No Result
View All Result
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ
English Articles

Duniya Vijay, Rachita Ram & Raj B. Shetty’s Landlord Premieres This Saturday on Zee Kannada

by ಕಲ್ಪ ನ್ಯೂಸ್
May 22, 2026
0

Kalpa Media House  |  Bengaluru | Zee Kannada has always captivated its audience with unique content, offering engaging fiction stories,...

Read moreDetails
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
  • Advertise With Us
  • Grievances
  • About Us
  • Contact Us
Saturday, May 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಕತಾರ್ ಮತ್ತು ಕರ್ತಾರ ಭಾರತ

ಕತಾರನ ಜುಟ್ಟು ಭಾರತವೆಂಬೊ ಕರ್ತಾರನ ಕೈಯಲ್ಲಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 21, 2023
in ಸಚಿನ್ ಪಾರ್ಶ್ವನಾಥ್
0
ಕತಾರ್ ಮತ್ತು ಕರ್ತಾರ ಭಾರತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್  |

ಅದು ಸರಿ ಸುಮಾರು ಒಂದು ವರ್ಷದ ಹಿಂದಿನ ಘಟನೆ. ದೂರದ ಕತಾರ್ ನಲ್ಲಿ #Qatar ಭಾರತೀಯರ ಬಂಧನ ಆಗಿದೆ. ಎಂಟು ಜನರು ಇದ್ದಾರೆ ಆದರೆ ಯಾವ ಅಪರಾಧ ಎಂದು ಹೇಳಿಲ್ಲ, ಕುಟುಂಬದವರಿಗೂ ಗೊತ್ತಿಲ್ಲ ಎಂಬುದು ಒಂದು ವಿದೇಶೀ ಸುದ್ದಿ ಕಾಲಂನಲ್ಲಿ ಪ್ರಕಟವಾಗಿತ್ತು. ಇದೆಲ್ಲ ಸಾಮಾನ್ಯ ಎಂದು ಅಂದುಕೊಂಡವರೇ ಹೆಚ್ಚು. ಆದರೆ ಅವರೆಲ್ಲರೂ ಕತಾರ್ ನಲ್ಲಿ ಒಂದೇ ರಕ್ಷಣಾ ಸಂಬಂಧೀ ಕಂಪನಿಯಲ್ಲಿ ವೃತ್ತಿ ನಡೆಸುತ್ತಿದ್ದರು. ನಿಜವಾಗಿ ಹೇಳಬೇಕೆಂದರೆ, ಕತಾರ್ ಗುಪ್ತಚರ ಇಲಾಖೆಯು #Intelligence ಆಗಸ್ಟ್ 30, 2022ರ ರಾತ್ರಿ ಅವರನ್ನು ಬಂಧಿಸಿದ್ದು, ಕುಟುಂಬದ ಯಾರಿಗೂ ಚಿಕ್ಕ ಮಾಹಿತಿ ನೀಡಿರಲಿಲ್ಲ.

1. ನವತೇಜ್ ಸಿಂಗ್ ಗಿಲ್
2. ಸೌರಭ್ ವಶಿಷ್ಟ
3. ವೀರೇಂದ್ರ ಕುಮಾರ್ ವರ್ಮಾ
4. ಪೂರ್ಣೇಂದು ತಿವಾರಿ
5. ಸಂಜೀವ್ ಗುಪ್ತ
6. ಅಮಿತ್ ನಾಗಪಾಲ್
7. ಸುಗ್ನಾಕರ್ ಪಕಾಲಾ
8. ರಾಗೇಶ್ ಇವರು ಬಂಧಿತ ಭಾರತೀಯರಾಗಿದ್ದರು.

