ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೂಡಲಿ ಶೃಂಗೇರಿ ಮಹಾಸಂಸ್ಥಾನದ 72ನೇ ಜಗದ್ಗುರುಗಳಾದ ಶ್ರೀಅಭಿನವ ಶಂಕರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಆ.23ರಿಂದ ಕಾರ್ತಿಕ ಹುಣ್ಣಿಮೆಯವರೆಗೆ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣವನ್ನು ಆಯೋಜಿಸಲಾಗಿದೆ ಎಂದು ಕೂಡಲಿ ಕ್ಷೇತ್ರದ ವೇದ ಬ್ರಹ್ಮ ಅಚ್ಯುತ ಅವಧಾನಿ ಹೇಳಿದರು.
ಅವರು ಇಂದು ಕೂಡಲಿಯ ಶೃಂಗೇರಿ ಮಹಾಸಂಸ್ಥಾನ ಮಠದಲ್ಲಿ #Kudali Shringeri Mahasamsthana Mutt ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾರಾಯಣವು ತುಂಬ ವಿಶಿಷ್ಟವಾದದ್ದು, ಅದರಲ್ಲೂ 10 ಗ್ರಂಥಗಳ ಪಾರಾಯಣ ಹಾಗೂ ಋಗ್ವೇದ ಸಹಿತದಲ್ಲಿರುವ ಎಲ್ಲಾ 10552 ಋಕ್ಕುಗಳಿಗೆ ಘನಪಾಠದ ಪಾರಾಯಣವನ್ನು ಮಾಡುವ ಕ್ರಮವು ಅತ್ಯಂತ ಪುಣ್ಯಪ್ರದವಾಗಿರುತ್ತದೆ. ಲೋಕಕಲ್ಯಾಣಕ್ಕಾಗಿ ಈ ಪಾರಾಯಣವನ್ನು ಆಯೋಜಿಸಲಾಗಿದ್ದು, ಇದರಿಂದ ಪ್ರಕರ ಬುದ್ಧಮತ್ತೆ ಸ್ಮರಣಶಕ್ತಿ ಹಾಗೂ ವಿದ್ವತ್ತಿನ ಪರೀಕ್ಷೆ ಕೂಡ ಆಗಿದೆ ಎಂದರು.

Also read: ಬೆಂಗಳೂರು | ಜಯನಗರ ರಾಯರ ಮಠದಲ್ಲಿ ಆರಾಧನಾ ಸಂಭ್ರಮ | ರಾಜಬೀದಿ ಉತ್ಸವದ ವೈಭವ ಹೇಗಿತ್ತು?
ಈ ಪಾರಾಯಣದ ಮೂಲಕ ಸಾಮಾಜದಲ್ಲಿ ವಿದ್ವತ್ ಪರಂಪರೆಯನ್ನು ತಿಳಿಸುವ ಮತ್ತು ಅದಕ್ಕೊಂದು ವಿಸ್ತಾರ ರೂಪ ಕಲ್ಪಿಸುವ ಹಿನ್ನಲೆಯಲ್ಲಿ ಶ್ರೀಗಳು ಇದನ್ನು ಆಯೋಜಿಸಿದ್ದಾರೆ. ಮತ್ತು ಇದಕ್ಕಾಗಿಯೇ ಪಾರಾಯಣ ಮಾಡುವ ವಿದ್ವಂಸರುಗಳಿಗೆ 10 ಲಕ್ಷ ರೂ.ಗಳ ಪ್ರೋತ್ಸಾಹ ಕೂಡ ನೀಡಲಿದ್ದಾರೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post