ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋರೋನ ಹಾಗೂ ಅತಿವೃಷ್ಟಿಯ ಅನಾಹುತದಿಂದ ಕಂಗೆಟ್ಟಿದ್ದ ರಾಜ್ಯ ಆರ್ಥಿಕ ಸ್ಥಿತಿ ಸುಧಾರಿಸಿ ಇದೀಗ ತೆರಿಗೆ ಇಲ್ಲದ ಬಜೆಟ್ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿನಂದನಾರ್ಹರು ಎಂದು ಟೂರಿಸಂ ಟಾಸ್ಕ್ ಪೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಿಳಾ ಅಭಿವೃದ್ಧಿಪರ ಚಿಂತನೆ, ಆರೋಗ್ಯ ಹಾಗೂ ಶಿಕ್ಷಣ, ಕೈಗಾರಿಕಾಭಿವೃದ್ಧಿಗಳಿಗೆ ಪ್ರಾಶಸ್ತ್ಯ ನೀಡಿ, ಸರ್ವಾಂಗೀಣ ಅಭಿವೃದ್ಧಿ ಸರ್ವರಿಗೆ ಸಮಪಾಲು ಎನ್ನುವ ಆಶಯದೊಂದಿಗೆ ಮಂಡಿಸಿದ ವಿಶೇಷ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಕ್ಷೇತ್ರದ ಹಿತ ಚಿಂತನೆಯೊಂದಿಗೆ ಪ್ರವಾಸೋದ್ಯಮ ಬಲಪಡಿಸಲಾಗಿದೆ. ಆರ್ಥಿಕ ಅಭಿವೃದ್ಧಿ ಹಾಗೂ ಉದ್ಯೋಗ ಹೆಚ್ಚಳ ಮಾಡುವ ಆಶಯದೊಂದಿಗೆ ಕರಾವಳಿ, ಉತ್ತರ ಕರ್ನಾಟಕ, ಬೆಂಗಳೂರು ಸುತ್ತಮುತ್ತ ಪ್ರವಾಸಿತಾಣಗಳ ಅಭಿವೃದ್ಧಿಗಾಗಿ 500 ಕೋಟಿ ರೂ. ಕಾದಿರಿಸಿದ್ದು, ವಿಶೇಷವಾಗಿದೆ. ಇದರಿಂದಾಗಿ ಕರಾವಳಿ ಪ್ರವಾಸೋದ್ಯಮ, ಧಾರ್ಮಿಕ ತಾಣಗಳ ಸುಧಾರಣೆ ಹಾಗೂ ಪರಿಸರ ಪ್ರವಾಸೋದ್ಯಮ ಕ್ಷೇತ್ರ ಉತ್ತಮಪಡಿಸಲು, ಆಕರ್ಷಣೀಯವಾಗಿಸಲು ನೂತನ ಪ್ರವಾಸೀ ನೀತಿಯ ಆಧಾರದ ಮೇಲೆ 500 ಕೋಟಿ ರೂ. ನೀಡಿದ್ದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗಿ ನಮ್ಮ ರಾಜ್ಯ ನಂಬರ್ ಒನ್ ಆಗಬೇಕೆಂಬ ಮುಖ್ಯಮಂತ್ರಿಗಳ ಆಶಯದಂತೆ, ಈ ಕಷ್ಟ ಕಾಲದಲ್ಲೂ ತೆರಿಗೆ ಇಲ್ಲದ ಬಜೆಟ್ ರೂಪಿಸಿ ಪ್ರವಾಸಿ ಕ್ಷೇತ್ರಾಭಿವೃದ್ಧಿಗೆ 500 ಕೋಟಿ ರೂ. ತೆಗೆದಿರಿಸಿರುವುದಕ್ಕಾಗಿ ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಪರವಾಗಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹಾಗೂ ವೈಯಕ್ತಿಕವಾಗಿ ತಾವು ಮುಖ್ಯಮಂತ್ರಿ ಅವರನ್ನು ಅಭಿನಂದಿಸುತ್ತೇನೆ. ಸಂಕಟ ಸಮಯವನ್ನು ಸದವಕಾಶ ಎಂದು ಎದುರಿಸುವ ಅವರ ನೀತಿ ಎಂದಿನಂತೆ ಈ ಬಜೆಟ್ ಮಂಡನೆಯಲ್ಲೂ ಎದ್ದು ಕಾಣುವ ಅಂಶವಾಗಿದೆ ಎಂದು ಶ್ಲಾಘಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಪರವಾಗಿ ಜೋಗ ಅಭಿವೃದ್ಧಿ, ಉಡುತಡಿ, ಅಂಬುತೀರ್ಥ, ಕಲ್ಲೂರು ಮಂಡಳಿ ಸಾಹಸ ಪ್ರವಾಸೋದ್ಯಮಗಳಿಗೆ ಅಗತ್ಯ ಹಣ ಮಂಜೂರು ಮಾಡಿಸಿ ಕಾಮಗಾರಿ ನಡೆಸಲು ಶ್ರದ್ಧೆಯಿಂದ ಶ್ರಮವಹಿಸಿದ ನಮ್ಮ ನೆಚ್ಚಿನ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಅಭನಂದಿಸುತ್ತೇನೆ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post