ಗೌಪ್ಯ ಬಂಧನವಾಗಿ ಬರೋಬ್ಬರಿ ಒಂದು ತಿಂಗಳ ನಂತರ ಬಂಧಿತರಿಗೆ ಕುಟುಂಬದ ಜೊತೆಗೆ ಮಾತನಾಡಲು ಅವಕಾಶ ನೀಡಲಾಯಿತು. ಅನಂತರದಲ್ಲಿ ಬಂಧನದ ವಿಷಯ ಹೊರ ಬಂದು ಅಕ್ಟೋಬರ್ 3, 2022ರಂದು ಭಾರತೀಯ ರಾಯಭಾರ ಅಧಿಕಾರಿಗಳು ಆರೋಪಿತರ ಭೇಟಿ ಮಾಡಿದರು.

ಭಾರತದೊಂದಿಗೆ ದ್ವಿಪಕ್ಷೀಯವಾಗಿ ಬಹಳ ಒಪ್ಪಂದಗಳ ಹೊಂದಿರುವ ಕತಾರ್’ನಿಂದ ಭಾರತ ಇಂತಹ ನಿರೀಕ್ಷೆ ಇಟ್ಟಿರಲಿಲ್ಲ. ಸರಿ, ಕಳೆದ ವರ್ಷದ ಡಿಸೆಂಬರ್ ಹೊತ್ತಿಗೆ ಮತ್ತೊಮ್ಮೆ ಅವರನ್ನು ಭೇಟಿಯಾದ ಭಾರತೀಯ ರಾಯಭಾರ ಅಧಿಕಾರಿಗಳು ಹೆಚ್ಚಿನ ಮಾಹಿತಿ ಪಡೆದರು.
ಈ ಎಂಟು ಜನ ಭಾರತೀಯರು ಅಲ್ ದೆಹರಾ ಗ್ಲೋಬಲ್ ಟೆಕ್ನಾಲಜಿಸ್ ಅಂಡ್ ಕನ್ಸಲ್ಟೆನ್ಸಿ ಸರ್ವಿಸಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇದು ಕತಾರ್ ಸೇನೆಯ ರಕ್ಷಣಾ ಸಂಬಂಧೀ ವಸ್ತುಗಳ ಪೂರೈಕೆದಾರನಾಗಿತ್ತು. ವಿಶೇಷ ಎಂದರೆ ಈ ಘಟನೆಗೂ ಮೊದಲು ಕಂಪನಿ ತಾನು ನೌಕಾ ಇಲಾಖೆಯ ಸಂಬಂಧಿತ ಸಂಸ್ಥೆ ಎಂದು ಹೇಳಿದ್ದು, ಈಗ ತನ್ನ ವೆಬ್ಸೈಟ್ ನಲ್ಲಿ ಈ ಮಾಹಿತಿಯನ್ನು ತೆಗೆದುಹಾಕಿದೆ.

ಮುಂದುವರಿದಂತೆ, ಬಂಧಿತರನ್ನು ಈ ವರ್ಷದ ಮಾರ್ಚ್ 29 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಅಕ್ಟೋಬರ್ 03, 2023 ರಂದು ಏಳನೇ ಮತ್ತು ಅಂತಿಮ ಸುತ್ತಿನ ವಿಚಾರಣೆ ನಡೆಸಲಾಯಿತು. ಆಗ ಅಕ್ಟೋಬರ್ ಕೊನೆಯ ಹೊತ್ತಿಗೆ ತೀರ್ಪು ಬರಲಿದೆ ಎಂದು ಹೇಳಲಾಗಿತ್ತು. ಅಲ್ಲಿಯ ತನಕವೂ ಅಧಿಕೃತವಾಗಿ ಕತಾರ್ ಎಲ್ಲಿಯೂ ಭಾರತೀಯರ ತಪ್ಪು ಏನು ಎಂಬುದನ್ನು ಹೇಳಿರಲಿಲ್ಲ. ಅದು ಭಾರತೀಯ ಸರ್ಕಾರಕ್ಕೆ #IndianGovernment ಗೊತ್ತು ಎಂದಷ್ಟೇ ಹೇಳಿತ್ತು. ಹಾಗಾದರೆ ಅವರ ಕುಟುಂಬಗಳಿಗೂ ಗೊತ್ತಿರದ ಅವರ ಅಪರಾಧ ಆದರೂ ಏನು?ಇನ್ನುಳಿದಂತೆ, ಭಾರತೀಯ ವಿದೇಶಾಂಗ ಇಲಾಖೆ ಇದೊಂದು ಸೂಕ್ಷ್ಮ ವಿಷಯವಾಗಿದೆ ಮತ್ತು ಎಲ್ಲಾ ಎಂಟು ಭಾರತೀಯರ ಬಿಡುಗಡೆಗೆ ಪ್ರಯತ್ನ ನಡೆಯಲಿದೆ ಎಂದಿತ್ತು.

