ಕಲ್ಪ ಮೀಡಿಯಾ ಹೌಸ್
ಸಾಗರ: ತಾಲೂಕಿನ ಲಾಲ್ ಬಹಾದ್ದೂರ್ ಕಾಲೇಜಿನ ಸಭಾಂಗಣದಲ್ಲಿ ಶಾಸಕ ಹಾಲಪ್ಪ ನೇತೃತ್ವದಲ್ಲಿ ಕೋವಿಡ್-19ರ ನಿಯಂತ್ರಣ ಬಗ್ಗೆ ತಾಲ್ಲೂಕು ಹಂತದ ಅಧಿಕಾರಿಗಳ ಸಭೆ ನೆಡೆಸಿದರು.
ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನೆಡೆಸಿ, ಮತ್ತೆ ಲಾಕ್ಡೌನ್ ಆಗುವ ಸಾಧ್ಯತೆಯಿದ್ದು, ನಾನು ಹೆಚ್ಚು ಸಮಯ ಕ್ಷೇತ್ರದಲ್ಲೇ ಇರುತ್ತೇನೆ. ವೈದ್ಯಕೀಯ ಪರಿಕರಗಳು, ಕ್ಷೇತ್ರದ ಸಮಸ್ಯೆಗಳು, ಅಧಿಕಾರಿಗಳ ಸಮಸ್ಯೆಗಳೇನೇ ಇದ್ದರೂ ಗಮನಕ್ಕೆ ತನ್ನಿ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಅಧಿಕಾರಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಾರ್ವಜನಿಕರ ಹಿತ ಕಾಯುವತ್ತ ಗಮನ ಹರಿಸಿ ಕರ್ತವ್ಯ ನಿರ್ವಸುವಂತೆ ಸೂಚಿಸಿದರು.
ಸಾಗರ ತಾಲೂಕು ಉಪ ವಿಭಾಗೀಯ ಅಧಿಕಾರಿ, ತಹಶೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿ, ವೈದ್ಯಾಧಿಕಾರಿಗಳು, ಪೋಲೀಸ್ ಉಪಾಧಿಕ್ಷಕರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post