ಸಾಗರ, ಹೊಸನಗರ, ಸೊರಬ ತಾಲೂಕುಗಳಲ್ಲಿ ಅಡಿಕೆಗೆ ಬಂದಿರುವ ಎಲೆಚುಕ್ಕಿ ರೋಗವನ್ನು ತೋಟಗಳನ್ನು ದತ್ತು ತೆಗೆದುಕೊಂಡು ಇಲಾಖೆಯಿಂದಲೇ ರೋಗನಿಯಂತ್ರಣ ಮಾಡಿಕೊಡಬೇಕೆಂದು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ತೋಟಗಾರಿಕೆ ಉಪನಿರ್ದೇಶಕರಿಗೆ ಇಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಹಾಯಕರಿಗೆ ವಿವರಿಸಿದ ಅಡಿಕೆ ಬೆಳೆಗಾರರ ಪ್ರಮುಖರು ನಮ್ಮ ಪ್ರಾಂತ್ಯದಲ್ಲಿ ಅಡಿಕೆ ಬೆಳೆಗಾರರು ಸಣ್ಣ ಹಿಡುವಳಿದಾರರಾಗಿರುತ್ತಾರೆ, ಕಳೆದ 2 ವರ್ಷಗಳಿಂದ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 400 ಸಂಕಣ್ಣ ಶಾನುಭೋಗ್ ಗ್ರಾಮ ಪಂಚಾಯಿತಿಯ 500 ಕುಟುಂಬ ಕುದುರೂರು ಪಂಚಾಯಿತಿಯ 200 ಕುಟುಂಬ ಉಳ್ಳೂರು ಪಂಚಾಯಿತಿಯ 40 ಕುಟುಂಬ ಕಲ್ಮನೆ ಪಂಚಾಯಿತಿಯ 10 ಕುಟುಂಬ ಸೇರದಂತೆ ಎಲ್ಲಾ ಕುಟುಂಬದವರ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಕಂಡಿತ್ತು, ಈ ಹಿನ್ನೆಲೆಯಲ್ಲಿ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಪಡುತ್ತಿದ್ದರು ರೈತರು, ಇದರ ಜೊತೆಗೆ ಪ್ರಾಂತ್ಯದಲ್ಲಿ ಅನೇಕ ತೋಟಗಳಲ್ಲಿ ಅಲ್ಲಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ತೋಟಗಾರಿಕೆ ಇಲಾಖೆ ಔಷಧಿಗಳನ್ನ ಸಿಂಪಡಣೆಗೆ ಉಚಿತವಾಗಿ ನೀಡಿದ್ದು ಇದಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ, ಆದರೆ ಇತ್ತೀಚಿನ ದಿನಗಳಲ್ಲಿ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದ್ದು ಅನೇಕ ತೋಟಗಳು ನಾಶಗೊಂಡಿವೆ. ಅಡಿಕೆ ಬೆಳೆಗಾರರ ಕುಟುಂಬ ಜೀವನ ಮಾಡುವುದು ಕಷ್ಟವಾಗಿದೆ ಈ ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಬೆಳೆಗಾರರ ಸಂಕಷ್ಟಕ್ಕೆ ತಕ್ಷಣ ನೆರವಾಗಬೇಕು ಜೊತೆಗೆ ಇನ್ನೂ ಹೆಚ್ಚಿನ ಔಷಧಿಯನ್ನು ಸಿಂಪಡಣೆಗೆ ನೆರವು ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಗರ ಪ್ರಾಂತೀಯ ಅಡಿಕೆ ಬೆಳೆಗಾರ ಸಂಘದ ಅಧ್ಯಕ್ಷ ರಾಮಚಂದ್ರ ಭಟ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಕ, ಬಸವರಾಜ್ ದೊಂಬೆಕೊಪ್ಪ, ಮಾಮ್ ಕೋಸ್ ಉಪಾಧ್ಯಕ್ಷ ಯು.ಹೆಚ್. ರಾಮಪ್ಪ, ಮಹೇಶ್ ಹುಲ್ಕುಳಿ, ದಿನೇಶ್ ಬರದಳ್ಳಿ, ನಾಗರಾಜ್ ಬೇಲೂರು, ಲಕ್ಷ್ಮೀನಾರಾಯಣ್, ಮತ್ತು ಹೆಚ್. ಆರ್. ತೀರ್ಥೇಶ್, ಮಂಜುನಾಥ್ ದೊಂಬೆಕೊಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು. ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post