No Result
View All Result
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ
English Articles

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

by ಕಲ್ಪ ನ್ಯೂಸ್
March 9, 2026
0

Kalpa Media House  |  Mysuru | Non-communicable diseases that were earlier seen mostly after the age of 60 are now...

Read moreDetails
Yamaha Introduces XSR155 in ‘Metallic Black’ shade

Yamaha Introduces XSR155 in ‘Metallic Black’ shade

March 9, 2026
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

March 5, 2026

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
  • Advertise With Us
  • Grievances
  • About Us
  • Contact Us
Wednesday, March 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಹಸಿರನುಟ್ಟ ಭೂತಾಯಿಯ ಸೀಮಂತ | ಭೂಮಿ ಹುಣ್ಣಿಮೆ ಹಬ್ಬ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 28, 2023
in Special Articles
0
ಹಸಿರನುಟ್ಟ ಭೂತಾಯಿಯ ಸೀಮಂತ | ಭೂಮಿ ಹುಣ್ಣಿಮೆ ಹಬ್ಬ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಭೂಮಿ ಹುಣ್ಣಿಮೆ ಹಬ್ಬ. #BhoomiHunnime ಆಹಾ, ಬಾಲ್ಯದಲ್ಲಿ ಈ ಹಬ್ಬ ಅಂದ್ರೆ ಏನೋ ಸಂಭ್ರಮ. ಆಚರಣೆಯ ಬಗ್ಗೆ ಅರಿವಿಲ್ಲದೆ ಹೋದರೂ ಕಡುಬು ತೋಟದಲ್ಲಿ ತಿನ್ನಬಹುದಲ್ಲ ಅನ್ನೋ ಖುಷಿ.

ಪರಿಸರದಲ್ಲಿ ಆಗೋ ಪ್ರತಿ ಬದಲಾವಣೆಯನ್ನೂ ಗಮನಿಸಿ ನಮ್ಮ ಹಿರಿಯರು ಹಬ್ಬಗಳ ಆಚರಣೆ ತಂದರು. ಈ ಹಬ್ಬ ಬರುವುದು ಭೂಮಿತಾಯಿ ಮೈದುಂಬಿ ಬಸಿರಾದ ಕಾಲದಲ್ಲಿ. ಹೊಲ ಹಸಿರನುಟ್ಟು ಸೀಮಂತಕ್ಕೆ ಸಿಂಗಾರಗೊಂಡ ಕಾಲವದು. ಈ ಹಬ್ಬದ ಆಚರಣೆ ಊರಿಂದ ಊರಿಗೆ ಭಿನ್ನ. ಆದರೇನಂತೆ ಭಾವ ಅದೇ ತಾನೇ. ಭೂಮಿಯನ್ನು #Earth ಹೆಣ್ಣಿಗೆ ಹೋಲಿಸಿದ್ದೇವೆ ನಾವು. ಪ್ರತಿ ಹೆಣ್ಣಿಗೂ ತಾನು ತಾಯಿಯಾಗುವಾಗಿನ ಸಂಭ್ರಮ ಹೇಳತೀರದು. ಸೀಮಂತದ ಸಮಯವಂತೂ ಅತಿ ಸಂತಸದ ಸಮಯ.
ಭೂಮಿ ಹುಣ್ಣಿಮೆ #BhoomiHunnime ಒಂದರ್ಥದಲ್ಲಿ ಭೂಮಿ ತಾಯಿಗೆ ನಾವು ಮಾಡುತ್ತಿರುವ ಸೀಮಂತ. ಹೊಲದಲ್ಲಿ ಅಥವಾ ತೋಟದಲ್ಲಿ ಬಾಳೆಕಂಬದ ಮಂಟಪ ಕಟ್ಟಿ ಮಾವಿನ ತೋರಣದಿಂದ ಸಿಂಗರಿಸಲಾಗುತ್ತದೆ. ವಿವಿಧ ಬಗೆಯ ಸೊಪ್ಪುಗಳನ್ನು ತಂದು ಎಲ್ಲ ಸೇರಿಸಿ ಸಾಕು ಸೊಪ್ಪು ಅಂತ ಪಲ್ಯಾ ಮಾಡಲಾಗತ್ತೆ, ಯಾವುದೇ ನಂಜಿನ ಸೊಪ್ಪು ಉಪಯೋಗಿಸಲಾಗಲ್ಲ ಅನ್ನೋದು ವಿಶೇಷ. ಜೊತೆಗೆ ಸೌತೆಕಾಯಿ ಕಡಬು, ಕೋಸಂಬರಿ, ಬಗೆ ಬಗೆ ಅಡುಗೆ, ಚಿತ್ರಾನ್ನ, ಬುತ್ತಿ ಅನ್ನ ಹೀಗೆ ಹಲವು ಬಗೆ ಪದಾರ್ಥ. ಇದೆಲ್ಲ ಭೂಮಿ ತಾಯಿಗೆ ಬಡಿಸೋಕೆ. ಇವೆಲ್ಲವನ್ನೂ ಸಿದ್ದಪಡಿಸಿ ಮುಂಜಾನೆ ಭೂಮಿತಾಯಿಗೆ ಪೂಜೆ. ಮಂತ್ರ ಪೂಜೆಯೊಂದಿಗೆ ಇವೆಲ್ಲ ಅಡುಗೆಯನ್ನು ನೈವೇದ್ಯ ಮಾಡಿ, ಜೊತೆ ಒಂದಷ್ಟನ್ನು ಭೂಮಿಯೊಳಗೆ ಹುಗಿಯೋದು ಪದ್ಧತಿ. ಅದು ಭೂಮಿತಾಯಿಗೆ ಬಡಿಸಿದಂತೆ. ಅದಲ್ಲದೆ ಸಾಕು ಸೊಪ್ಪು, ಬುತ್ತಿ ಅನ್ನ, ಚಿತ್ರಾನ್ನ, ಪಾಯ್ಸ ಕಡುಬನ್ನು ಮಿಶ್ರ ಮಾಡಿ ಹಾಡು ಹೇಳುತ್ತ ಭೂಮಿಯ ಎಲ್ಲ ಕಡೆ ಬಿತ್ತೋದು ಪದ್ಧತಿ.

