ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತುಂಗಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಹೊಳೆಯಲ್ಲಿದ್ದ 15ಕ್ಕೂ ಅಧಿಕ ಹಾವುಗಳು ಬೆಕ್ಕಿನ ಕಲ್ಮಠದ ಬಳಿಯಿರುವ ಮರದಲ್ಲಿ ಆಶ್ರಯ ಪಡೆದಿವೆ.
ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಿಲ ಹಾಗೂ ಪೊಟರೆಗಳಿಗೆ ನೀರು ನುಗ್ಗಿದೆ. ಪರಿಣಾಮವಾಗಿ ಹಾವುಗಳು ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ತೇಲಿಕೊಂಡು ಬಂದು ಒಂದೇ ಮರದಲ್ಲಿ ಜೀವ ಉಳಿಸಿಕೊಳ್ಳಲು ಆಶ್ರಯ ಪಡೆದುಕೊಂಡಿದ್ದವು.
ಈ ವಿಚಾರ ತಿಳಿದ ಉರಗ ತಜ್ಞ ಸ್ನೇಕ್ ಕಿರಣ್ ಅವರು, ಸ್ಥಳಕ್ಕೆ ಆಗಮಿಸಿ, ಮರದಲ್ಲಿ ಅವಿತಿದ್ದ ಎಲ್ಲ ಹಾವುಗಳನ್ನು ರಕ್ಷಣೆ ಮಾಡಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post