ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪರೋಪಕಾರಂ ಸದಸ್ಯರೂ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಳ, ಸಜ್ಜನ, ಅಧಿಕಾರಿಯಾದ ರೇವಣಸಿದ್ದಯ್ಯ ಹಿರೇಮಠ್ ರವರಿಗೆ ಆರ್ಎಫ್ಓ ಆಗಿ ಭಡ್ತಿ ನೀಡಲಾಗಿದೆ. 14 ವರ್ಷಗಳ ಕಾಲ ಶಿವಮೊಗ್ಗ ಅರಣ್ಯ ವನ್ಯಜೀವಿ ಜಾಗೃತ ದಳ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದು ಇದೀಗ ಸಾಗರ ವಲಯಕ್ಕೆ ಭಡ್ತಿಯಾಗಿ ವರ್ಗಾವಣೆಯಾಗಿದ್ದಾರೆ.
ಗಿಡ-ಮರ, ಪ್ರಾಣಿ-ಪಕ್ಷಿ, ಅರಣ್ಯ ಹಾಗೂ ಪರಿಸರದ ಬಗ್ಗೆ ಅಪಾರ ಅನುಭವವಿರುವ ಇವರು ಪರೋಪಕಾರಂ ತಂಡಕ್ಕೆ ಉತ್ತಮ ಮಾರ್ಗದರ್ಶಕರೂ ಆಗಿದ್ದಾರೆ. ಇವರ ಮುಂದಿನ ಹೆಚ್ಚಿನ ಜವಾಬ್ದಾರಿ ಸುಗಮವಾಗಿ ಸಾಗಲಿ, ಇಲಾಖೆಗೆ ಇನ್ನಷ್ಟು ಹೆಸರು ತರಲಿ ಎಂದು ಪರೋಪಕಾರಂ ಸಂಘಟನೆ ಹಾರೈಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post