ಹೀಗಿರುವಾಗ, ದಿ ಟ್ರಿಬ್ಯೂನ್ ಪತ್ರಿಕೆ ಒಂದು ವರದಿ ಹರಿಯಬಿಟ್ಟಿತ್ತು. ಅದರಂತೆ ಈ ಬಂಧಿತರು ಕತಾರನಲ್ಲಿ ಕೆಲಸ ಮಾಡುತ್ತಾ, ಇಸ್ರೇಲ್ ಗಾಗಿ #Israel ಗೂಡಾಚಾರಿಕೆ ಮಾಡುತ್ತಿದ್ದಾರೆ ಎಂಬುದು. ಕತಾರ್ ಮತ್ತು ಇಸ್ರೇಲ್ ನಡುವೆ ಸಂಬಂಧ ಹಳಸಿಹೋಗಿ ದಶಕಗಳೇ ಕಳೆದಿದ್ದು, ಅದರ ಮಧ್ಯೆ ಈ ಸುದ್ದಿ ಭಾರತ #India ಮತ್ತು ಇಸ್ರೇಲ್ ನಂಟಿನ ತನಕ ಬಂದಿತ್ತು. ಅದಕ್ಕೂ ಮೊದಲು ಕತಾರ್ ಮತ್ತು ಭಾರತದ ಸಂಬಂಧ ನೋಡುವುದಾದರೆ, ಸುಮಾರು ಎಂಟು ಲಕ್ಷಕ್ಕೂ ಹೆಚ್ಚಿನ ಭಾರತೀಯರು ಇಂದಿಗೂ ಕತಾರ್ ನೆಲದಲ್ಲಿ ಬೆವರು ಹರಿಸುತ್ತ ದುಡಿಯುತ್ತಿದ್ದಾರೆ. ಅಷ್ಟಿಷ್ಟು ಅಲ್ಲ, ಹದಿನೈದು ಬಿಲಿಯನ್ ಡಾಲರ್ ಮೌಲ್ಯದ ಇಂಧನ ಸಂಬಂಧೀ ವಹಿವಾಟು ಭಾರತ ಮತ್ತು ಕತಾರ್ ನಡುವೆ ಇದೆ. 2008ರಲ್ಲಿ ಮೊದಲ ಬಾರಿಗೆ ದ್ವಿ ಪಕ್ಷೀಯ ಒಪ್ಪಂದವಾಗಿದ್ದು, ಅದು ಮರು ವಿಸ್ತರಣೆಗೊಂಡಿದೆ. ಅಲ್ಲದೇ ವೈಮಾನಿಕ, ರಕ್ಷಣಾ, ಇಂಧನ ಮತ್ತು ಆಹಾರ ಇನ್ನಿತರ ಸರಕು ಸೇವೆಗಳ ಅದಲು ಬದಲು ಆಗುತ್ತಲೇ ಇದೆ. ಇಂತಿಪ್ಪ ಕತಾರ್ ಒಂದೇ ಏಟಿಗೆ ಅಕ್ಟೋಬರ್ ಕೊನೆಯ ವಾರದಲ್ಲಿ ಈ ಭಾರತೀಯರಿಗೆ ಮರಣ ದಂಡನೆ ವಿಧಿಸಿಬಿಟ್ಟಿದೆ.
Kalahamsa Infotech private limitedಹೆಚ್ಚು ಕಡಿಮೆ ಕತಾರ್ ನ ಬದುಕು ರಫ್ತು ಮಾಡುವುದರಿಂದ ನಡೆಯುತ್ತಿರುವುದು. ಕಳೆದ ಐವತ್ತು ವರ್ಷಗಳಲ್ಲಿ ಕತಾರ್ ನ್ಯಾಯಾಲಯ ಕೇವಲ ಎರಡು ಮರಣ ದಂಡನೆ ವಿಧಿಸಿದೆ. ಅದೂ ಕೂಡ ತನ್ನದೇ ದೇಶದ ಇಬ್ಬರು ನಾಗರಿಕರಿಗೆ ನೀಡಿರುವ ಶಿಕ್ಷೆಯಾಗಿತ್ತು. ಅಂತಹ ಒಂದು ದೇಶ, ಹೊಸ ಭಾರತದ ಮೇಲೆ ಆಕ್ರಮಣ ಮಾಡುವುದು ಎಂದರೆ ಏನು?

