ಸಾಮಾಜಿಕ ಜಾಲತಾಣದಲ್ಲಿ ಭಾರೀ ಮಟ್ಟದಲ್ಲಿ ಟ್ರೋಲ್ ಆಗಿದ್ದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಬ್ರೇಕ್ ಅಪ್ ಸುದ್ದಿ ಈಗ ಅವರ ಆಪ್ತವಲಯದಿಂದಲೇ ಹೊರಬಿದ್ದಿದೆ.
ಒಂದೆಡೆ ಸೋಶಿಯಲ್ ಮೀಡಿಯಾ ಟ್ರೋಲ್ ನಿಂದ ರಶ್ಮಿಕಾ ಬೇಸತ್ತಿದ್ದರೆ, ಇದೇ ವಿಚಾರಕ್ಕೆ ಹಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾಯಿಂದ ರಕ್ಷಿತ್ ದೂರ ಉಳಿದಿದ್ದಾರೆ.
ಇನ್ನು, ರಶ್ಮಿಕಾ ಅವರ ಆಪ್ತ ವಲಯದ ಮಾಹಿತಿಯಂತೆ, ಮದುವೆಗಿಂದ ಕರಿಯರ್ ಮುಖ್ಯ ಎಂದಿದ್ದಾರಂತೆ ರಶ್ಮಿಕಾ..
ಗೀತಾ-ಗೋವಿಂದಂ ಸಿನಿಮಾದ ವೇಳೆಯಲ್ಲಿಯೇ ಇತ್ತ ರಶ್ಮಿಕಾ ಹಾಗೂ ರಕ್ಷಿತ್ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಅದೇ ಸುದ್ದಿ ನಿಜವಾಗುತ್ತೆ ಅಂತ ಮಾಹಿತಿಯನ್ನು ರಶ್ಮಿಕಾ ಮಂದಣ್ಣ ಕುಟುಂಬದ ಆಪ್ತರು ನೀಡಿದ್ದಾರೆ.
ಸದ್ಯ ಟಾಲಿವುಡ್ ನಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಮಂದಣ್ಣ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧಾರ ಮಾಡಿದ್ದಾರಂತೆ. ರಕ್ಷಿತ್ ಮತ್ತು ರಶ್ಮಿಕಾ ಫ್ಯಾಮಿಲಿ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ನಿಶ್ಚಿತಾರ್ಥವನ್ನು ಇಲ್ಲಿಗೆ ಕೈಬಿಡುವ ಮನಸ್ಸು ಮಾಡಿದ್ದಾರಂತೆ.
ನಿಶ್ಚಿತಾರ್ಥವನ್ನು ಮುರಿದುಕೊಳ್ಳುವ ಬಗ್ಗೆ ಕಠಿಣ ನಿರ್ಧಾರ ಮಾಡುವ ಮುನ್ನ ಇಡೀ ಕುಟುಂಬದವರ ಜೊತೆ ಕೂತು ಮಾತನಾಡಿದ್ದಾರಂತೆ. ಹಿರಿಯರು ಹಾಗೂ ಸಂಬಂಧಿಕರೆಲ್ಲರೂ ಒಮ್ಮತದ ನಿರ್ಧಾರ ಮಾಡಿದ್ದಾರಂತೆ. ಸದ್ಯ ರಶ್ಮಿಕಾ ವೃತ್ತಿ ಜೀವನದ ಬಗ್ಗೆ ಗಮನ ಹರಿಸಲಿ, ಮದುವೆ ವಿಚಾರ ಮುಂದೆ ಮಾಡೋಣ ಎಂದು ಕುಟುಂಬದವರು ನಿರ್ಧಾರ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.
ರಕ್ಷಿತ್ ಶೆಟ್ಟಿ ಸೋಷಿಯಲ್ ಮಿಡಿಯಾದಿಂದ ತಮ್ಮ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಆಗುತ್ತಿದೆ ಎನ್ನುವ ಕಾರಣದಿಂದಾಗಿ ಸಾಮಾಜಿಕ ಜಾಲತಾಣದಿಂದ ಹೊರ ಹೋಗಿದ್ದಾರೆ. ಇನ್ನು ಮುಂದೆ ಯಾವುದೇ ಸ್ಮಾರ್ಟ್ ಫೋನ್ ಗಳನ್ನು ಬಳಸುವುದಿಲ್ಲ ಎಂದಿದ್ದಾರೆ. ರಕ್ಷಿತ್ ಈ ನಿರ್ಧಾರ ಮಾಡಲು ಇದೆ ಕಾರಣ ಇರಬಹುದು.
Discussion about this post