ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
10 ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನಸ್ಸಿದ್ದಾಗ ನಿರ್ದಿಷ್ಟವಾದ ಗುರಿ ಮುಟ್ಟಲು ಸಾಧ್ಯ. ಅಂದಾಗ ಮಾತ್ರ ಜೀವನ ಸುಂದರವಾಗಿರುತ್ತದೆ. ಎಂದು ಡಾ. ಜಿ ಎಸ್ ಶಿವಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಕೋರಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸೋಮವಾರ ಪಟ್ಟಣದ ಕುಮದ್ವತಿ ವಸತಿ ಶಾಲೆಯ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ನಡೆದ ಸರಸ್ವತಿ ಪೂಜೆ ಹಾಗೂ ವಾರ್ಷಿಕ ಪರೀಕ್ಷೆಗೆ ಶುಭ ಹಾರೈಸಿ ಅವರು ಮಾತನಾಡಿದರು.
ಅಬ್ದುಲ್ ಕಲಾಂ ಅವರ ಮಾತಿನಂತೆ ಯಾರು ಕನಸು ಕಾಣ್ತಾರೋ ಆ ಕನಸುಗಳು ಆಲೋಚನೆಗಳಾಗುತ್ತವೆ ಆ ಆಲೋಚನೆಗಳು ಸೃಜನಾತ್ಮಕ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ ನಿಮ್ಮನ್ನು ನೀವು ಬದಲಾಯಿಸಿದರೆ ನಿಮ್ಮ ಜಗತ್ತೇ ನಿಮ್ಮನ್ನು ನೋಡುತ್ತದೆ ಪೋಷಕರು ನಿಮ್ಮ ನಿರೀಕ್ಷೆಯಲ್ಲಿ ಇರ್ತಾರೆ ತಾವು ಬೆಳೆದು ಬಂದ ಹಾದಿಯನ್ನು ಮಕ್ಕಳಿಗೆ ತಿಳಿಸಿದರು. ಯಾರನ್ನು ಹೋಲಿಕೆ ಮಾಡಿ ಕೊಳ್ಳಬೇಡಿ, ನಿಮ್ಮನ್ನು ನೀವು ನಂಬಿ, ನಿಮ್ಮಲ್ಲಿ ಅಪಾರವಾದ ಸಂಪತ್ತು ಇದೆ. ಇತ್ತೀಚಿಗೆ ಯುವಕರು ಕ್ರಿಕೆಟು, ಸಿನಿಮಾ, ಮೊಬೈಲ್ ಚಾರ್ಟ್ ಮುಂತಾದ ಹವ್ಯಾಸದಲ್ಲಿ ತೊಡಗಿದ್ದಾರೆ ಅದನ್ನು ದುರುಪಯೋಗಪಡಿಸಿಕೊಳ್ಳದೆ.ಸದುಪಯೋಗಪಡಿಸಿಕೊಂಡು ಸಾಗಿ, ಏಕೆಂದರೆ ಜೀವನ ಎಂಬುದು ಅಮೂಲ್ಯವಾದದ್ದು ಸಜ್ಜನರ ಸಂಘ ಹೆಜ್ಜೇನು ಸವಿದಂತೆ ವಿದ್ಯಾರ್ಥಿಗಳಲ್ಲಿ ಜ್ಞಾನ, ಆಸಕ್ತಿ ಕುತೂಹಲ ಕೌಶಲ್ಯಗಳು ಇದ್ದರೆ ಭವಿಷ್ಯ ಉಜ್ವಲ ಗೊಳ್ಳುತ್ತದೆ ಎಂದು ಅವರು ತಿಳಿಸಿದರು.
