ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಮಾಜದಲ್ಲಿ ಪ್ರತಿಯೊಂದು ಚಟುವಟಿಕೆಗಳಿಗೂ ಕಾನೂನಿದೆ, ಆ ಕಾನೂನನ್ನು ಅರಿತು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಎಂದು ಶ್ರೀ ಸಂತೋಷ್. ಎಂ. ಪಾಟೀಲ್ ವೃತನಿರೀಕ್ಷಕರು ಪಟ್ಟಣ ಪೊಲೀಸ್ ಠಾಣೆ ಶಿಕಾರಿಪುರ ಅವರು ಮಾತನಾಡಿದರು.
ಪಟ್ಟಣದ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಪಟ್ಟಣ ಪೊಲೀಸ್ ಠಾಣೆ ಶಿಕಾರಿಪುರ ಇವರ ಸಹಯೋಗದಲ್ಲಿ ವಿಶ್ವ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರಸ್ತುತ ದಿನಮಾನಗಳಲ್ಲಿ ಮಾದಕ ವ್ಯಸನದಿಂದ ಇಡೀ ಜೀವನವೇ ಸರ್ವನಾಶವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವ್ಯಸನ ಮುಕ್ತರಾಗಿ ಆರೋಗ್ಯದ ಕಡೆಗೆ ಗಮನಹರಿಸಬೇಕೆಂದು ತಿಳಿಸಿದರು. ನಂತರ ಭಾರತ ಸಂವಿಧಾನದಲ್ಲಿ ಸರಿಸುಮಾರು ನಲವತ್ತು ಸಾವಿರ ಕಾಯ್ದೆಗಳಿವೆ, ಐಟಿ ಕಾಯ್ದೆ, ಮೋಟಾರ್ ಕಾಯ್ದೆ, ಪೋಕ್ಸೋ ಕಾಯ್ದೆಗಳಿವೆ ಇವುಗಳು ಉಲ್ಲಂಘನೆಯಾದರೆ ವ್ಯಕ್ತಿ ಶಿಕ್ಷೆಗೆ ಗುರಿಯಾಗುತ್ತಾನೆ, ಎಂದು ವಿದ್ಯಾರ್ಥಿಗಳಿಗೆ ಅವರು ಹೇಳಿದರು. ನಂತರ ವಿದ್ಯಾರ್ಥಿಗಳನ್ನು ಕುರಿತು ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಕಂಡಾಗ ಸಮಾಜ ಅವರನ್ನು ಗೌರವದಿಂದ ಕಾಣುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಪ್ರತಿನಿಧಿಗಳು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಜಿ.ಎಸ್. ಶಿವಕುಮಾರ ಮಾತನಾಡಿ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳು ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ, ಇವತ್ತಿನ ದಿನಮಾನಗಳಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ವ್ಯಸನಕ್ಕೆ ಒಳಗಾದ ದೇಶ ಅಮೇರಿಕವಾದರೆ ಅತಿ ಕಡಿಮೆ ವ್ಯಸನಕ್ಕೆ ಒಳಗದ ದೇಶ ಪೋರ್ಚುಗೀಸ್ ಆಗಿದೆ ಅದೇ ರೀತಿ ಭಾರತದಲ್ಲಿ ಕಡಿಮೆ ವ್ಯಸನಕ್ಕೆ ಒಳಗಾದ ರಾಜ್ಯ ತಮಿಳುನಾಡಾಗಿದೆ ಆದ್ದರಿಂದ ನಾವುಗಳು ವ್ಯಸನ ಮುಕ್ತ ಭಾರತವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಜೊತೆಗೆ ಮಕ್ಕಳು ಅಂಕಗಳಿಗೆ ಸೀಮಿತವಾಗದೆ ಎದೆಯಲ್ಲಿ ಕಿಚ್ಚು ಇದ್ದು ತಲೆಯಲ್ಲಿ ಹುಚ್ಚು ಇದ್ದಾಗ ಸಹಜವಾಗಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಅವರು ಮಕ್ಕಳಿಗೆ ತಿಳಿಹೇಳಿದರು.
ಶರತ್. ಎಚ್.ಉಪನಿರೀಕ್ಷಕರು ಪಟ್ಟಣ ಪೊಲೀಸ್ ಠಾಣೆ ಶಿಕಾರಿಪುರ ಇವರು ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಂತರ ಮುಖ್ಯ ಅತಿಥಿಗಳಾದ ಶ್ರೀ ಸಂತೋಷ್ .ಎಂ .ಪಾಟೀಲ್ ಮತ್ತು ಶ್ರೀ. ಶರತ್ .ಹೆಚ್. ರವರನ್ನು ನೆನಪಿನ ಕಾಣಿಕೆ ನೀಡುವುದರ ಮೂಲಕ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕು. ದಿವ್ಯಶ್ರೀ ಸಂಗಡಿಗರು ಪ್ರಾರ್ಥಿಸಿ, ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿ, ಗುರುಪ್ರಸಾದ್ ವಂದಿಸಿದರು. ಶಿವರಾಜ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಂತೋಷ್.ಎಂ. ಪಾಟೀಲ್, ವೃತ ನಿರೀಕ್ಷಕರು ಪಟ್ಟಣ ಪೊಲೀಸ್ ಠಾಣೆ ಶಿಕಾರಿಪುರ ಶ್ರೀ ಶರತ್. ಹೆಚ್. ಉಪನಿರೀಕ್ಷಕರು, ಪ್ರಾಚಾರ್ಯರಾದ ಡಾ. ಜಿ. ಎಸ್. ಶಿವಕುಮಾರ್ ಡಾ.ಎಂ. ವೀರೇಂದ್ರ ಕಾನ್ಸ್ಟೇಬಲ್ ಕೊಟ್ರೇಶಪ್ಪ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post