Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಸಂಭವಾಮಿ ಯುಗೇ…ಯುಗೇ…

September 1, 2018
in Special Articles
0 0
0
Share on facebookShare on TwitterWhatsapp
Read - 3 minutes

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಬ್ಯುದ್ಧಾನಮ ಧರ್ಮಸ್ಯ ತದಾತ್ಮನಾಮ್ ಸೃಜಾಮ್ಯಹಮ್‌॥
ಪರಿತ್ರಾಣಾಯ ಸಾಧುನಾ ವಿನಾಶಾಯ ಚ ದುಷ್ಕೃತಮ್‌
ಧರ್ಮಸಂಸ್ಥಾಪನಾಯಾರ್ಥ ಸಂಭವಾಮಿ ಯುಗೇ ಯುಗೇ॥

ಇದು ಜಗನ್ನಿಯಾಮಕ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶದಲ್ಲಿನ ಉವಾಚ… ಸೃಷ್ಠಿಯಲ್ಲಿ ಯಾವಾಗ ಅನ್ಯಾಯ, ಅಧರ್ಮಗಳು ಮೇರೆ ಮೀರಿ ಹಿಂಸೆ ಹೆಚ್ಚಾಗುವುದೋ ಆಗ ನಾನು ಧರ್ಮ ರಕ್ಷಣೆಗೆ, ಶಿಷ್ಟರ ಉಳಿವಿಗೆ ಮತ್ತೆ ಅವತಾರ ಎತ್ತಿ ಬರುತ್ತೇನೆಂದು ಅಭಯ ನೀಡಿದ್ದಾನೆ.

ದ್ವಾಪರಯುಗದಲ್ಲಿ ಕಂಸ ರಾಜನ ಸ್ವಾರ್ಥ ಪ್ರವೃತ್ತಿಯ ಆಳ್ವಿಕೆ ಹಾಗೂ ಅಧರ್ಮದ ನೀತಿಯಿಂದ ಇಡಿಯ ಕಂಗೆಟ್ಟಯ ದಿಕ್ಕೆಟ್ಟ ವೇಳೆ ಶ್ರೀಹರಿ ಅವತಾರವೆತ್ತುತ್ತಾನೆ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ 8ನೆಯ ಅವತಾರವಾಗಿ ಶ್ರೀಕೃಷ್ಣನಾಗಿ ವಸುದೇವ ಪುತ್ರನಾಗಿ, ದೇವಕಿಯ ಗರ್ಭಾಂಶ ಸಂಭೂತನಾಗಿ ಅಳಿವಿನಂಚಿನಲ್ಲಿದ್ದ ಧರ್ಮ ರಕ್ಷಣೆಗಾಗಿ ಜೀವ ಸಂಕುಲದ ಒಳಿತಿಗಾಗಿ ಭುವಿಯಲ್ಲಿ ಆವಿರ್ಭವಿಸುತ್ತಾನೆ. ಅದೂ ಎಲ್ಲಿ? ಕಂಸ ಕೂಡಿಟ್ಟ ಮಥುರಾದ ಜೈಲಿನಲ್ಲಿ…

ವಸುದೇವ ದೇವಕಿಯ ಕಂದನಿಂದ ತನ್ನ ಅಂತ್ಯವೆಂಬ ಅಶರೀರ ವಾಣಿಯಿಂದ ಮಾಹಿತಿ ಪಡೆದ ಕಂಸ ಮಗುವನ್ನು ಕೊಲ್ಲಲು ಅಣಿಯಾಗುತ್ತಾನೆ. ಕಂಸನ ಮನಃಸ್ಥಿತಿ ಅರಿತ ವಸುದೇವ ಮಧ್ಯರಾತ್ರಿಯಲ್ಲಿ ಜನಿಸಿದ ತನ್ನ ಮಗುವನ್ನು ಎತ್ತಿಕೊಂಡು ಉಕ್ಕಿ ಹರಿಯುತ್ತಿದ್ದ ಯಮುನೆಯನ್ನು ದಾಟಿ ದ್ವಾರಕ ನಗರ ತಲುಪಿ ಯಶೋಧೆಯ ಮಡಿಲಿಗೆ ಕಂದನನ್ನು ನೀಡುತ್ತಾನೆ. ಅಲ್ಲಿಂದ ಶ್ರೀಕೃಷ್ಣನ ಬಾಲಲೀಲೆ ಜಗತ್ತಿಗೆ ತೋರಲಾರಂಭಿಸುತ್ತದೆ.

