ಕಲ್ಪ ಮೀಡಿಯಾ ಹೌಸ್ | ಆನಂದಪುರಂ |
ಜಿಲ್ಲಾ ಕೇಂದ್ರ ಶಿವಮೊಗ್ಗ #Shivamogga ಸೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದು ಉತ್ತಮ ಮಳೆಯಾಗಿದ್ದು, ಹೊಸಗುಂದ #Shivamogga ಉಮಾಮಹೇಶ್ವರ ದೇವಾಲಯದ ಪರಿಸರದಲ್ಲಿ ಮಾತ್ರ ವರುಣ ಪವಾಡವನ್ನೇ ಸೃಷ್ಠಿಸಿದ್ದಾನೆ ಎಂಬ ವಾತಾವರಣ ಇಂದು ಸಂಜೆ ನಿರ್ಮಾಣವಾಗಿತ್ತು.
ಸಾಗರ, #Sagar ಆನಂದಪುರಂ ಸೇರಿದಂತೆ ಹಲವು ಕಡೆಗಳಲ್ಲಿ ಇಂದು ಸಂಜೆ 7 ಗಂಟೆ ವೇಳೆಗೆ ಮಳೆ ಆರಂಭವಾಗಿದ್ದು, 8 ಗಂಟೆ ವೇಳೆಗೆಲ್ಲಾ ನಿಂತು ಹೋಗಿದೆ.

ಇದೇ 18ರ ಗುರುವಾರದಂದು ಶ್ರೀ ಉಮಾಮಹೇಶ್ವರ ದೇವಾಸ್ಥಾನದ ಆವರಣದಲ್ಲಿ ಶ್ರೀಆಂಜನೇಯ ಸ್ವಾಮಿಯ ಬಾಲಾಲಯ ಪ್ರತಿಷ್ಠಾ ಮಹೋತ್ಸವವನ್ನು ಶೃಂಗೇರಿ #Sringeri ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಶ್ರೀಗಳು ತಮ್ಮ ಅಮೃತ ಹಸ್ತದಿಂದ ನೆರವೇರಿಸಲಿದ್ದಾರೆ.

ದೇವಾಲಯದ ಆವರಣದಲ್ಲಿ ಮಾತ್ರ ಆರಂಭದಲ್ಲಿ ಮಳೆ ಸುರಿದಿದ್ದು, ವೀಡಿಯೋದಲ್ಲಿ ದಾಖಲಾಗಿದ್ದು, ಇದು ಒಂದು ಪವಾಡವೇ ಸರಿ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
(ಮಾಹಿತಿ: ಅನಂತ ಕಲ್ಲಾಪುರ, ತೀರ್ಥಹಳ್ಳಿ)










Discussion about this post