ಕಲ್ಪ ಮೀಡಿಯಾ ಹೌಸ್
ಶಿಕಾರಿಪುರ: ದೇಶದ ಮಾಜಿ ಪ್ರಧಾನಮಂತ್ರಿ ಹಾಗೂ ಯುವಕರ ಆಶಾಕಿರಣ ದಿ. ರಾಜೀವ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ಹರಗಿ ಸರ್ಕಾರಿ ಶಾಲೆಯ ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ವು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಉಳ್ಳಿ ಫೌಂಡೇಶನ್ ನ ಅಧ್ಯಕ್ಷ ಉಳ್ಳಿ ದರ್ಶನ್ ಮಾತನಾಡಿ, ಈ ದೇಶದ 6ನೇ ಪ್ರಧಾನಮಂತ್ರಿಗಳಾದ ರಾಜೀವ್ ಗಾಂಧಿಯವರು ದೇಶದ ಶಕ್ತಿ ಯುವ ಶಕ್ತಿ ಎಂದು ಭಾವಿಸಿ ರಾಷ್ಟೀಯ ಶಿಕ್ಷಣ ಕಾಯ್ದೆ ಜಾರಿಗೆ ತಂದು, “ಜವಾಹಾರ್ ನವೋದಯ ವಿದ್ಯಾಲಯ”ಗಳನ್ನು ಆರಂಭಿಸಿ ಮಕ್ಕಳಿಗೆ 6-12ನೇ ತರಗತಿಯ ವರೆಗೆ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಪ್ರಾರಂಭಿಸಿದರು ಹಾಗೂ 1986ರಲ್ಲಿ ಎಮ್ಟಿಎನ್ಎಲ್ ಪ್ರಾರಂಭಿಸಿ ದೇಶದಾದ್ಯಂತ ಟೆಲಿಫೋನ್ ಕ್ರಾಂತಿ ಪ್ರಾರಂಭಿಸಿ ಹಾಗೆ 18 ವರ್ಷದ ಯುವ ಶಕ್ತಿಗೆ ಮತದಾನದ ಹಕ್ಕನ್ನು ನೀಡಿದ್ದರು.
ಇಂದು ಅವರ ಹುಟ್ಟು ಹಬ್ಬ ವನ್ನು ಅರ್ಥ ಪೂರ್ಣವಾಗಿ ಆಚರಿಸುವ ಸಲುವಾಗಿ ಶಿಕಾರಿಪುರ ತಾಲ್ಲೂಕಿನ ಹರಿಗೆ ಸರ್ಕಾರಿ ಶಾಲೆಯ ಮಕ್ಕಳು ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಮೇಶ್ ಕೋಡಿಹಳ್ಳಿ, ಶೇಖರಪ್ಪ ಗೌಡ್ರು, ಲಿಂಗರಾಜ್, ಚೇತನ್, ಕೇಶವಮೂರ್ತಿ, ದಯಾನಂದ ಗಾಮ, ರೇಣುಕಯ್ಯ, ಗಣೇಶ್, ರಾಜು ಉಡುತಡಿ, ಹಾಗು ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post