ನಮ್ಮ ಕಡೆ ಸ್ವಲ್ಪ ಭಿನ್ನ ಪದ್ಧತಿಯಿದೆ. ಭೂಮಿತಾಯಿಗೆ ಬಡಿಸಲು ರಾತ್ರಿ ಇಡೀ ಬಗೆ ಬಗೆಯ ಅಡುಗೆ ಮಾಡಿ ಮುಂಜಾನೆ ಕಾಗೆ ಕೂಗುವುದರೊಳಗೆ ಪೂಜೆ ಸಲ್ಲಿಸಿ ಭೂಮಿಗೆ ಅಡುಗೆಯನ್ನು ಬಡಿಸಿ ಸಂಭ್ರಮಿಸೋ ಪದ್ಧತಿ. ಸಿದ್ಧಪಡಿಸಿದ ಅಡುಗೆ ಎಲ್ಲವನ್ನೂ ಚಂದವಾಗಿ ಅಲಂಕರಿಸಿದ ಬುಟ್ಟಿಯಲ್ಲಿ ಜೋಡಿಸಿ ಗದ್ದೆಗೆ ಹೊತ್ತೊಯ್ಯೋದು ನೋಡೋಕೆ ಕಣ್ಣಿಗೆ ಹಬ್ಬ. ಆ ಬುಟ್ಟಿಯನ್ನ ‘ಕುಕ್ಕೆಬುಟ್ಟಿ’ ಅಂತ ಕರೀತಾರೆ. ಬೆತ್ತದ ಬುಟ್ಟಿಗೆ ಚಂದಚಂದದ ರಂಗೋಲಿಯನ್ನು ಜೇಡಿಯಲ್ಲಿ ಬರೆಯುತ್ತಾರೆ. ಅದನ್ನ ನವರಾತ್ರಿ ದಶಮಿಯಿಂದ #Navaratri ಬರೆಯಲು ಪ್ರಾರಂಭಿಸಿದರೆ ಭೂಮಿ ಹುಣ್ಣಿಮೆ ದಿನಕ್ಕೆ ಪೂರೈಸುತ್ತಾರೆ. ಹೀಗೆ ಅಲಂಕಾರಿಸಿದ ಕುಕ್ಕೆಬುಟ್ಟಿಯಲ್ಲಿ ಭೂತಾಯಿಗೆ ಬಗೆ ಬಗೆಯ ಅಡುಗೆಯ ಹೊತ್ತು ಸಾಗೋ ಪರಿ ಅನನ್ಯ.
Kalahamsa Infotech private limitedಪ್ರಕೃತಿ ಹಸಿರುಟ್ಟು ಸಿಂಗಾರಗೊಂಡ ಈ ಸಮಯದಿ ಭೂಮಿತಾಯಿಯ ನೋಡೋದೆ ಒಂದು ಹಬ್ಬ. ಅದರಲ್ಲಿ ಭೂಮಿ ಹುಣ್ಣಿಮೆ ಹಬ್ಬವಂತೂ ರೈತರ ಸಂತಸವನ್ನು ಇಮ್ಮಡಿಗೊಳಿಸೋ ಹಬ್ಬವೆಂದೇ ಹೇಳಬಹುದು. ಅನ್ನ ನೀಡೋ ಭೂತಾಯಿ ಮೈದುಂಬಿ ಬಸುರಿಯಾಗಿ ನಿಂತಿದ್ದಾಳೆ. ಅವಳ ಬಯಕೇನ ಅವಳೇನು ಹೇಳುವುದಿಲ್ಲ ನಮಗೆ. ಆ ತಾಯಿಗೆ ಮಕ್ಕಳ ಬಯಕೆಯನ್ನು ಪೂರೈಸುವುದರಲ್ಲೇ ತೃಪ್ತಿ. ಅವಳನ್ನ ಮಲಿನಗೊಳಿಸದೆ ನಮ್ಮ ವೈಭವದ ಜೀವನಕ್ಕೆ ಅವಳನ್ನ ಬಲಿಪಶುವಾಗಿಸದೆ, ಫಲವತ್ತಾಗಿ ಅವಳನ್ನ ಉಳಿಸಿದರೆ ಅದೇ ನಿಜವಾದ ಪೂಜೆ. ಭೂತಾಯಿಯ ಸೇವೆಗೈದು ಅವಳ ಋಣಭಾರವನ್ನು ಕಡಿಮೆಯಾಗಿಸಿಕೊಳ್ಳೋಣ.