ಶ್ರೀಕೃಷ್ಣನ ಇರುವಿಕೆಯನ್ನರಿತ ಕಂಸ ಆತನನ್ನು ಕೊಲ್ಲಲು ಅನೇಕ ವಾಮಮಾರ್ಗಗಳನ್ನು ಬಳಸಿ ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಕೊನೆಗೆ ವಿಫಲನಾಗುತ್ತಾನೆ. ನಂತರದ ಬೆಳವಣಿಗೆಗಳಲ್ಲಿ ಶ್ರೀಕೃಷ್ಣ ಸಂಬಂಧದಲ್ಲಿ ತನಗೆ ಸೋದರ ಮಾವನಾದರೂ ಧರ್ಮದ ಉಳಿವಿಗಾಗಿ ಕಂಸನನ್ನು ವಧಿಸುತ್ತಾನೆ.

ಮುಂದೆ ನಡೆದ ಪಾಂಡವ-ಕೌರವರ 18 ದಿನಗಳ ಮಹಾ ಯುದ್ಧದಲ್ಲೂ ಪಾಂಡವರ ಗೆಲುವಿಗೆ ಪ್ರಮುಖ ಕಾರಣನಾಗಿ ಧರ್ಮವನ್ನು ಎತ್ತಿ ಹಿಡಿಯುತ್ತಾನೆ ಈ ಜಗನ್ನಿಯಾಮಕ. ಇದಿಷ್ಟೂ ನೀವು ನಾವುಗಳು ಚಿಕ್ಕಂದಿನಿಂದಲೂ ಕೇಳಿಕೊಂಡು ಬಂದಿರುವ ಶ್ರೀಕೃಷ್ಣನ ಮಹಿಮೆ.

ಈ ಲೇಖನದ ಮೂಲಕ ನಿಮ್ಮ ಮುಂದೆ ಇಡಲಾಗುತ್ತಿರುವ ವಿಚಾರವೆಂದರೆ ಸಹಸ್ರಾರು ವರ್ಷಗಳ ಹಿಂದೆ ಇದ್ದ ಕಂಸ. ದುರ್ಯೋಧನ, ದುಶ್ಯಾಸನರಂತಹ ಮಾನವ ಸ್ವರೂಪಿ ದುಷ್ಟರು ಇಂದಿಗೂ ನಮ್ಮ ನಡುವೆ ಇದ್ದಾರೆಯೇ…?

ಏಕಿಲ್ಲ.. ಒಮ್ಮೆ ಯೋಚಿಸಿ ನೋಡಿ… ಮಾನವ ಜೀವಿಯಾಗಿ ನಿಮ್ಮ ನಮ್ಮ ನಡುವೆ ಅಂತಹ ದುರುಳರ ಗುಣಗಳನ್ನು ಪಡೆದು ಹಾಗೂ ಮೈಗೂಡಿಸಿಕೊಂಡು ಹಲವಾರು ನರರು ಬದುಕುತ್ತಿದ್ದಾರೆ. ದುರಾಸೆ, ಸ್ವಾರ್ಥ, ವಂಚನೆ, ಹಿಂಸೆ, ಮೋಸಗಳ ಗುಣಗಳನ್ನು ಹೊತ್ತು ಮೆರೆಯುತ್ತಿರುವುದಕ್ಕೆ ಈ ಮಣ್ಣು ಪ್ರತಿನಿತ್ಯ ಸಾಕ್ಷಿಯಾಗುತ್ತಲೇ ಇದೆ. ಆದರೆ, ಇದು ಕಲಿಯ ಮಹಿಮೆ ಎನ್ನುವುದೂ ಸಹ ಸತ್ಯವೇ.

ಅಂದು ಕಂಸ ತಾನು ಸರ್ವಶಕ್ತ, ಅಂತ್ಯವನ್ನು ಕಾಣದವ, ಸಮಸ್ತ ಸೃಷ್ಠಿಯೇ ತನ್ನಿಂದ/ತನ್ನ ಅಧೀನ ಎಂಬ ಅಹಂಕಾರದಿಂದ ಮನುಕುಲ ಹಾಗೂ ಧರ್ಮ ಪೀಡಕನಾಗಿ ಬದುಕಿದ್ದ. ಆದರೆ ಇಂದು ಕಂಸನಿಲ್ಲ ಆದರೂ ಸಹ ಆತನ ಗುಣಗಳು ನಮ್ಮ ನಡುವೆ ಆಗಾಗ ಬೆಳಕಿಗೆ ಬರುತ್ತಿರುತ್ತವೆ.

