ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹೊನ್ನಾಳಿ ರಸ್ತೆಯ ಮೇಲಿನ ಹನಸವಾಡಿ ಬಳಿಯಲ್ಲಿ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಅತ್ಯಂತ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದು ಮಧ್ಯಾಹ್ನ 1.45 ರ ಹೊತ್ತಿಗೆ ಘಟನೆ ನಡೆದಿದ್ದು, ಶಿವಮೊಗ್ಗ ಮಾರ್ಗದಿಂದ ದಾವಣಗೆರೆ ಮೂಲಕ ಬೆಂಗಳೂರಿಗೆ ಹೋಗುತ್ತಿದ್ದ ಕೆ.ಎ. 17 ಎಫ್ 1931 ಕ್ರಮ ಸಂಖ್ಯೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗೆ ಎದುರಿನಿಂದ ಬಂದ ಹೊನ್ನಾಳಿ ತಾಲೂಕು ಲಿಂಗಾಪುರ ಸಮೀಪದ ಬಾಗೋಡಿ ಗ್ರಾಮದ ಇಬ್ಬರು ಸಾವು ಕಂಡಿದ್ದಾರೆ.
ಬೈಕ್ ಚಾಲಕನನ್ನು 21 ವರ್ಷದ ರಘು ಎಂದು ಗುರುತಿಸಲಾಗಿದ್ದು, ಮೃತ ಯುವತಿಯ ಪತ್ತೆ ಇನ್ನು ಸಿಕ್ಕಿಲ್ಲ. ಬಾಗೋಡಿ ಮುಖ್ಯ ರಸ್ತೆಯ ರಘು ಶಿವಮೊಗ್ಗಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದ್ದು ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಯನ್ನು ಗಮನಿಸಿದರೆ ಈ ಇಬ್ಬರ ದೇಹಗಳು ಸ್ಥಳದಲ್ಲೇ ಛಿದ್ರವಾಗಿವೆ.
ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Discussion about this post