ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರಖ್ಯಾತ ಕೋಟೆ ಶ್ರೀ ಆಂಜನೇಯ ದೇವಾಲಯದ ಪ್ರಧಾನ ಅರ್ಚಕರಾದ ಕೇಶವ ಮೂರ್ತಿ ಅಯ್ಯಂಗಾರ್(85) ಇಂದು ಇಹಲೋಕ ತ್ಯಜಿಸಿದ್ದಾರೆ.
ಸಂಘ ಪರಿವಾರದ ಎಲ್ಲಾ ಚಟುವಟಿಕೆಗಳಲ್ಲೂ, ಅಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸದಾ ಕಾಲ ತೊಡಗಿಸಿಕೊಂಡು ಸಮಾಜದ ಮಾರ್ಗದರ್ಶಿಗಳಾಗಿದ್ದರು.
ಶ್ರೀಯುತರು ಭಜರಂಗದಳದ ಜಿಲ್ಲಾ ಸಂಚಾಲಕ ದೀನ ದಯಾಳು ಅವರ ತಂದೆಯವರಾಗಿದ್ದಾರೆ.
ಶ್ರೀಯುತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ನಗರದ ಕೋಟೆ ರಂಗಮಂದಿರದಲ್ಲಿ ಇಡಲಾಗುತ್ತದೆ. ಸಂಜೆ 5ಕ್ಕೆ ರೋಟರಿ ಚಿತಗಾರದಲ್ಲಿ ಸಂಸ್ಕಾರ ಕಾರ್ಯ ನಡೆಯಲಿದೆ ತಿಳಿದುಬಂದಿದೆ.
Discussion about this post