ಅಕ್ಟೋಬರ್ ತಿಂಗಳ ಕೊನೆ ಹೊತ್ತಿಗೆ ಮರಣ ದಂಡನೆ ತೀರ್ಪು ಹೊರ ಬಂದಾಗ, ಭಾರತದಲ್ಲೇ ಇದ್ದು ಬೇರೆಯವರ ಕಾಲ ಕೆಳಗೆ ನುಸಿಯುವ ಕೆಲ ಜೀವಿಗಳಿಗೆ ಎಲ್ಲಿಲ್ಲದ ಹುರುಪು ಬಂದಿತ್ತು. ಹೋ!! ಭಾರತದ ವಿದೇಶಾಂಗ ನೀತಿ ಇದೇನಾ? ಇಷ್ಟೇನಾ ಇವರ ಕೈಯಲ್ಲಿ ಮಾಡಲು ಸಾಧ್ಯವಾಗುವುದು? ಬಿಡಿ ಆ ಎಂಟು ಜನರ ಶವ ಭಾರತಕ್ಕೆ ಬಂದರೆ ಹೆಚ್ಚು ಅಂತೆಲ್ಲ ಹಾಹಾಕಾರ ಎದ್ದವು. ಅದಕ್ಕೆ ಸರಿಯಾಗಿ ವರದಿಗಳು ಸಾಗರೋಪಾದಿಯಲ್ಲಿ ಪತ್ರಿಕೆ, ನ್ಯೂಸ್ ಗಳಲ್ಲಿ ಹರಿದಾಡಿದವು. ಇದು ಇಸ್ರೇಲ್ ಜೊತೆಗೆ ನಿಂತಿದ್ದಕ್ಕೆ ಬಂದಿರುವ ಸಂಕಷ್ಟ, ಎಲ್ಲೋ ಒಬ್ಬ ಅಭಿನಂದನನನ್ನು ಕರೆದುಕೊಂಡು ಬಂದ ಮಾತ್ರಕ್ಕೆ ಏನು ಬಂತು? ಇದೆಲ್ಲಾ ಅದಾಗ ಹುಯಿಲು ಎಬ್ಬಿಸಿದವರು ಇನ್ನು ಮೂಲದ ತನಕ ತಲುಪಿರಲಿಲ್ಲ. ಅಲ್ಲಿ ಇಲ್ಲಿ ಸಿಕ್ಕ ಮಾಹಿತಿಯ ಚೂರುಗಳ ಜೋಡಿಸಿ ಒಂದು ಸುದ್ದಿ ತಂದು ಹಂಚಿದ್ದರು. ಅಷ್ಟು ಸರಳವಾಗಿ ಸಿಕ್ಕ ಅವಕಾಶ, ಒಂದೇ ಏಟಿಗೆ ಭಾರತದ ಸರ್ಕಾರ ಮತ್ತು ಆತ್ಮೀಯ ಇಸ್ರೇಲ್ ಹಳಿಯುವ ದುರಾವಕಾಶ. ಯಾಕಾದರೂ ಬಿಡುತ್ತಾರೆ?

