ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 23 ರಿಂದ 27ರವರೆಗೆ ನಡೆದ ರಾಜ್ಯಮಟ್ಟದ ಎನ್ಎಸ್ಎಸ್ ಯುವಜನೋತ್ಸವದಲ್ಲಿ ಕುವೆಂಪು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ತಿಳಿಸಿದ್ದಾರೆ.
ಯುವಜನೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ 12 ಜನ ಸ್ವಯಂ ಸೇವಕರು ಭಾಗವಸಿದ್ದರು. ಪ್ರಹಸನ – ಪ್ರಥಮ ಸ್ಥಾನ, ಸುಗಮ ಸಂಗೀತ – ಸಾಮೂಹಿಕ ಮತ್ತು ವೈಯಕ್ತಿಕ ಎರಡೂ ವಿಭಾಗಳಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದು, ಅವರಿಗೆ ವಿಶ್ವವಿದ್ಯಾಲಯದ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಸ್ನಾತಕೋತ್ತರ ಎಮ್ಪಿಎಡ್ ವಿದ್ಯಾರ್ಥಿಗಳಾದ ಸಿ.ಎಮ್. ಹರ್ಷ, ಎನ್.ಡಿ. ಆಶಾರಾಣಿ, ಟಿ.ಕೆ. ಅಶ್ವಿನಿ, ನೀಲಕಂಠ, ಟಿ.ಆರ್. ರಂಜಿತ, ಸಿ. ಸಾಗರ್, ಮತ್ತು ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳಾದ ಸಿ.ಓ. ಪುನೀತ್, ಚಂದ್ರು ಸಿದ್ದಪ್ಪ ಜಂಗಣ್ಣವಾರಿ, ಎಮ್.ಸಿ. ಪ್ರಿಯಾಂಕ, ಜೆ. ಮೇಘಮಾಲ, ಮಮತ ಈಶ್ವರ ನಾಯ್ಕ್, ಟಿ.ಎಮ್. ಪೂರ್ಣಿಮಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post