ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿರಾಳಕೊಪ್ಪ: ಶಿಕಾರಿಪುರ-ಶಿರಾಳಕೊಪ್ಪ ನಡುವಿನ ಭದ್ರಾಪುರದಲ್ಲಿ ಮುಖ್ಯರಸ್ತೆಯಲ್ಲಿ ವಾಹನದಡಿಯಲ್ಲಿ ಸಿಲುಕಲಿದ್ದ ನಾಗರಹಾವೊಂದನ್ನು ಜಕ್ಕಿನಹಳ್ಳಿಯ ಸ್ನೇಕ್ ಕೃಷ್ಣಪ್ಪ ಅವರು ತಮ್ಮ ಸಮಯೋಚಿತ ಕಾರ್ಯದಿಂದ ರಕ್ಷಿಸಿ, ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಶಿಕಾರಿಪುರ-ಶಿರಾಳಕೊಪ್ಪ ನಡುವೆ ಇರುವ ಭದ್ರಾಪುರದ ಬಸ್ ನಿಲ್ದಾಣದ ಬಳಿಯಲ್ಲಿನ ಮನೆಯೊಂದರ ಬಳಿಯಲ್ಲಿ ಸುಮಾರು 6 ಅಡಿ ಉದ್ದದ ನಾಗರ ಹಾವೊಂದು ಕಾಣಿಸಿಕೊಂಡಿತ್ತು. ಜನರ ಸೇರಿದ ಹಿನ್ನೆಲೆಯಲ್ಲಿ ಗಾಬರಿಗೊಂಡ ಹಾವು ವ್ಯಘ್ರಗೊಂಡು ರಸ್ತೆ ದಾಟಲು ಯತ್ನಿಸಿತ್ತು.
ಮುಖ್ಯರಸ್ತೆಯಾದ ಕಾರಣ ವಾಹನ ಸಂಚಾರವೂ ಅಧಿಕವಾಗಿದ್ದ ಹಿನ್ನೆಲೆಯಲ್ಲಿ ಹಾವು ವಾಹನಕ್ಕೆ ಸಿಲುಕುವ ಅಪಾಯವಿತ್ತು. ವಿಷಯ ತಿಳಿದು ತತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕೃಷ್ಣಪ್ಪ ಅವರು, ಗಾಬರಿಗೊಂಡಿದ್ದ ಹಾವನ್ನು ತತಕ್ಷಣವೇ ಹಿಡಿಯದೇ ವ್ಯಘ್ರಗೊಂಡಿದ್ದ ಹಾವನ್ನು ಹಲವು ನಿಮಿಷಗಳ ಕಾಲ ತಮ್ಮದೇ ಚಾಕಚಕ್ಯತೆಯಲ್ಲಿ ಸಮಾಧಾನಗೊಳಿಸಿ, ಆನಂತರ ಅದನ್ನು ಹಿಡಿದು, ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post