ಮಾನವ ಜನ್ಮ ಅನಿಶ್ಚಿತ. ಯಾವ ಸಮಯದಲ್ಲಿ ಕಾಲನ ಕರೆ ಬರುವುದೋ ಆ ದೇವರೊಬ್ಬನೇ ಬಲ್ಲನೇ ಹೊರತು ಈ ಗುಟ್ಟನ್ನು ಮಾತ್ರ ಸೃಷ್ಠಿಕರ್ತ ಬಿಟ್ಟುಕೊಟ್ಟಿಲ್ಲ. ವೇಗವಾಗಿ ಬೆಳೆಯುತ್ತಿರುವ ಇತ್ತೀಚಿನ ಜೀವನ ಪದ್ದತಿಯಲ್ಲಿ ಸ್ಮಶಾನವನ್ನು ಪ್ರತಿದಿನ ನೋಡಿಕೊಂಡು ತಿರುಗಾಡುತ್ತೇವೆ. ಆದರೂ ಮನುಷ್ಯನಲ್ಲಿ ಹಿಂಸಾ ಅಹಂಕಾರ ಮನೋಭಾವ…!

ಇನ್ನು ದುರ್ಯೋಧನ ಈತ ಸಾಮ್ರಾಜ್ಯಕ್ಕಾಗಿ ತನ್ನ ಸೋದರರ ಜೊತೆ ಮೋಸ, ವಂಚನೆ, ಕುತಂತ್ರ ಬುದ್ದಿಯಿಂದ ಬದುಕಿದಾತ ಇಂದಿಗೆ ಇವನೂ ಸಹ ಇಲ್ಲ ಆಸರೂ ಸಹ ನಮ್ಮ ನಡುವೆ ಇನ್ನೂ ಜೀವಂತ, ಮನುಷ್ಯ ತನ್ನ ಸಹೋದರರೊಂದಿಗೆ ಒಂದು ತಾಯಿ ಗರ್ಭ ಹಂಚಿಕೊಂಡು ಬಂದಿದ್ದನ್ನೂ ಸಹ ಮರೆತು ಅಡಿ ಅಂಗುಲ ಆಸ್ತಿಯ ದುರಾಸೆಗೆ ಬಿದ್ದು ದಾಯಾದಿಗಳಾಗಿ ಅತೃಪ್ತ ಜೀವನವನ್ನು ನಡೆಸುತ್ತಿರುವುದು ನಮ್ಮ ನಡುವೆ ಎಷ್ಟೋ ಉದಾಹರಣೆಗಳಿವೆ ಇಂತಹ ದರ್ಯೋಧನ ಗುಣಗಳಿಗೆ ಅಂತ್ಯವಿಲ್ಲವೇ….?

ನೆಲ, ಜಲ, ಭಾಷೆ, ಆಹಾರಗಳನ್ನು ತಾಯಿಗೆ ಹೋಲಿಸಿ ಧನ್ಯತಾ ಭಾವದಿಂದ ಬದುಕುತ್ತಿರುವವರು ನಾವು ಯತ್ರ ನಾರ್ಯೇಸ್ತು ಪೂಜ್ಯಂತೇ ರಮಂತೇ ತತ್ರ ದೇವತಃ ಪದ್ದತಿಯನ್ನು ನಂಬಿರುವವರು ನಾವು. ಆದರೂ ನಮ್ಮ ನಡುವೆ ದುಶ್ಯಾಸನ ಗುಣಗಳು ಇನ್ನೂ ಜೀವಂತ, ಕಾಮಾಂಧರ ಕಣ್ಣನ್ನು ಮೆಚ್ಚಿಸಲು ದ್ರೌಪದಿಯ ವಸ್ತ್ರಾಪಹರಣದಂತಹ ನೀಚ ಕೃತ್ಯಕ್ಕೆ ಕೈ ಹಾಕಿದಾತ. ಈಗಲೂ ಕೆಲವು ನೀಚ ಪುರುಷರು ಸ್ತ್ರೀಯ ಮೇಲೆ ಬಲಾತ್ಕಾರ ಅತ್ಯಾಚಾರಗಳ ಮೂಲಕ ಕೀಳಾಗಿ ನಡೆಸಿಕೊಂಡು ದುಶ್ಯಾಸನನನ್ನು ನೆನಪಿಸುತ್ತಿರುವುದು ಶೋಚನೀಯ.. ಏಕೆ ಹೀಗೆ…?