Also read: ಭಾರತೀಯ ಸಂಸ್ಕೃತಿಯ ದ್ಯೋತಕ ಕಂಬಳಕ್ಕೆ ಸಹಕಾರ ಅವಶ್ಯ: ಕೆ.ಎಸ್. ಈಶ್ವರಪ್ಪ
ಪ್ರಾಸ್ತಾವಿಕ ನುಡಿಗಳನ್ನು ಪ್ರಾಚಾರ್ಯರಾದ ಡಾ. ಎಂ. ವೀರೇಂದ್ರ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಶಕ್ತಿ ಇದೆ ಎಲ್ಲರೂ ಪ್ರಯತ್ನ ಪಟ್ಟರೆ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಹಬ್ಬದಂತೆ ಎದುರಿಸಿಲು ಸಾಧ್ಯ ಎಂದು ಸ್ಪೂರ್ತಿ ತುಂಬಿದರು.ಎಲ್ಲರೂ ಮಾಡಿದ ಹಾಗೆ ಮಾಡಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ ಸ್ವಲ್ಪ ಭಿನ್ನವಾಗಿ ಕೆಲಸ ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯ ಪರೀಕ್ಷೆಯಲ್ಲಿ ಅಂಕಗಳು ಮಾತ್ರ ಸೀಮಿತವಲ್ಲ ನಮ್ಮಲ್ಲಿ ಸಚ್ಚಾರಿತ್ರ್ಯ ಗುಣಗಳು ದಾರಿದೀಪವಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಬದಲಾಗಬೇಕು ವಿದ್ಯಾರ್ಥಿಗಳು ಅರಳುವ ಪುಷ್ಪದಂತೆ ಎಂದು ಮಕ್ಕಳಿಗೆ ತಿಳಿಸಿದರು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂಜಯ್ ಮಾತನಾಡಿ ಕಾಲೇಜ್ ದಿನಗಳನ್ನು ಮೆಲುಕು ಹಾಕಿದನು. ನಂತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ನೆನಪಿನ ಕಾಣಿಕೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.
ಮತ್ತೋರ್ವ ಅತಿಥಿಗಳಾದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ರವೀಂದ್ರ ಮಾತನಾಡಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವೃತ್ತಿಪರ ಕೋರ್ಸುಗಳ ಬಗ್ಗೆ ಮಾಹಿತಿ ನೀಡಿ ಶುಭಕೋರಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥ ಪರ್ವೇಜ್ ಅಹಮ್ಮದ್ ಮಾತನಾಡಿ ನಮ್ಮಲ್ಲಿ ನಮಗೆ ವಿಶ್ವಾಸ ಇದ್ದಾಗ ಅತ್ಯುತ್ತಮ ಸಾಧನೆ ಮಾಡಲು ಪ್ರೇರಣೆ ಆಗುತ್ತದೆ. ಮಕ್ಕಳು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು ಜೊತೆಗೆ ನಾವು ಜೀವನದಲ್ಲಿ ಕಷ್ಟ- ಸುಖ, ಸೋಲು- ಗೆಲುವು, ಹಗಲು- ರಾತ್ರಿ ಇದ್ದೇ ಇರುತ್ತದೆ ವಿದ್ಯಾರ್ಥಿಗಳು ಒಳ್ಳೆಯ ಸಚ್ಚಾರಿತ್ರ್ಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.
ಕಾಲೇಜು ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಚಿನ್ಮಯ್ ಮತ್ತು ಪ್ರೇಕ್ಷಾ.ಎನ್. ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಂಪ್ರದಾಯಿಕ ಹುಡುಗಿಯನ್ನು ತೊಟ್ಟು ಅಂತರಾತ್ಮದಲ್ಲಿ ಹುದುಗಿದೆ ಸಿಹಿ ಕಹಿ ನೆನಪುಗಳೊಂದಿಗೆ ಎಳೆ ಎಳೆಯಾಗಿ ಮೆಲುಕು ಹಾಕಿದರು. ಅವರಿಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಾದ ಆಟೋಟಗಳು. ಡಾನ್ಸಗಳಲ್ಲಿ ತೊಡಗಿಸುವುದರ ಮೂಲಕ ರಂಜಿಸಿ ನಂತರ ಗ್ರೂಪ್ ಫೋಟೋ ತೆಗೆಯುವುದರ ಮೂಲಕ ಸಿಹಿ ಊಟದೊಂದಿಗೆ ಮುಕ್ತಾಯವಾಯಿತು. ದಿವ್ಯಾಶ್ರೀ ಸಂಗಡಿಗರು ಪ್ರಾರ್ಥಿಸಿ, ಅಶ್ವಿತಾ ಸ್ವಾಗತಿಸಿ, ತಬಸಮ್ ವಂದಸಿ , ಮೆಹನಾಜ್ ಖುರೇಶಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಜಿ.ಎಸ್ ಶಿವಕುಮಾರ್, ಆಡಳಿತಸಮನ್ವಯಾಧಿಕಾರಿ ಕುಬೇರಪ್ಪ. ಕೆ ಪ್ರಾಚಾರ್ಯರಾದ, ಡಾ. ಎಮ್. ವೀರೇಂದ್ರ, ಡಾ. ರವೀಂದ್ರ, ಪರ್ವೇಜ್ ಅಹಮದ್, ಚಂದ್ರಶೇಖರ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post