ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಜಿಲ್ಲೆಯ ನೂತನ ಎಸ್’ಪಿ ಆಗಿ ಬಿ. ನಿಖಿಲ್ ಅವರನ್ನು ನಿಯೋಜಿಸಲಾಗಿದೆ.
ರಾಜ್ಯದ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಇದರಲ್ಲಿ ಮಿಥುನ್ ಕುಮಾರ್ ಅವರನ್ನೂ ಸಹ ವರ್ಗಾವಣೆ ಮಾಡಿದೆ.
ಶಿವಮೊಗ್ಗದಿಂದ ವರ್ಗಾವಣೆ ಮಾಡಲಾಗಿರುವ ಮಿಥುನ್ ಕುಮಾರ್ ಅವರನ್ನು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಹಾಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ. ನಿಖಿಲ್ ಅವರನ್ನು ಶಿವಮೊಗ್ಗ ಎಸ್’ಪಿ ಆಗಿ ನಿಯೋಜಿಸಲಾಗಿದೆ.
2017ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ನಿಖಿಲ್ ಅವರು ರಾಯಚೂರು, ಕೋಲಾರದಲ್ಲಿ ಕೆಲಸ ಮಾಡಿ ಈಗ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದಾರೆ.
ಜಿ.ಕೆ. ಮಿಥುನ್ ಕುಮಾರ್ ಅವರು 2022 ಅಕ್ಟೋಬರ್ 5ರಂದು ಶಿವಮೊಗ್ಗ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು.
ಮಿಥುನ್ ಕುಮಾರ್ ಅವರು ಎಸ್’ಪಿಯಿಂದ ಡಿಸಿಪಿ ರ್ಯಾಂಕ್’ಗೆ ಬಡ್ತಿ ಪಡೆದು ವರ್ಗವಾಗಿದ್ದಾರೆ.
ಇನ್ನು ರಾಜ್ಯದಲ್ಲಿ ಒಟ್ಟು 23 ಜನ ಡಿಐಜಿ ಸ್ಥಾನಕ್ಕೆ, ಡಿಐಜಿಯಿಂದ ಐಜಿಪಿಗೆ ಇಬ್ಬರು, ಅಡಿಷನಲ್ ಎಸ್’ಪಿಯಿಂದ ಎಸ್’ಪಿ ಆಗಿ ಇಬ್ಬರು, ಎಸ್’ಪಿ ಮತ್ತು ಡಿಸಿಪಿ ಆಗಿ 20 ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















