ನವದೆಹಲಿ: ಬಾಲಾಕೋಟ್’ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಸಾಕ್ಷಿ ಕೇಳುತ್ತಿದ್ದವರ ಮುಖಕ್ಕೆ ಮಂಗಳಾರತಿಯಾಗಿದ್ದು, ದಾಳಿ ಮಾಡಿದ್ದಕ್ಕೆ ಭಾರತೀಯ ವಾಯುಸೇನೆ ಸಾಕ್ಷಿಯನ್ನು ಕೇಂದ್ರ ಸರ್ಕಾರಕ್ಕೆ ಇಂದ ಸಂಜೆ ಸಲ್ಲಿಸಿದೆ.
ಈ ಕುರಿತಂತೆ ಪಿಟಿಐ ಅಧಿಕೃತ ವರದಿಯನ್ನು ಈಗಷ್ಟೆ ಬಿಡುಗಡೆ ಮಾಡಿದ್ದು, ಫೆ.26ರಂದು ನಡೆದ ವಾಯು ದಾಳಿ ಕುರಿತಂತೆ ಭಾರತೀಯ ವಾಯುಸೇನೆ ಸ್ಯಾಟಲೈಟ್ ಹಾಗೂ ರಾಡಾರ್ ಚಿತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಇದರಲ್ಲಿ ದಾಳಿ ನಡೆಸಿರುವುದು ಹಾಗೂ ಹಾನಿಯಾಗಿರುವುದು ದಾಖಲಾಗಿದೆ. ಈ ಸಾಕ್ಷಿಯನ್ನು ಐಎಎಫ್ ಇಂದು ಸಂಜೆ ಸರ್ಕಾರಕ್ಕೆ ಸಲ್ಲಿಸಿದೆ.
ವರದಿಗಳ ಅನ್ವಯ, ಅಂದು ನಡೆದ ದಾಳಿಯಲ್ಲಿ ಸೇನೆಯ ಯೋಜನೆಯ ಶೇ.80ರಷ್ಟು ಗುರಿಯನ್ನು ಸಾಧಿಸಿದ್ದು, ಇದರಲ್ಲಿ ಜೈಷ್ ಉಗ್ರ ಸಂಘಟನೆಯ ಉಗ್ರರ ತಯಾರಿಕಾ ಕಾರ್ಖಾನೆ(ಉಗ್ರರ ತರಬೇತಿ ಶಿಬಿರ) ಧ್ವಂಸವಾಗಿರುವುದು ದಾಖಲಾಗಿದೆ.
ಮಿರಾಜ್ 2000 ಯುದ್ಧವಿಮಾನಗಳು ಲೇಸರ್ ಗೈಡ್ ಮೂಲಕ ಗುರಿಯನ್ನು ಹೊಡೆಯುವಲ್ಲಿ ಯಶಸ್ವಿಯಾಗಿವೆ. ಇಸ್ರೇಲಿ ಸ್ಪೈಸ್-2000 ಸ್ಮಾರ್ಟ್ ಬಾಂಬ್’ಗಳನ್ನು ಇಂತಹ ದಾಳಿಗಳಿಗಾಗಿಯೇ ರೂಪಿಸಿರುವ ಹಿನ್ನೆಲೆಯಲ್ಲಿ ಬಾಲಾಕೋಟ್’ನ ಗುರಿ ತಲುಪುವಲ್ಲಿ ಸಹಕಾರಿಯಾಗಿವೆ ಎಂದು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ದಾಖಲೆಗಳಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.
ಈ ಬಾಂಬ್’ಗಳ ಮೂಲಕ ಶೇ.80ರಷ್ಟು ಗುರಿಯನ್ನು ತಲುಪುವ ಜೊತೆಯಲ್ಲಿ ಅಲ್ಲಿನ ಶಿಬಿರವನ್ನು ಧ್ವಂಸ ಮಾಡಿರುವುದು ಖಚಿತವಾಗಿದೆ. ಆದರೆ, ಸಾಧಾರಣವಾಗಿ ಒಂದಷ್ಟು ಭಾಗ ಮಾತ್ರ ಕೊಂಚ ಹಾನಿಯಾದ ಪ್ರಮಾಣ ಕೇವಲ ಶೇ.20ರಷ್ಟು ಮಾತ್ರ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಲ್ಲದೇ ಅತ್ಯಂತ ಪ್ರಮುಖವಾಗಿ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯ ವರದಿಯಂತೆ ದಾಳಿ ನಡೆದ ಕಟ್ಟಡ ಹಾಗೂ ಅದರ ಸುತ್ತಮುತ್ತಲು ದಾಳಿ ನಡೆಯುವ ಕೆಲವೇ ನಿಮಿಷಗಳ ಮುನ್ನ ಸುಮಾರು 300 ಮೊಬೈಲ್ ಫೋನ್’ಗಳು ಬಳಕೆಯಾಗಿರುವುದು ದಾಖಲಾಗಿದೆ. ಅಂದರೆ, ದಾಳಿ ನಡೆದ ವೇಳೆ ಕನಿಷ್ಠ ಎಂದರೂ 250ರಿಂದ 300 ಮಂದಿ ಉಗ್ರರು ಅಲ್ಲಿ ಇದ್ದಿರಲೇಬೇಕು.
ಪಾಕಿಸ್ಥಾನದ ಜೈಷ್ ಉಗ್ರ ಸಂಘಟನೆ ಕಣಿವೆ ರಾಜ್ಯ ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಕಾನ್ವೆ ಮೇಲೆ ದಾಳಿ ನಡೆಸಿ 42 ಯೋಧರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಫೆ.26ರಂದು ಭಾರತೀಯ ವಾಯುಸೇನೆ ಪಾಕಿಸ್ಥಾನದ ಒಳಗೆ ನುಗ್ಗಿ, ಬಾಲಾಕೋಟ್’ನಲ್ಲಿದ್ದ ಜೈಷ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿ, ಸುಮಾರು 1000 ಕೆಜಿ ಬಾಂಬ್ ಹಾಕಿತ್ತು.
Discussion about this post