ಇದೆಲ್ಲವನ್ನೂ ಒಂದೆಡೆ ಇಟ್ಟು, ಇನ್ನೊಂದು ಬದಿಯಿಂದ ನೋಡುವುದಾದರೆ ನಿಜವಾಗಿಯೂ ಪರವಾಲಂಬಿ ಕತಾರ್ ಇಷ್ಟು ದೊಡ್ಡ ಹೆಜ್ಜೆ ಇಡಲು ಕಾರಣವಾಗಿದ್ದು, #GST ಗುಪ್ತಚರ ನಿರ್ದೇಶನಾಲಯದ #DDGI – Directorate General of GST Intelligence ಕೆಲವು ದಾಳಿಗಳು. ಇದು ಇತಿಹಾದ್, ಅಮಿರೇಟ್, ಸೌದಿ ಏರ್ಲೈನ್ಸ್, ಓಮನ್ ಏರ್ಲೈನ್ಸ್, ಕುವೈಟ್, ಕತಾರ್ ಏರ್ವೇಸ್ ಕಚೇರಿಗಳ ಮೇಲೆ DDGI ತನಿಖೆ ಆರಂಭಿಸಿತು. ಇದರಿಂದ ಬಂದ ಸುದ್ದಿ ಏನೆಂದರೆ ಭಾರತದಲ್ಲಿ ಈ ವಿದೇಶೀ ವೈಮಾನಿಕ ಸಂಸ್ಥೆಗಳು ತೆರಿಗೆ ಸಂಬಂಧೀ ಅವ್ಯವಹಾರ ಮಾಡಿರುವುದು ಕಂಡು ಬಂದಿತ್ತು. ವಿಪರ್ಯಾಸ ಎಂದರೆ ಜಗತ್ತಿನ ಅನಂತ ತೈಲ ಮಾರುಕಟ್ಟೆಯಲ್ಲಿ ಸಿರಿವಂತ ದೇಶಗಳು ಎಂದೇ ಕರೆಸಿಕೊಳ್ಳುವ ಈ ದೇಶಗಳು ತೆರಿಗೆ ಕಳ್ಳತನದಲ್ಲಿ ತೊಡಗಿದ್ದವು.
ಕೇಂದ್ರ ಸರ್ಕಾರದ ತನಿಖೆಯ ಅನ್ವಯ, ಸುಮಾರು ಆರು ಸಾವಿರ ವಿವಿಧ ಸಂದರ್ಭಗಳಲ್ಲಿ 57000 ಕೋಟಿಗಳಷ್ಟು ಭಾರತಕ್ಕೆ ನೀಡಬೇಕಾಗಿದ್ದ ತೆರಿಗೆ ಹಣವನ್ನು ಈ ದೇಶಗಳು ನುಂಗಿ ಹಾಕಿದ್ದವು. ಮತ್ತು ಈ ಅಪರಾಧದ ಸಂಬಂದಿಸಿದಂತೆ ಇದಾಗಲೇ 500 ಜನರನ್ನು ವಿಚಾರಿಸಲಾಗಿದೆ. ಈ ಕೋಟಿಗಳ ದರೋಡೆಯಲ್ಲಿ ಇನ್ನೊಂದು ಬಹು ಮುಖ್ಯದ ವಿಷಯ ಎಂದರೆ 40000 ಕೋಟಿಗಳಷ್ಟು ಹಣವನ್ನು ಕೇವಲ ಕತಾರ್ ದೇಶವೊಂದೇ ನುಂಗಿ ನೀರು ಕುಡಿದಿತ್ತು. ಈಗ ಕೇಳಬಹುದು? ಅದು ಹೇಗೆ ಇಷ್ಟೊಂದು ತೆರಿಗೆ ಲೋಪ ಹೇಗಾದರೂ ಮಾಡಲು ಸಾಧ್ಯ ಎಂದು. ವಿಷಯ ಸರಳವಾಗಿದೆ. ಭಾರತ ಸರ್ಕಾರದ ನಿಯಮಗಳ ಅನ್ವಯ ಯಾವುದೇ ವಿದೇಶೀ ಸಂಸ್ಥೆ ಕೇಂದ್ರ ಕಚೇರಿಯನ್ನು ತನ್ನ ದೇಶದಲ್ಲಿ ಹೊಂದಿ, ತನ್ನ ಶಾಖೆಯನ್ನು ಭಾರತದಲ್ಲಿ ಹೊಂದಿರುತ್ತದೋ ಅದರ ಎಲ್ಲಾ ವ್ಯವಹಾರಗಳನ್ನು GST ಮೂಲಕವೇ ಆಗಬೇಕೆಂಬ ಕಾನೂನು ಇದೆ. ಆದರೆ ಈ ನಿಯಮವನ್ನು ಮೀರಿ ಐವತ್ತೇಳು ಸಾವಿರ ಕೋಟಿಗಳ ಕಳ್ಳತನ ಕತಾರ್ ಮತ್ತಿತರ ದೇಶಗಳಿಂದ ಈ #GST ವ್ಯವಹಾರದಲ್ಲಿ ನಡೆದಿದ್ದು, ಅದು ಬೆಳಕಿಗೆ ಬಂದಿರಲಿಲ್ಲ. ಆದರೆ ಜೂನ್ 2023 ರಲ್ಲಿ ಕೇಂದ್ರ ಸರ್ಕಾರವು ರಾಜಸ್ವ ಕೊರತೆ ಮತ್ತು ಇನ್ನಿತರ ಲೋಪಗಳ ಕುರಿತ ತನಿಖೆ ಆರಂಭಿಸಿದ್ದು, ಈ ಹಗರಣ ಅದೇ ಆಯೋಗದಿಂದ ಹೊರಬಂದಿತ್ತು.

