ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಲಾಗಿರುವ ರಂಗ ದಸರಾ ಭಾಗವಾಗಿ, ಸೆ. 29ರಿಂದ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ.
ಸೆ. 29 ಮತ್ತು 30 ರಂದು ಕುವೆಂಪು ರಂಗ ಮಂದಿರ ಹಾಗೂ ಅ.1, 2 ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದ್ದು, ರಾಜ್ಯದಾದ್ಯಂತದಿಂದ ಒಟ್ಟು 28 ತಂಡಗಳು ಆಗಮಿಸಲಿದೆ. ಈ ಪೈಕಿ ಸಮಯ ಹಾಗೂ ಸ್ಥಳದ ಲಭ್ಯತೆಯ ಆಧಾರದ ಮೇಲೆ 16 ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 30,000, ದ್ವಿತೀಯ ಬಹುಮಾನ 20,000 ಹಾಗೂ ತೃತೀಯ ಬಹುಮಾನ 15,000ಗಳ ನಗದು ಪುರಸ್ಕಾರ ಜೊತೆಗೆ ಚಾಮುಂಡೇಶ್ವರಿ ಟ್ರೋಫಿ ನೀಡಲಾಗುವುದು. ಇದಲ್ಲದೇ ಶ್ರೇಷ್ಟ ನಟ, ಶ್ರೇಷ್ಟ ನಟಿ ಹಾಗೂ ಶ್ರೇಷ್ಟ ನಿರ್ದೇಶನ ವಿಭಾಗಗಳಿಗೂ ನಗದು ಪುರಸ್ಕಾರವಿದೆ.

ಪ್ರದರ್ಶಿಸಲ್ಪಡುವ ನಾಟಕಗಳು:
ಸೆ. 29ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 4ರಿಂದ ಬೆಂಗಳೂರಿನ ಉದಯ ಕಲಾ ನಿಕೇತನ ತಂಡದಿಂದ ಬ್ಲಾಕ್ ಔಟ್, ತೆಕ್ಕಟ್ಟೆಯ ಕಲಾಶಕ್ತಿ ಕಲಾ ತಂಡದಿಂದ ಆಟಗಾರ, ಬಳ್ಳಾರಿಯ ಧಾತ್ರಿ ಸಿರಿಗೆರೆ ತಂಡದ ರಾಜೇಂದ್ರ ಕಾರಂತ್ ರಚನೆಯ ದಾವಣಗೆರೆ ಭೀಮೇಶ್ ನಿರ್ದೇಶನದ ಮುದ್ದಣ್ಣನ ಪ್ರಮೋಷನ್ ಪ್ರಸಂಗ, ನಾಟಕಗಳು ಪ್ರದರ್ಶನ ಕಾಣಲಿವೆ.

ಅ. 01ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಸಂಜೆ 4.00ರಿಂದ ಬೆಂಗಳೂರಿನ ಶಾರದಾ ಕಲಾ ನಿಕೇತನ ತಂಡದ ಹೋಂ ರೂಲ್, ಸಂಜೆ 5.30ರಿಂದ ಬೆಂಗಳೂರಿನ ಪ್ರವರ ಥಿಯೇಟರ್ ತಂಡದ ಬೆಗ್ ಬಾರೋ ಅಳಿಯ, ಬೆಂಗಳೂರಿನ ರಂಗ ಪಯಣ ತಂಡದ ಬಿದ್ದೂರಿನ ಬಿಗ್ ಬೆನ್ ಹಾಗೂ ರಂಗ ಸಂಗಮ ತಂಡದ ಕೃಷ್ಣ ರಾಯಭಾರ ನಾಟಕಗಳು ಪ್ರದರ್ಶನ ಕಾಣಲಿವೆ.



















Discussion about this post