ತಿರುವನಂತಪುರಂ: ಸುಮಾರು 800 ವರ್ಷಗಳ ಹಿಂದೂ ಸಂಪ್ರದಾಯವನ್ನು ಮುರಿಯಲೇ ಬೇಕು ಎಂಬ ದುರುದ್ದೇಶದಿಂದ ಅಯ್ಯಪ್ಪ ಭಕ್ತರು ಎಂದು ಹೇಳಿಕೊಂಡು ಕಳ್ಳತನದಲ್ಲಿ ಶಬರಿಮಲೆ ದೇವಾಲಯವನ್ನು ಪ್ರವೇಶಿಸಿರುವ ಇಬ್ಬರು ಮಹಿಳೆಯರು ಯೋಗ್ಯತೆಯನ್ನು ಒಂದು ವೀಡಿಯೋ ಬಯಲು ಮಾಡಿದೆ.
ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ದೇವಾಲಯಕ್ಕೆ ತೆರಳುವಾಗಿ ಮಾಲೆ, ಕಪ್ಪು ವಸ್ತ್ರ ಧರಿಸಿದ್ದು, ಹೊರಕ್ಕೆ ಬಂದ ನಂತರ ಅಲ್ಲಿದ್ದ ಪೊಲೀಸ್ ಠಾಣೆಯಲ್ಲಿ ತಮ್ಮ ಬಟ್ಟೆಗಳನ್ನು ಬದಲಿಸಿಕೊಂಡು ಹೋಗಿರುವುದು ವೀಡಿಯೋದಿಂದ ಸಾಬೀತಾಗಿದೆ.
ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಯ್ಯಪ್ಪನ ದರ್ಶನ ಮಾಡಿ ಹೊರ ಬಂದ ಮಹಿಳೆಯರಿಬ್ಬರು ಅಲ್ಲೇ ಇದ್ದ ಪೊಲೀಸ್ ಠಾಣೆಗೆ ಹೋಗಿ ತಾವು ಧರಿಸಿದ್ದ ಅಯ್ಯಪ್ಪನ ಮಾಲೆಯನ್ನು ಹಾಗೂ ಕಪ್ಪು ಬಟ್ಟೆಯನ್ನು ಬದಲಿಸಿದ್ದಾರೆ.
42 ವರ್ಷದ ಬಿಂದು ಕಣ್ಣೂರು ವಿಶ್ವವಿದ್ಯಾನಿಲಯದ ಕಾಲೇಜು ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು 44 ವರ್ಷದ ಕನಕ ದುರ್ಗಾ ಮಲ್ಲಪುರಂನ ಅಂಗಡಿಪುರಂನ ನಾಗರಿಕ ಪೂರೈಕೆ ಇಲಾಖೆಯಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಬ್ಬರು ನಿನ್ನೆ ಬೆಳಗ್ಗೆ 3.30 ಸುಮಾರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಹೊರ ಬಂದಿದ್ದರು. ಮಹಿಳೆಯರಿಬ್ಬರು ದರ್ಶನ ಮಾಡುತ್ತಿರುವ ವಿಡಿಯೋವನ್ನು ಅಯ್ಯಪ್ಪ ಭಕ್ತರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಕೇರಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಅಲ್ಲದೇ, ಪ್ರಕರಣದ ಹಿನ್ನೆಲೆಯಲ್ಲಿ ಇಂದು ಕೇರಳ ಬಂದ್ ಆಚರಿಸಲಾಗುತ್ತಿದ್ದು, ಹಲವೆಡೆ ವ್ಯಾಪಕ ಹಿಂಸೆ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತರಾಗಿದ್ದಾರೆ.
Discussion about this post