ಹೀಗೆಲ್ಲಾ ಇರುವಾಗ, ಸರಿ ಅಲ್ಲಿಗೆ ಭಾರತ ಮತ್ತು ಕಳ್ಳ ಕತಾರ್ ಹೊಂದಾಣಿಕೆ ಮಾಡಿಕೊಂಡು ಈ ಅದಲು ಬದಲು ವ್ಯವಹಾರಕ್ಕೆ ತೊಡಗಬಹುದು ಎಂದುಕೊಂಡರೆ ಅದು ತಪ್ಪು. ಭಾರತಕ್ಕೆ ಅದರ ಅವಶ್ಯಕತೆ ಕೂಡ ಇಲ್ಲ. ಯಾಕೆಂದರೆ ಭಾರತೀಯ ಸರ್ಕಾರದ ಕಾನೂನಿನ ಪ್ರಕಾರ ಈಗ ಭಾರತ ಈ ಕಳ್ಳ ದೇಶಗಳ ಅಷ್ಟೂ ಭಾರತೀಯ ಕಛೇರಿ ಹಾಗೂ ವಿಮಾನಯಾನಗಳ ರದ್ದು ಮಾಡುವ ಅಧಿಕಾರ ಹೊಂದಿದೆ. ಅದರಿಂದ ದೊಡ್ಡ ಏಟು ಬೀಳುವುದು ಕತಾರ್ ನಂತಹ ಜಿಗಣೆಗೆ ಹೊರತು, ಭಾರತಕ್ಕಲ್ಲ. ಈಗಾಗಲೇ ಕತಾರ್ ಗೆ ಪರ್ಯಾಯವಾಗಿ ವೆನೆಜುವೆಲಾ ದೇಶವನ್ನು ಭಾರತದ ಕೇಂದ್ರ ಸರ್ಕಾರ ಆರಿಸಿದ್ದು, ಅದರೊಂದಿಗೆ ರಸ್ತೆ ನಿರ್ಮಾಣ, ರಫ್ತು ಮುಂತಾದ ದ್ವಿ ಪಕ್ಷೀಯ ಕಾರ್ಯಗಳಲ್ಲಿ ತೊಡಗಿದೆ. ಅಲ್ಲದೇ ಕತಾರನ್ನು ಹಮಾಸ್ ಇನ್ನಿತರ ಉಗ್ರ ಸಂಘಟನೆಗಳ ಪೋಷಕ ಎಂದು ಹೇಳುತ್ತಿರುವ ದೇಶಗಳ ಜೊತೆಗೆ ಭಾರತ ನಿಲ್ಲಬಹುದಾಗಿದೆ. ಇದೇನು ಕೈಗೆ ಎಟುಕದ ದ್ರಾಕ್ಷಿ ಹುಳಿ ಎನ್ನುವ ನರಿಯ ಮಾತಿನಂತಲ್ಲ. ಈ ಹಿಂದೆಯೇ ಕತಾರ್ ಮತ್ತು ಉಗ್ರ ಸಂಘಟನೆಗಳ ಈಡು ಜೋಡು ಎಲ್ಲೆಡೆ ಜಾಹೀರಾಗಿದೆ. 2014ರಲ್ಲಿ ಕತಾರ್ ದೇಶವು ಐಸಿಸ್ ಗೆ #ISIS ಹಣ ನೀಡಿದ ಆರೋಪ, 2020ರಲ್ಲಿ ಹಿಜ್ಬುಲ್ಲಾಗೆ ಆರ್ಥಿಕ ಸಹಾಯ ನೀಡಿದ ಆರೋಪ, 2021ರಲ್ಲಿ ಅಲ್ ನುಸ್ರ ಫ್ರಂಟ್ ಗೆ ಹಣ ನೀಡಿದ ಆರೋಪ ಇದಾಗಲೇ ಸಾಬೀತಾಗಿವೆ.

