ಕಲ್ಪ ಮೀಡಿಯಾ ಹೌಸ್ | ತನಕ್ಪುರ |
ಉತ್ತರಾಖಂಡ್ನಲ್ಲಿ #Uttarakhand ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಡೌನ್ ರಿವರ್ ರಾಫ್ಟಿಂಗ್ನಲ್ಲಿ #RiverRafting ಕರ್ನಾಟಕದ ಐವರು ರಾಫ್ಟರ್ಗಳನ್ನೊಳಗೊಂಡ ವನಿತೆಯರ ತಂಡ ಚಾಂಪಿಯನ್ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ.
ಶಿವಮೊಗ್ಗ ಸೊರಬ #Soraba ತಾಲ್ಲೂಕಿನ ಐಶ್ವರ್ಯ, ಬೆಂಗಳೂರಿನ ಪ್ರಾಂಜಲ, ಮಡಿಕೇರಿಯ #Madikeri ಪುಷ್ಪ, ಮೈಸೂರಿನ ಬಿಂದು, ಹಾಗೂ ಶಿವಮೊಗ್ಗದ ಧನಲಕ್ಷ್ಮೀ ಅವರು ಕರ್ನಾಟಕ ರಾಜ್ಯದ ತಂಡದ ಸದಸ್ಯೆಯರಾಗಿರುತ್ತಾರೆ.
Also Read>> ಕುಂಭಮೇಳ | ತ್ರಿವೇಣಿ ಸಂಗಮದಲ್ಲಿ ಡಿಸಿಎಂ ಡಿಕೆಶಿ ಪವಿತ್ರ ಸ್ನಾನ | ಅನುಭವ ಹಂಚಿಕೊಂಡಿದ್ದೇನು?
ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕೋಚ್ ಶಬ್ಬೀರ್ ಅವರು ಈ ಸಾಧಕರಿಗೆ ತರಬೇತಿ ನೀಡಿರುತ್ತಾರೆ. ಸಾಲೋಂ ವೈಯಕ್ತಿಕ ವಿಭಾಗದಲ್ಲಿ ಧಲಕ್ಷ್ಮೀ ಹಾಗೂ ಪ್ರಾಂಜಲ ಪದಕ ಗೆಲ್ಲುವಲ್ಲಿ ವಿಫಲರಾದರೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.

ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ವಾಣಿವಿಲಾಸ ಸಾಗರದಲ್ಲಿ ಕೋಚ್ ಹಾಗೂ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಬ್ಬೀರ್, ಕಲ್ಪಾ ನ್ಯೂಸ್ ಜೊತೆ ಮಾತನಾಡಿ, “ನಮ್ಮ ತಂಡದಲ್ಲಿ ಹಳ್ಳಿಯ ಹಾಗೂ ಬಡವರ ಮನೆ ಮಕ್ಕಳೇ ಹೆಚ್ಚು. ಇವರಿಗೆ ಕಳೆದ ಆರು ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ. ಇವರೆಲ್ಲರೂ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದ್ದಾರೆ ಎಂದರು.

(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post