ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗದ ತೋಟಗಾರಿಕೆ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ್ , ಸಂಖ್ಯಾಶಾಸ್ತ್ರ ವಿಭಾಗದ ಡಾ. ಸತೀಶ ಮತ್ತು ವಿಸ್ತರಣಾ ಶಿಕ್ಷಣ ವಿಭಾಗದ ಡಾ. ಪ್ರದೀಪ್ ರವರು ಗ್ರಾಮದ ನಟರಾಜ ಅವರ ಅಡಿಕೆ ತೋಟಕ್ಕೆ ಭೇಟಿ ನೀಡಿದರು.
ಭೇಟಿ ನೀಡಿದ ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸಿ ಅವರ ಬೆಳೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬೆಳೆಗಳನ್ನು ಪರಿಶೀಲಿಸಿ ರೋಗ ಕೀಟಗಳ ಹಾವಳಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಿದರು.
ನಟರಾಜ್ ಅವರು ತಮ್ಮ ಮುಕ್ಕಾಲು ಎಕರೆ ತೋಟದಲ್ಲಿ ಅಡಿಕೆ ಬೆಳೆಯನ್ನು ಬೆಳೆದಿದ್ದಾರೆ. ಅವರು ಅಡಿಕೆ ನಡುವೆ ಅಂತರ ಬೆಳೆಯನ್ನು ಮಾಡಬೇಕೆಂದು ಕೊಂಡಿದ್ದಾರೆ. ಆದರೆ ತೋಟದ ಪಕ್ಕದಲ್ಲಿ ಕಾಲುವೆ ಹರಿಯುವುದರಿಂದ ಅವರ ಭೂಮಿ ಜವಳಾಗಿತ್ತು. ಅದಕ್ಕೆ ಯಾವ ಬೆಳೆ ಬೆಳೆಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದರು. ತೋಟಕ್ಕೆ ಭೇಟಿ ನೀಡಿದ ಡಾ. ಚಂದ್ರಶೇಖರ್ ತೋಟದ ಪರಿಸ್ಥಿತಿಗನುಗುಣವಾಗಿ ಅಂತರ ಬೆಳೆಯಾಗಿ ಬೆಂಡೆಕಾಯಿಯನ್ನು ಬೆಳೆಯಲು ಸಲಹೆ ನೀಡಿದರು.
ಜೊತೆಗೆ ಬೆಂಡೆಕಾಯಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರೈತರಿಗೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