2020ರಲ್ಲಿ ತಾಲಿಬಾನ್ ಮತ್ತು ಅಮೇರಿಕಾ #America ನಡುವೆ ಹೊಂದಾಣಿಕೆದಾರನಾಗಿ ಕತಾರ್ ನಿಂತಿದ್ದು ಇಡೀ ಜಗತ್ತೇ ನೋಡಿದೆ. ನಿಮಗಿದು ತಿಳಿದಿರಲಿ ಕತಾರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್ ರಾಜತಾಂತ್ರಿಕ ಕಾರ್ಯಾಲಯ ತೆರೆಯಲಾಗಿದೆ. ನಿವೃತ್ತ, ವೃದ್ಧ ಹಾಗೂ ಪ್ರಮುಖ ಉಗ್ರರ ದಂಡೇ ಕತಾರ್ ಅಂಗಳದಲ್ಲಿ ಬೀಡು ಬಿಟ್ಟಿದೆ. ಕತಾರ್ ದೇಶವನ್ನು ಹೆಡೆಮುರಿ ಕಟ್ಟುವ ಕೇಂದ್ರ ಸರ್ಕಾರದ ಪ್ರಯತ್ನ ಅದರ ಆಪ್ತ ಮಿತ್ರ ಅಮೇರಿಕಾವನ್ನು ಬಿಗಿ ಮಾಡುವ ಮೂಲಕ ಆರಂಭವಾಗಿದೆ. ಈಗ ಅದರ ಫಲವಾಗಿ ಕತಾರ್ ತಾನು ಭಾರತದ ಮನವಿ ಪುರಸ್ಕರಿಸಿದ್ದೇನೆ ಎಂದು ಹೇಳಿದೆ. ಏನೇ ಆದರೂ ಕತಾರನ ಜುಟ್ಟು ಭಾರತವೆಂಬೊ ಕರ್ತಾರನ ಕೈಯಲ್ಲೇ ಇದೆ ಎಂಬುದೇ ಸತ್ಯ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: DDGIDirectorate General of GST IntelligenceIndiaIndian GovernmentintelligenceIsraelKannada News WebsiteLatest News KannadaQatarSachin Parshwanathಇಸ್ರೇಲ್ಕತಾರ್ಗುಪ್ತಚರ ಇಲಾಖೆಗುಪ್ತಚರ ನಿರ್ದೇಶನಾಲಯಭಾರತಭಾರತೀಯ ಸರ್ಕಾರ
Share198Tweet123Send
Previous Post

