ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬೈಕ್ ಅಪಘಾತಕ್ಕಿಡಾಗಿದ್ದ ಸ್ಯಾಂಡಲ್’ವುಡ್ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.
ಈ ಕುರಿತಂತೆ ನಟ ಸುದೀಪ್ ತಮ್ಮ ಟ್ವಿಟರ್’ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ನಟ ಸಂಚಾರಿ ವಿಜಯ್ ಇನ್ನಿಲ್ಲ ಎಂಬುದನ್ನು ನೆನಪಿಸಿಕೊಳ್ಳಲು ಕೂಡ ಆಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಬಾರಿ ನಾನು ಅವರು ಭೇಟಿಯಾಗಿದ್ದೆವು. ಅಲ್ಲದೇ ಅವರ ಮುಂದಿನ ಚಿತ್ರದ ಬಗ್ಗೆಯೂ ಕುತೂಹಲ ಮೂಡಿತ್ತು. ಮುಂದಿನ ಚಿತ್ರ ಬಿಡುಗಡೆ ಮುನ್ನವೇ ಅವರು ಇನ್ನಿಲ್ಲವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಕೋರಿದ್ದಾರೆ.
Very very disheartening to accept that Sanchari Vijay breathed his last.
Met him couple of times just bfr this lockdown,,,, all excited about his nxt film,, tats due for release.
Very sad.
Deepest Condolences to his family and friends.
RIP 🙏🏼— Kichcha Sudeepa (@KicchaSudeep) June 14, 2021
ಬಿಜೆಪಿ ಮುಖಂಡರಾದ ಸಿ.ಟಿ. ರವಿ ಹಾಗೂ ಶೋಭಾ ಕರಂದ್ಲಾಜೆ ಅವರೂ ಸಹ ಟ್ವೀಟ್ ಮಾಡಿದ್ದು, ಅಗಲಿದ ನಟನಿಗೆ ಸಂತಾಪ ಸೂಚಿಸಿದ್ದಾರೆ.
ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದು, ಮೃತ ನಟನ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕಳೆದ 32 ಗಂಟೆಗಳಿಂದಲೂ ಡೀಪೆಸ್ಟ್ ಪಾಸಿಬಲ್ ಸ್ಥಿತಿಯಲ್ಲಿತ್ತು. ಅಲ್ಲದೇ ಚಿಕಿತ್ಸೆಗೆ ಅವರ ಮೆದುಳು ಯಾವುದೇ ರೀತಿಯಲ್ಲೂ ಸಹ ಸ್ಪಂದಿಸುತ್ತಿರುಲಿಲ್ಲ. ಇಂದು ಮುಂಜಾನೆ ವೇಳೆಗೆ ಉಸಿರಾಟದ ಸಾಮರ್ಥ್ಯವೂ ಸಹ ಕ್ಷೀಣವಾಗಿತ್ತು. ಅಪಘಾತದಲ್ಲಿ ವಿಜಯ್ ಮೆದುಳಿನ ಮೂಳೆಗೆ ತೀವ್ರ ಘಾಸಿಯಾಗಿತ್ತು.
ಇನ್ನು ವಿಜಯ್ ಸೋದರ ಮಾತನಾಡಿದ್ದು, ಹೀಗಾಗಿ ವಿಜಯ್ ಆಸೆಯಂತೆ ಅವರ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.
ಇಹಲೋಕದ ಸಂಚಾರ ನಿಲಿಸಿದ ಸಂಚಾರಿಗೆ ಭಾವಪೂರ್ಣ ವಿದಾಯ. #SanchariVijay#ಓಂಶಾಂತಿಃ pic.twitter.com/g9l0leNSYg
— C T Ravi 🇮🇳 ಸಿ ಟಿ ರವಿ (@CTRavi_BJP) June 14, 2021
ಇಂದು ಬೆಳಗ್ಗೆ 10 ಗಂಟೆ ವೇಳೆಗೆ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ತಮ್ಮ ನಿರ್ಧಾರದಂತೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಹಿ ಹಾಕಿದ್ದರು. ಮೆದುಳು ನಿಷ್ಕ್ರಿಯಗೊಂಡ 5-6 ಗಂಟೆಯೊಳಗೆ ಅಂಗಾಂಗ ದಾನ ಮಾಡಬೇಕಿದ್ದ ಹಿನ್ನೆಲೆಯಲ್ಲಿ 12 ಗಂಟೆ ವೇಳೆಗೆ ಪ್ರಕ್ರಿಯೆ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post