, ನಾಳೆ ರಾತ್ರಿ 9 ಗಂಟೆಗೆ ಎಲ್ಲ ಮನೆಗಳಲ್ಲಿ ಒಮ್ಮೆಲೆ ದೀಪ ಆರಿಸುವುದರಿಂದ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಕೇವಲ ದೀಪ ಮಾತ್ರ ಆರಿಸಲು ಸೂಚಿಸಿದ್ದು, ಫ್ಯಾನ್’ಗಳನ್ನು ಆನ್ ಆಗಿಯೇ ಇಡಬೇಕು ಎಂದು ತಿಳಿಸಲಾಗಿದೆ.
ಅಲ್ಲದೇ, ವಿದ್ಯುತ್ ದೀಪ ಆರಿಸುವುದು ಕೇವಲ ಮನೆಗಳಿಗೆ ಮಾತ್ರ ಅನ್ವಯವಾಗಲಿದ್ದು, ಅಗತ್ಯ ಸೇವೆಗಳಾದ ಆಸ್ಪತ್ರೆ, ಸಾರ್ವಜನಿಕ ಕಚೇರಿ, ಮುನ್ಸಿಪಲ್ ಕಚೇರಿ, ಪೊಲೀಸ್ ಠಾಣೆಗಳು ಹಾಗೂ ಉತ್ಪಾದನಾ ಘಟಕಗಳು ಚಾಲನೆಯಲ್ಲಿರುತ್ತವೆ. ಅಲ್ಲದೇ, ಬೀದಿ ದೀಪಗಳನ್ನು ಆಫ್ ಮಾಡದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Get in Touch With Us info@kalpa.news Whatsapp: 9481252093
Discussion about this post