(ವಿಶೇಷ ಲೇಖನ: ಕವಿತಾ ಜೋಯ್ಸ್, ಹೊಸನಗರ)

Tags: FestivalhosanagarKannada News WebsiteLatest News KannadaLocal NewsMalnad Newsತೋಟಪರಿಸರಭೂಮಿ ಹುಣ್ಣಿಮೆಭೂಮಿತಾಯಿಮಂತ್ರ ಪೂಜೆಸೀಮಂತಹಬ್ಬಹೊಸನಗರ
Share198Tweet124Send
Previous Post

ಭೂ ಲೋಕದ ಶಿವ: ಲಿಂ. ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರುಗಳು

Next Post

ಚೆನ್ನೈ ಕನ್ನಡ ಬಳಗದ ಸಾಧನೆಯ ಹಾದಿಯೇ ಒಂದು ಮೈಲಿಗಲ್ಲು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಚೆನ್ನೈ ಕನ್ನಡ ಬಳಗದ ಸಾಧನೆಯ ಹಾದಿಯೇ ಒಂದು ಮೈಲಿಗಲ್ಲು

ಚೆನ್ನೈ ಕನ್ನಡ ಬಳಗದ ಸಾಧನೆಯ ಹಾದಿಯೇ ಒಂದು ಮೈಲಿಗಲ್ಲು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ | ಮಹಿಳೆಯರಿಗೆ ಡಾ.ನಿರ್ಮಲಾ ಕರೆ

ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ | ಮಹಿಳೆಯರಿಗೆ ಡಾ.ನಿರ್ಮಲಾ ಕರೆ

March 11, 2026
ಗ್ಯಾಸ್ ಸಿಲಿಂಡರ್ ಅಭಾವ | ಪುತ್ತೂರು ಫುಡ್ ಫೆಸ್ಟ್ ಮುಂದೂಡಿಕೆ

ಗ್ಯಾಸ್ ಸಿಲಿಂಡರ್ ಅಭಾವ | ಪುತ್ತೂರು ಫುಡ್ ಫೆಸ್ಟ್ ಮುಂದೂಡಿಕೆ

March 11, 2026
ಅಶಕ್ತರಿಗೆ ಕಾನೂನಿನ ನೆರವು ಸಿಗಬೇಕು: ನ್ಯಾ.ಎಂ.ಎಸ್. ಸಂತೋಷ್

ಅಶಕ್ತರಿಗೆ ಕಾನೂನಿನ ನೆರವು ಸಿಗಬೇಕು: ನ್ಯಾ.ಎಂ.ಎಸ್. ಸಂತೋಷ್

March 10, 2026
ಯುವ ಸಂಸತ್ ಸ್ಪರ್ಧೆ | 10 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಯುವ ಸಂಸತ್ ಸ್ಪರ್ಧೆ | 10 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

March 10, 2026
ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

ರಾಜ್ಯ ಸರ್ಕಾರದ ಬಜೆಟ್ | ಚಿಂದಿ ಬಟ್ಟೆ ಸೇರಿಸಿ ಕೌದಿ ಹೊಲೆದ ಹಾಗೆ ಆಗಿದೆ: ಈಶ್ವರಪ್ಪ ಲೇವಡಿ

March 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL