ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಕ್ತವು ಮಾನವಲ್ಲಿರುವ ಅತ್ಯಂತ ವಿಶೇಷ ದ್ರವ ಇದು ಸರಿಯಾಗಿ ತನ್ನ ಚಲನಕ್ರಿಯೆಯ ಕಾರ್ಯವನ್ನು ಮಾಡದಿದ್ದರೇ ಮಾನವನು ತನ್ನ ಕ್ರಿಯಾಶೀಲ ಕಾರ್ಯಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ನಿಯಮಿತ ರಕ್ತದಾನದಿಂದ ದೇಹದ ತೂಕ ನಿರ್ವಹಣೆಗೆ ಸಹಕಾರಿ ಎಂದು ಶಿವಮೊಗ್ಗದ ರೆಡ್ಕ್ರಾಸ್ ಸಂಜೀವಿನಿ ರಕ್ತಕೇಂದ್ರ ಹಿರಿಯ ಅನುಷ್ಠಾನ ಅಧಿಕಾರಿ ಧರಣೇಂದ್ರ ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳು ಹಾಗೂ ನಾಡು ಕಂಡ ಧೀಮಂತ ನಾಯಕರಾದ ಯಡಿಯೂರಪ್ಪರವರ #B S Yadiyurappa 82ನೇ ಹುಟ್ಟುಹಬ್ಬ ನಿಮಿತ್ತ ನಗರದ ಮಂಗಳ ಭವನದಲ್ಲಿ ಶ್ರೀಮತಿ ಗಂಗಮ್ಮ ವೀರಭದ್ರಪ್ಪ ಸ್ಮಾರಕ ಟ್ರಸ್ಟ್, ಶಿಕಾರಿಪುರ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ(ರಿ), ಶಿಕಾರಿಪುರ ಮತ್ತು ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ, ಶಿವಮೊಗ್ಗ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಕ್ತದಾನವು ಒಂದು ಆರೋಗ್ಯಕರ ಪ್ರಕ್ರಿಯೆಯಾಗಿದ್ದು, ಅದು ದಾನಿ ಮತ್ತು ಸ್ವೀಕರಿಸುವವರಿಗೆ ಬಹು ಪ್ರಯೋಜನಗಳನ್ನು ನೀಡುವುದಲ್ಲದೇ, ತಪಾಸಣೆಗಳನ್ನು ಸುಗಮಗೊಳಿಸುತ್ತದೆ. ರಕ್ತದಾನ ಮಾಡುವ ಮೊದಲು ಅವರು ಆಗಾಗ್ಗೆ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ, ಇದು ಅವರ ರಕ್ತದೊತ್ತಡ, ಹಿಮೋಗ್ಲೋಬಿನ್ ಮಟ್ಟಗಳು ಮತ್ತು ಸಾಮಾನ್ಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್, ಪ್ರಾಚಾರ್ಯರು ಹಾಗೂ ಸಂಸ್ಥೆಯ ಆಡಳಿತ ಪ್ರತಿನಿಧಿಗಳಾದ ಡಾ. ಶಿವಕುಮಾರ್ ಜಿ ಎಸ್. , ಕುಬೇರಪ್ಪ ಕೆ, ಆಡಳಿತ ಸಮನ್ವಯ ಅಧಿಕಾರಿ, ಮಂಜುನಾಥ್ ಕಾರ್ಯದರ್ಶಿಗಳು, ರೆಡ್ಕ್ರಾಸ್ ಸಂಜೀವಿನಿ ರಕ್ತಕೇಂದ್ರ, ಶಿವಮೊಗ್ಗ. ಡಾ. ವೀರೇಂದ್ರ ಗೌಡ, ವಿದ್ಯಾಶಂಕರ್ ಕೆ ಎಸ್, ಸಿದ್ಧೇಶ್ವರ್, ಡಾ. ರವೀಂದ್ರ, ಪ್ರಶಾಂತ್ ಕುಬಸದ್ ಹೀಗ ವಿವಿಧ ವಿಭಾಗದ ಪ್ರಾಚಾರ್ಯರು, ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಸ್ವಾಗತವನ್ನು ಡಾ.ರವಿ ಹೆಚ್., ಸಹಾಯಕ ಪ್ರಾಧ್ಯಾಪಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ, ವಂದನಾರ್ಪಣೆಯನ್ನು ವಿಶ್ವನಾಥ್ ಪ್ರಾಚಾರ್ಯರು, ಮೈತ್ರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಶಿಕಾರಿಪುರ ಹಾಗೂ ಡಾ. ದೇವರಾಜ ವೈ., ಸಹಾಯಕ ಪ್ರಾಧ್ಯಾಪಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ, ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post