ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊರವಲಯದಲ್ಲಿ ದೇವಕಾತಿಕೊಪ್ಪದ ಸಮೀಪದ ಕೆಐಡಿಬಿ ಲೇ-ಔಟ್ನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಕ್ಷುಲಕ ಕಾರಣಕ್ಕೆ ಜಗಳವಾಗಿದ್ದು, ಇಬ್ಬರು ಯುವಕರು ಲಾರಿ ಡ್ರೈವರ್ ಸುಧಾಕರ ಎಂಬಾತನ ತಲೆಗೆ ಬ್ಯಾಟ್ ನಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ :
ಲಾರಿ ಚಾಲಕ ದೇವಕಾತಿಕೊಪ್ಪದ ನಿವಾಸಿ ಸುಧಾಕರ್ ಭಾನುವಾರ ಕೆಐಡಿಬಿ ಲೇಔಟ್ನಲ್ಲಿ ಊರಿನ ಹುಡುಗರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭದಲ್ಲಿ ಕ್ಷುಲಕ ವಿಚಾರಕ್ಕೆ ಗಲಾಟೆಯಾಗಿದ್ದು, ಇಬ್ಬರು ಯವಕರು ಸುಧಾಕರ್ ಮೇಲೆ ದಾಳಿ ಮಾಡಿದ್ದಾರೆ. ಒಬ್ಬ ಯುವಕ ಬ್ಯಾಟ್ನಿಂದ ಸುಧಾಕರ್ ತಲೆಗೆ ಹೊಡೆದಿದ್ದು, ಮತ್ತೊಬ್ಬ ಯುವಕ ಕೈಯಿಂದ ಮುಖಕ್ಕೆ ಗುದ್ದಿದ್ದಾನೆ ಎಂದು ಆರೋಪಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	





 Loading ...
 Loading ... 
							



 
                
Discussion about this post