ಕುರುವಂಶದ ದೊರೆ ಧೃತರಾಷ್ಟ್ರ ಸಜ್ಜನ. ದೊರೆಯಾದರು ಸಹ ತನ್ನ ಮಗ ದುರ್ಯೋಧನ ತುಳಿದಿದ್ದ ಅಧರ್ಮದ ಮಾರ್ಗ ಅರಿಯದಾದ. ಅದರ ಪರಿಣಾಮ ಏನಾಯಿತು ಎನ್ನುವನ್ನು ಇತಿಹಾಸದ ಪುಟಗಳು ಹೇಳಿವೆ. ಹಾಗೆಯೇ, ಇಂದಿನ ಪೋಷಕರು ತಮ್ಮ ಮಕ್ಕಳ ಪ್ರತಿ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾ ಹೊಂದಿರಬೇಕು. ಮಕ್ಕಳ ಮೇಲಿನ ಪ್ರೀತಿ ವಾತ್ಸಲ್ಯ ಅವರ ಮುಂದಿನ ಬದುಕಿಗೆ ನಕಾರಾತ್ಮಕ ಪರಿಣಾಮ ಬೀರುವಂತಿರಬಾರದು. ಆದರೂ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಯಾರದೋ ಪೋಷಕರ ಮಕ್ಕಳು ಅಪರಾಧಿಗಳಾಗಿ ನಿಂತು ಸಮಾಜದ ಮುಂದೆ ಪೊಷಕರನ್ನು ತಲೆ ತಗ್ಗಿಸುವಂತೆ ಮಾಡುತ್ತಾರೆ ಇಂತಹ ಬೆಳವಣಿಗಗೆ ಇತಿಶ್ರೀ ಹೇಳಲಾಗದೇ….?

ಇಲ್ಲಿ ಪ್ರಸ್ತಾಪಿಸಲಾಗಿರುವ ಯಾವ ವಿಷಯವೂ ಅಲ್ಲಗೆಳೆಯಲಾಗದು. ಏಕೆಂದರೆ ಪ್ರತಿ ನಿತ್ಯ ನಾವು ವಿವಿಧ ಮಾಧ್ಯಮಗಳ ಮೂಲಕ ಇಂತಹ ಘಟನೆಗಳ ಬಗ್ಗೆ ತಿಳಿದುಕೊಂಡಿರುತ್ತೇವೆ.

ಮನುಷ್ಯ ತನ್ನ ಬುದ್ಧಿ ಶಕ್ತಿಯಲ್ಲಿ ಕಂಸ, ದುರ್ಯೋಧನ, ದುಶ್ಯಾಸನ, ಧೃತರಾಷ್ಟ್ರ ಗುಣಗಳಿಗೆ ಇರಲು ಅವಕಾಶ ಮಾಡಿಕೊಟ್ಟ ಆದರೆ ಶ್ರೀಕೃಷ್ಣನಿಗೆ, ಅವನ ವಿಚಾರಗಳಿಗೆ, ತತ್ವಕ್ಕೆ ಸಮಯ ತನ್ನ ಬುದ್ಧಿಯಲ್ಲಿ ಜಾಗ ಕೊಡುವ ವಿಚಾರದಲ್ಲಿ ಬಹುಪಾಲು ಎಡವಿದ.

ಬಸವಣ್ಣನವರ ವಚನದಂತೆ ಉಳ್ಳವರು ಶಿವಾಲಯವ ಮಾಡುವರಯ್ಯ, ನಾನೇನು ಮಾಡಲಿ ಬಡವನಯ್ಯ…ಎನ್ನ ಕಾಲೇ ಕಂಭ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲ ಸಂಗಮ ದೇವಎಂಬಂತೆ ಹಿರಿಯರು ಮನುಷ್ಯರ ದೇಹವನ್ನು ದೇವಾಲಯಕ್ಕೆ ಹೋಲಿಕೆ ಮಾಡಿಯೂ ಆಗಿದೆ.

