ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮೀನುಗಾರಿಕಾ ಇಲಾಖೆ ವತಿಯಿಂದ ತುಂಗಾ ನದಿಯಲ್ಲಿ ಮೀನುಗಳ ಸಂತತಿ ಅಭಿವೃದ್ಧಿಗಾಗಿ 2.50 ಲಕ್ಷ ಮೀನು ಮರಿಗಳನ್ನು ಭಿತ್ತನೆ ಮಾಡಲಾಗಿದೆ.

ತುಂಗಾ ನದಿ ಮೀನುಗಾರಿಕೆಯನ್ನು ಅವಲಂಭಿಸಿದವರಿಗೆ ಮೀನುಗಳ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮೀನುಗಾರಿಕಾ ಇಲಾಖೆ ಮೀನುಮರಿ ಉತ್ಪಾದನಾ ಕೇಂದ್ರದಿಂದ 2.50ಲಕ್ಷ ಸಾಮಾನ್ಯ ಗೆಂಡೆ ಮೀನು ಮರಿಗಳನ್ನು ಗೊಂದಿಚಟ್ನಳ್ಳಿ, ಮೇಲಿನ ಹನಸವಾಡಿ, ಬುಳ್ಳಾಪುರ, ಬೇಡರಹೊಸಳ್ಳಿ ಮತ್ತು ಹೊಳಲೂರಿನಲ್ಲಿರುವ ತುಂಗಾ ನದಿಯ ಮಡುಗಳಲ್ಲಿ ಬುಧವಾರ ಬಿತ್ತನೆ ಮಾಡಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಷಡಕ್ಷರಿ ಜಿ.ಎಸ್. ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















