ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಕೊರೋನಾ ಸೋಂಕು ಹೊಂದಿ ಕ್ವಾರಂಟೈನ್’ನಲ್ಲಿರದೇ ನಗರದಲ್ಲೆಲ್ಲಾ ತಿರುಗಾಡಿ, ಕ್ರಿಕೆಟ್ ಆಡಿದ ಕಾಪು ಮೂಲದ ವ್ಯಕ್ತಿಯೊಬ್ಬನಿಗೆ ಜಿಲ್ಲಾಧಿಕಾರಿ ಜಗದೀಶ್ ಅವರು ದಂಡ ವಿಧಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಹೋಂ ಕ್ವಾರಂಟೈನ್’ನಲ್ಲಿರಬೇಕಾಗಿದ್ದ ವ್ಯಕ್ತಿ ನಗರವೆಲ್ಲ ತಿರುಗಾಡಿದ್ದು ಮಾತ್ರವಲ್ಲ, ಕ್ರಿಕೆಟ್ ಸಹ ಆಡಿದ್ದಾನೆ. ಎಷ್ಟು ಸೂಚನೆ ನೀಡಿದರೂ ಹೊರಗೆ ತಿರುಗಿದ್ದಾನೆ. ಹೀಗಾಗಿ, ಆತನ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚವನ್ನು ಅವನಿಂದಲೇ ವಸೂಲಿ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಇಂತಹ ಪ್ರಕರಣದಲ್ಲಿ ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆಯಾಗುತ್ತದೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post