ನೀವು ನಾವುಗಳು ಹೃದಯವೆಂಬ ಗರ್ಭಗುಡಿಯಲ್ಲಿ ಶ್ರೀಕೃಷ್ಣನನ್ನು ನೆಲೆ ಮಾಡಿಕೊಳ್ಳಬೇಕಾಗಿದೆ. ಒಮ್ಮೆ ಹೃದಯದಿ ಶ್ರೀಕೃಷ್ಣ ನೆಲೆಯಾದನೆಂದರೆ ಬುದ್ಧಿಯನ್ನಾವರಿಸಿರುವ ಕಂಸ, ದುರ್ಯೋಧನ, ದುಶ್ಯಾಸನ, ರಾಕ್ಷಸಿ ಗುಣಗಳ ಜೊತೆಗೆ ಧೃತರಾಷ್ಟ್ರ ಕುರುಡು ಗುಣಗಳು ಸಂಹಾರವಾಗುವುದು ಖಂಡಿತ.
ಪ್ರತಿಯೊಬ್ಬರೂ ತಮ್ಮಲ್ಲಿ ಶ್ರೀಕೃಷ್ಣನನ್ನು ನೆಲೆ ಮಾಡಿಕೊಂಡು ಧರ್ಮವನ್ನು ಗೌರವಿಸಿ ಪಾಲಿಸಿದರೆ ನಮಗರಿವಿಲ್ಲದೆ ನಮ್ಮ ನಡುವೆ ಧರ್ಮದ ಉಳಿವಿಗೆ ಭಗವಂತ ನಮ್ಮ ಜೊತೆ ಕೈ ಜೋಡಿಸಲು ಅವತರಿಸಿರುತ್ತಾನೆ.

ಹಾಗೆಯೇ, ಇಡಿಯ ಜಗತ್ತು ಹೇಗೆ ನಡೆಯಬೇಕು, ಪ್ರತಿ ಮನುಷ್ಯ ತನ್ನ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು, ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಹೇಗಿದ್ದರೆ ಚೆಂದ ಎಂಬ ಕುರಿತಾಗಿನ ಸಮಸ್ತವನ್ನೂ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಇದೊಂದನ್ನು ಪ್ರತಿಯೊಬ್ಬರೂ ಸರಿಯಾಗಿ ಪಠಣ ಮಾಡಿ, ಅರ್ಥೈಸಿಕೊಂಡು, ಅಳವಡಿಸಿಕೊಂಡರೆ ಜೀವನ, ಸಮಾಜವೇ ಪಾವನವಾಗುವುದು ನಿಶ್ಚಿತ..

॥ ಕೃಷ್ಣಂ ವಂದೇ ಜಗದ್ಗುರುಂ ॥

ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಲೇಖನ: ಅರ್ಪಿತ ರಾವ್ ಅಜ್ಜಂಪುರ

 

Tags: DuryodhanaKauravaLord Sri KrishnaMahabharataPandavaSri Krishna Janmashtamiಕೃಷ್ಣಂ ವಂದೇ ಜಗದ್ಗುರುಂ
Previous Post

The Last Guardian Playstation 4 Game review

Next Post

ಶಿವಮೊಗ್ಗದಲ್ಲಿ ಗುಂಪು ಘರ್ಷಣೆ, ಲಾಠಿ ಪ್ರಹಾರ: ಬಿಗುವಿನ ವಾತಾವರಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗದಲ್ಲಿ ಗುಂಪು ಘರ್ಷಣೆ, ಲಾಠಿ ಪ್ರಹಾರ: ಬಿಗುವಿನ ವಾತಾವರಣ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Internet Image

ಗಮನಿಸಿ | ಜೂನ್ 26ರ ನಾಳೆ ಸೊರಬದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 25, 2025

ಮಾದಕ ವ್ಯಸನ ವಿರೋಧಿ ದಿನ: ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

June 25, 2025

ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಚನ್ನಬಸಪ್ಪ

June 25, 2025

ಮುಸ್ಲಿಮರಿಗೆ ವಸತಿ ಯೋಜನೆಯಲ್ಲಿ ಶೇ.15ರಷ್ಟು ಮೀಸಲಾತಿ ಕೂಡಲೇ ಹಿಂಪಡೆಯಿರಿ

June 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Internet Image

ಗಮನಿಸಿ | ಜೂನ್ 26ರ ನಾಳೆ ಸೊರಬದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 25, 2025

ಮಾದಕ ವ್ಯಸನ ವಿರೋಧಿ ದಿನ: ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

June 25, 2025

ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಚನ್ನಬಸಪ್ಪ

June 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!