ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪ್ರತಿಯೊಬ್ಬ ಭಾರತ ದೇಶದ ಪ್ರಜೆಯು ದೇಶದ ಐಕ್ಯತೆ ಹಾಗೂ ರಕ್ಷಣೆಗೆ ಸದಾ ಬದ್ಧನಾಗಿರಬೇಕು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳಾದ ಜಿ.ಎಸ್. ಶಿವಕುಮಾರ್ ಅವರು ಕರೆ ನೀಡಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಜೀವ ತ್ಯಾಗ ಮಾಡಿ ದೇಶವನ್ನು ಸ್ವಾತಂತ್ರಗೊಳಿಸಿದ ಹುತಾತ್ಮ ಸೇನಾನಿ ಭಾರತೀಯರನ್ನು ಸ್ಮರಿಸಿ ಅವರ ನೆರಳಲ್ಲಿ ಬದುಕುವುದೇ ನಾವು ಸಲ್ಲಿಸುವ ನಮನ. ಪ್ರತಿಯೊಬ್ಬ ಭಾರತ ದೇಶದ ಪ್ರಜೆಯು ದೇಶದ ಐಕ್ಯತೆ ಹಾಗೂ ರಕ್ಷಣೆಗೆ ಸದಾ ಬದ್ಧನಾಗಿರಬೇಕು ಎಂದರು.
ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಜೀವ ತ್ಯಾಗ ಮಾಡಿ ದೇಶವನ್ನು ಸ್ವಾತಂತ್ರಗೊಳಿಸಿದ ಹುತಾತ್ಮ ಸೇನಾನಿ ಭಾರತೀಯರನ್ನು ಸ್ಮರಿಸಿ ಅವರ ನೆರಳಲ್ಲಿ ಬದುಕುವುದೇ ನಾವು ಸಲ್ಲಿಸುವ ನಮನ. ಪ್ರತಿಯೊಬ್ಬ ಭಾರತ ದೇಶದ ಪ್ರಜೆಯು ದೇಶದ ಐಕ್ಯತೆ ಹಾಗೂ ರಕ್ಷಣೆಗೆ ಸದಾ ಬದ್ಧನಾಗಿರಬೇಕು.
-ಜಿ.ಎಸ್. ಶಿವಕುಮಾರ್

ಕಾರ್ಯಕ್ರಮವನ್ನು ದೀಪಿಕಾ ಮತ್ತು ಸಂಗಡಿಗರು ದೇಶ ಭಕ್ತಿ ಹಾಡುವ ಮೂಲಕ ಪ್ರಾರಂಭಿಸಿದರು. ಸಹಶಿಕ್ಷಕಿಯರಾದ ಕಾವ್ಯ ವಂದಿಸಿ, ವೇದನಾಯ್ಕ್ ಸ್ವಾಗತಿಸಿದರು. ಸಂಗೀತಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post