ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಲು-ಸಾಲು ಅಭಿವೃದ್ಧಿ ಯೋಜನೆಗಳನ್ನು ಸ್ವಕ್ಷೇತ್ರಕ್ಕೆ ತಂದಿರುವ ಕ್ರಿಯಾಶೀಲ ಸಂಸದ ಬಿ.ವೈ. ರಾಘವೇಂದ್ರ ಅವರ 50ನೇ ಜನ್ಮದಿನ ಆಗಸ್ಟ್ 16 ಆಚರಿಸಬೇಕೆಂದು ಇದಕ್ಕಾಗಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ DSArun ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿ.ವೈ. ರಾಘವೇಂದ್ರ BYRaghavendra ಅವರು, ಆಗಸ್ಟ್ 16ರಂದು 50ನೇ ವರ್ಷಕ್ಕೆ ಕಾಲಿಡುತ್ತಿದ್ದು, ಇದರ ಅಂಗವಾಗಿ ಅರ್ಥಪೂರ್ಣವಾಗಿ ಇವರ ಜನ್ಮದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಅಂದು ಮುಂಜಾನೆ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ಪಿಇಎಸ್ ಕಾಲೇಜಿನಲ್ಲಿ ಹರಟೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ತಂದೆಗೆ ತಕ್ಕ ಮಗ ಬಿವೈಆರ್
ರಾಜ್ಯ ಕಂಡ ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಕ್ಕ ಮಗನಾಗಿ ಬಿ.ವೈ ರಾಘವೇಂದ್ರ ಗುರುತಿಸಿಕೊಂಡಿರುವುದು ವಿಶೇಷವಾಗಿದೆ. ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ತಂದೆಯವರ ಹಾದಿಯಲ್ಲೇ ಇವರು ಸಹ ಸಾಗಿದ್ದಾರೆ. ಈ ವಿಚಾರದಲ್ಲಿ ದೇಶದಲ್ಲೇ ನಂ.1 ಸಂಸದ ಎಂಬ ಖ್ಯಾತಿಯನ್ನು ಗಳಿಸಿರುವುದು ನಮ್ಮ ಶಿವಮೊಗ್ಗಕ್ಕೆ ಹೆಮ್ಮೆಯ ವಿಚಾರ ಎಂದರು.
2007ರಲ್ಲಿ ಪುರಸಭೆಗೆ ಆಯ್ಕೆಯಾದ ರಾಘವೇಂದ್ರ ಅವರು, 2009ರಲ್ಲಿ ಮಾಜಿ ಎಸ್. ಬಂಗಾರಪ್ಪ ವಿರುದ್ಧ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದರು. 2013ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿ.ಎಸ್. ಯಡಿಯೂರಪ್ಪ ಸಂಸದರಾಗಿ ಆಯ್ಕೆಯಾಗಿ ರಾಘವೇಂದ್ರ ವಿಧಾನಸಭೆಗೆ ಕಾಲಿಡುತ್ತಾರೆ. 2018ರಲ್ಲಿ ನಡೆದ ಮರು ಚುನಾವಣೆಯಲ್ಲಿ 52,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ ಎರಡು ಕಾಲು ಲಕ್ಷ ಮತಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಚುನಾವಣೆಗಳ ಗೆಲುವಿನ ಹಾದಿಯಲ್ಲೂ ಸಹ ಇವರು ತಂದೆಯನ್ನೇ ಅನುಸರಿಸಿರುವುದು ವಿಶೇಷ.
ರಾಘವೇಂದ್ರ ಅವರು ಸಂಸದರಾದ ನಂತರ ಶಿವಮೊಗ್ಗ ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯಾಗಿದೆ ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರು, ಅಂತರರಾಜ್ಯ ಸಂಪರ್ಕಗಳು ಸೇರಿದಂತೆ ಮಲೆನಾಡಿನ ಪ್ರಯಾಣಿಕರಿಗಾಗಿ ಸುಮಾರು 25ಕ್ಕೂ ಹೆಚ್ಚು ರೈಲುಗಳು ಇಂದು ಸಂಚರಿಸುತ್ತಿವೆ. ಇದಲ್ಲದೆ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ರೈಲ್ವೆ ಮೇಲ್ಸೇತುವೆಗಳು, ವಿದ್ಯಾನಗರದಲ್ಲಿ ವೃತ್ತಾಕಾರದ ರೈಲ್ವೇ ಮೇಲ್ಸೇತುವೆ, ಸಿಗಂಧೂರಿನಲ್ಲಿ ಅತ್ಯಾಧುನಿಕ ಸೇತುವೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಕೆ. ಶಿವಮೊಗ್ಗದ ವಿಮಾನ ನಿಲ್ದಾಣ ಸಕಾರ, ತ್ಯಾವರೆಕೊಪ್ಪ ಸಿಂಹಧಾಮ, ಜೋಗ, ಕೊಡಚಾದ್ರಿ ರೋಪ್ ವೇ ಸೇರಿದಂತೆ ಕ್ಷೇತ್ರದಾದ್ಯಂತ ಪ್ರವಾಸೋದ್ಯಮ ಅಭಿವೃದ್ಧಿ, ಶಿವಮೊಗ್ಗದಲ್ಲೇ ಪಾಸ್ಪೋರ್ಟ್ ಸೇವಾಕೇಂದ್ರ ಸ್ಥಾಪನೆ, ಕೇಂದ್ರೀಯ ವಿದ್ಯಾಲಯ ಸ್ಥಾಪನೆ, ಮಲೆನಾಡಿನ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಕಾಡುತ್ತಿದ್ದ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಸೇರಿದಂತೆ ಸಾಲು-ಸಾಲು ಅಭಿವೃದ್ಧಿ ಕಾರ್ಯಗಳು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ರಾಘವೇಂದ್ರ ಅವರಿಂದಾಗಿ ಸಾಕಾರಗೊಂಡಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಎಮ್ಎಲ್ಸಿ ಎಸ್. ರುದ್ರೇಗೌಡ, ಜಿಲ್ಲಾ ಬಿಜೆಪಿ ಪ್ರಮುಖರಾದ ಡಾ. ಧನಂಜಯ ಸರ್ಜಿ, ಎಸ್.ಎಸ್. ಜ್ಯೋತಿ ಪ್ರಕಾಶ್, ಬಳ್ಳೆಕೆರೆ ಸಂತೋಷ್, ಹೆಚ್.ಸಿ. ಮಾಲತೇಶ್, ಅಣ್ಣಪ್ಪ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post