ಕುವೆಂಪು ವಿವಿ ವೆಬ್’ಸೈಟ್ ಹ್ಯಾಕ್ | ಎಲ್ಲಿಂದ ಆಯ್ತು? ರಿಸ್ಟೋರ್ ಕೆಲಸ ಆರಂಭ

Next Post

ಕಲಿತ ಶಿಕ್ಷಣವನ್ನು ಸಮಾಜಮುಖಿ ಅನುಷ್ಠಾನಕ್ಕೆ ವ್ಯಯಿಸಿ: ಕುವೆಂಪು ವಿವಿ ಕುಲಪತಿ ವೆಂಕಟೇಶ್ ಕರೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕಲಿತ ಶಿಕ್ಷಣವನ್ನು ಸಮಾಜಮುಖಿ ಅನುಷ್ಠಾನಕ್ಕೆ ವ್ಯಯಿಸಿ: ಕುವೆಂಪು ವಿವಿ ಕುಲಪತಿ ವೆಂಕಟೇಶ್ ಕರೆ

ಕಲಿತ ಶಿಕ್ಷಣವನ್ನು ಸಮಾಜಮುಖಿ ಅನುಷ್ಠಾನಕ್ಕೆ ವ್ಯಯಿಸಿ: ಕುವೆಂಪು ವಿವಿ ಕುಲಪತಿ ವೆಂಕಟೇಶ್ ಕರೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಹುಲಿ ದಾಳಿಗೆ ನಾಲ್ವರು ಮಹಿಳೆಯರು ಬಲಿ

ಹುಲಿ ದಾಳಿಗೆ ನಾಲ್ವರು ಮಹಿಳೆಯರು ಬಲಿ

May 23, 2026
ಗಾಯಕಿ ಭೂಮಿಕಾ ಮಧುಸೂಧನ್’ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯ ಗೌರವ

ಗಾಯಕಿ ಭೂಮಿಕಾ ಮಧುಸೂಧನ್’ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯ ಗೌರವ

May 22, 2026
ಕುವೆಂಪು ವಿವಿಯಲ್ಲಿ ಭಯೋತ್ಪಾದನಾ ವಿರೋಧಿ ದಿನ | ಪ್ರತಿಜ್ಞಾ ವಿಧಿ ಸ್ವೀಕಾರ

ಕುವೆಂಪು ವಿವಿಯಲ್ಲಿ ಭಯೋತ್ಪಾದನಾ ವಿರೋಧಿ ದಿನ | ಪ್ರತಿಜ್ಞಾ ವಿಧಿ ಸ್ವೀಕಾರ

May 22, 2026
ಅಕ್ರಮ ಗೋ ಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಹಿಂದೂ ಜಾಗರಣ ವೇದಿಕೆ ಆಗ್ರಹ

ಅಕ್ರಮ ಗೋ ಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಹಿಂದೂ ಜಾಗರಣ ವೇದಿಕೆ ಆಗ್ರಹ

May 22, 2026
ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕು: ರಾಷ್ಟ್ರಪತಿಗಳಿಗೆ ಮನವಿ

ನಾಳೆ ರೋಜಗಾರ್ ಮೇಳ | 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಣೆ

May 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL